Asianet Suvarna News Asianet Suvarna News

ಮುಸ್ಲಿಮರ ವಿರುದ್ಧ ಕೆಂಡ ಕಾರದಿರಿ: ಕೇಸರಿ ಕಲಿಗಳಿಗೆ 'ನಮೋ' ಕಟ್ಟಪ್ಪಣೆ

ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಮಂತ್ರ ಜಪಿಸಿದ್ದು, ಮುಸ್ಲಿಮರ ವಿರುದ್ಧ ಕೆಂಡ ಕಾರದಿರಿ ಎಂದು ಕೇಸರಿ ಕಲಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ.
 

ಹಿಂದುತ್ವ ಅನ್ನುವುದು ಬಿಜೆಪಿಯ ಸಿದ್ಧಾಂತ, ಅದು ಕೇಸರಿ ಪಡೆಯ ವಿಜಯ ಮಂತ್ರವು ಹೌದು. ಮುಸ್ಲಿಂ ಸಮುದಾಯಕ್ಕೂ, ಬಿಜೆಪಿಗೂ ಎಣ್ಣೆ-ಸೀಗೆಕಾಯಿ ಸಂಬಂಧ ಇದೆ. ಮುಸ್ಲಿಮರು ಬಿಜೆಪಿಯ ವೋಟರ್ಸ್‌ ಅಲ್ಲ, ವೋಟ್‌ ಬ್ಯಾಂಕು ಅಲ್ಲ. ಆದ್ರೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಮಂತ್ರ ಜಪಿಸಿದ್ದಾರೆ. ಎಂಟು ವರ್ಷಗಳಿಂದ ಪ್ರಧಾನಿ ಪಟ್ಟದಲ್ಲಿ ಕುಳಿತಿರುವ ಮೋದಿ ಹತ್ತಾರು ಶಾಕ್‌'ಗಳನ್ನು ಕೊಡುತ್ತಾ ಬಂದಿದ್ದು, ಈಗ ಕೇಸರಿ ಕಲಿಗಳೇ ಬೆಚ್ಚಿ ಬೀಳುವ ಶಾಕ್‌ ನೀಡಿದ್ದಾರೆ. ಮೋದಿ ಪಠಿಸಿರುವ ಮುಸ್ಲಿಂ ಮಂತ್ರದ ಹಿಂದಿರುವ ರಹಸ್ಯ ಏನು ಎಂಬ ಡಿಟೇಲ್ಸ್ ಈ ವಿಡಿಯೋದಲ್ಲಿದೆ.

'ಹಿಂದೂಗಳಿಗೆ ಮಾತ್ರ ವ್ಯಾಪಾರ ಅವಕಾಶ': ಕದ್ರಿಯ ದೇವಸ್ಥಾನದಲ್ಲಿ ಬ್ಯಾನರ್

Video Top Stories