
HD Kumaraswamy: ಎಚ್ಡಿಕೆ ಬಿಡದಿ ತೋಟದಲ್ಲಿ ಹೊಸತೊಡಕು ಸಂಭ್ರಮ: ಬಿಜೆಪಿ-ಜೆಡಿಎಸ್ ಒಕ್ಕಲಿಗ ನಾಯಕರಿಗೆ ಭರ್ಜರಿ ಬಾಡೂಟ !
ಜೆಡಿಎಸ್-ಬಿಜೆಪಿ ಸಮ್ಮಿಲನದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ
ಆರ್ ಅಶೋಕ್, ಅಶ್ವತ್ಥನಾರಾಯಣ್ ಸೇರಿ ಒಕ್ಕಲಿಗ ಮುಖಂಡರು
ಇತರೆ ಭಾಗದ ಒಕ್ಕಲಿಗ ಶಾಸಕರು ಕೂಡ ಹೊಸತೊಡಕಿನಲ್ಲಿ ಭಾಗಿ
ಮಂಡ್ಯದಲ್ಲಿ ಒಕ್ಕಲಿಗರ ಮತ ಕ್ರೋಢಿಕರಣಕ್ಕೆ ಸ್ಕೆಚ್ ಹಾಕಿರುವ ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy). ಹಬ್ಬದ ನೆಪದಲ್ಲಿ ಒಕ್ಕಲಿಗ(Okkaliga) ಮತ ಸೆಳೆಯಲು ರಣತಂತ್ರ ಎಣೆದಿದ್ದಾರೆ. ಹಬ್ಬದ ನೆಪದಲ್ಲಿ ಒಕ್ಕಲಿಗ ಮತ ಸೆಳೆಯಲು ರಣತಂತ್ರ ರೂಪಿಸಲಾಗಿದೆ. ಮಂಡ್ಯ(Mandya)-ಬೆಂಗಳೂರು ಗ್ರಾಮಾಂತರ(Bengaluru Rural) ಕ್ಷೇತ್ರದ ಮೇಲೆ ಬಿಜೆಪಿ(BJP)-ಜೆಡಿಎಸ್(JDS) ಕಣ್ಣಿಟ್ಟಿದ್ದು, ಈ ಎರಡು ಪಕ್ಷಗಳ ಸಮ್ಮಿಲನದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಬಲು ಜೋರಾಗಿದೆ. ಒಕ್ಕಲಿಗ ನಾಯಕರ ಜತೆ ಯುಗಾದಿ ಮರುದಿನದ ಹೊಸತೊಡಕು ನಡೆಯಲಿದೆ. ಮಂಡ್ಯ ಭಾಗದ ಪ್ರಮುಖ ನಾಯಕರಿಗೂ ಹಬ್ಬಕ್ಕೆ ಆಹ್ವಾನ ನೀಡಲಾಗಿದೆ. ಬೆಳಗ್ಗೆ ಎಂಟೂವರೆಗೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ನಂತರ ಬಿಡದಿ ತೋಟದ ಮನೆಗೆ ಮುಖಂಡರು ತೆರಳಲಿದ್ದಾರೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಭದ್ರಕೋಟೆ ಮತ್ತೆ ಕೈ ವಶವಾಗುತ್ತಾ..? ಹೇಗಿದೆ ಅಮೇಥಿ ಚುನಾವಣಾ ರಾಜಕೀಯದ ಚರಿತ್ರೆ..?