Asianet Suvarna News Asianet Suvarna News

ಶನಿವಾರ ಜೆಪಿ ಭವನದಲ್ಲಿ ಶಾಸಕರ ಸಭೆ: ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಜೊತೆ ಮೈತ್ರಿ..?

ದುಬೈನಿಂದ ವಾಪಸ್ಸಾಗ್ತಿದ್ದ ಹಾಗೆ ಕುಮಾರಸ್ವಾಮಿ ಆ್ಯಕ್ಟೀವ್
ಶನಿವಾರ ಜೆಪಿ ಭವನದಲ್ಲಿ ಸಭೆ ಕರೆದ ಮಾಜಿ ಸಿಎಂ ಹೆಚ್‌ಡಿಕೆ
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಶಾಸಕರ ಸಭೆ

First Published Nov 2, 2023, 11:56 AM IST | Last Updated Nov 2, 2023, 11:56 AM IST

ಇಂದು ದುಬೈನಿಂದ ಮಾಜಿ ಸಿಎಂ ಕುಮಾರಸ್ವಾಮಿ ವಾಪಸ್‌ ಆಗಲಿದ್ದಾರೆ. ದುಬೈನಿಂದ ವಾಪಸ್ಸಾಗ್ತಿದ್ದ ಹಾಗೇ ಕುಮಾರಸ್ವಾಮಿ (HD Kumaraswamy)ಆ್ಯಕ್ಟೀವ್ ಆಗಿದ್ದು, ಶನಿವಾರ ಜೆಪಿ ಭವನದಲ್ಲಿ ಸಭೆ(Meeting) ಕರೆದಿದ್ದಾರೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಸಲ ಶಾಸಕರ ಸಭೆ ನಡೆಸುತ್ತಿದ್ದಾರೆ. ಪಕ್ಷ ಸಂಘಟನೆ, ಚುನಾವಣಾ ತಯಾರಿ, ಮೈತ್ರಿ ವಿಚಾರ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಮೈತ್ರಿ ಯಿಂದ ಕಾರ್ಯಕರ್ತರಲ್ಲಿ ಇರುವ ಭಾವನೆ ಅರಿಯಲು ಹೆಚ್‌ಡಿಕೆ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ. ಶಾಸಕರ ಕ್ಷೇತ್ರದಲ್ಲಿ ಇರುವ ಪರಿಸ್ಥಿತಿ ಬಗ್ಗೆ ಅವಲೋಕಿಸಲು ಸೂಚನೆ ನೀಡಲಾಗಿದೆ. ಕೋರ್ ಕಮಿಟಿ ರಾಜ್ಯಾದ್ಯಂತ ಮಾಡುತ್ತಿರುವ ಪ್ರವಾಸದ ಮಾಹಿತಿ ಸೇರಿದಂತೆ ರಾಜ್ಯ ಸರ್ಕಾರದ ವೈಫಲ್ಯ ಬಗ್ಗೆ ಪ್ರಬಲ ಹೋರಾಟ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗುವುದು.

ಇದನ್ನೂ ವೀಕ್ಷಿಸಿ:  ಸಚಿವರಿಗೆ ಸಿಕ್ಕಿದ ಅನುದಾನ.. ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ..!