
ರಾಜಕೀಯ ರೀ ಎಂಟ್ರಿ ಸುಳಿವು ನೀಡಿದ ಗಣಿಧಣಿ: ಬಿಜೆಪಿ ವಿರುದ್ಧ ಜನಾರ್ದನ ರೆಡ್ಡಿ ಕಿಡಿ
ಮಾಜಿ ಸಚಿನ ಜನಾರ್ದನ ರೆಡ್ಡಿ ರಾಜಕೀಯ ರೀ ಎಂಟ್ರಿ ಬಗ್ಗೆ ಹಲವು ಸುಳಿವುಗಳನ್ನು ಕೊಟ್ಟಿದ್ದು, ಹಾಗೆನೇ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಜನಾರ್ದನ ರೆಡ್ಡಿ 12 ವರ್ಷಗಳ ನಂತರ ಈಗ ಮತ್ತೆ ರಾಜಕೀಯ ಮಾತುಗಳನ್ನು ಆಡುತ್ತಿದ್ದಾರೆ. ನಾನು ಇಲ್ಲಿವರೆಗೂ ಕಾದಿರೋದು ಕೋರ್ಟ್ ಆದೇಶ ಪಾಲಿಸುವುದಕ್ಕೆ ಎಂದು ಹೇಳಿದ್ದಾರೆ. ಸುಮ್ಮನೆ ಕೂತಿದ್ದೇನೆ ಎಂದ ಮಾತ್ರಕ್ಕೆ ನನ್ನಿಂದ ಏನೂ ಆಗಲ್ಲ ಎಂದಲ್ಲ, ಹುಲಿ ಯಾವತ್ತಿದ್ರೂ ಹುಲಿನೇ ಎಂದು ರೆಡ್ಡಿ ಹೇಳಿದ್ದಾರೆ. ಇನ್ನು ವೇದಿಕೆ ಸಿಕ್ಕಾಗಲೆಲ್ಲಾ ಬಿಜೆಪಿ ವಿರುದ್ಧ ಗುಡುಗುತ್ತಿದ್ದು, ಇದರಿಂದ ಅವರ ಸ್ನೇಹಿತ ಶ್ರೀರಾಮುಲು ತುಂಬಾನೇ ಕಸಿವಿಸಿಗೆ ಒಳಾಗುತ್ತಿದ್ದಾರೆ.
Add Asianetnews Kannada as a Preferred Source

Uttara Kannada News: ಶಿರಸಿ ನಗರದಲ್ಲಿ ಗುಡ್ಡವಾಗಿ ಮಾರ್ಪಟ್ಟ ತ್ಯಾಜ್ಯ ರಾಶಿ!