ಚನ್ನಪಟ್ಟಣ ಅಖಾಡಕ್ಕೆ ಇಳಿಯಲು ರೆಡಿಯಾದ್ರಾ ಡಿಕೆಶಿ? ದಳಪತಿಗೆ ಸಡ್ಡು ಹೊಡೆಯಲು ಅಖಾಡಕ್ಕೆ ಇಳಿತಾರಾ?

ಚನ್ನಪಟ್ಟಣ ಬೈ ಎಲೆಕ್ಷನ್‌ ಅಖಾಡ ಜೋರಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್‌ ಸ್ಪರ್ಧೆ ಮಾಡ್ತಾರೆ ಎಂಬ ಸುಳಿವು ಸಿಕ್ತಿದೆ.

First Published Jun 19, 2024, 10:25 AM IST | Last Updated Jun 19, 2024, 10:25 AM IST

ಚನ್ನಪಟ್ಟಣ (Channapatna) ಬೈ ಎಲೆಕ್ಷನ್(By Poll) ಬ್ಯಾಟಲ್ ರೋಚಕ ತಿರುವು ಪಡೆದುಕೊಂಡಿದೆ.ಅಚ್ಚರಿ ಅಭ್ಯರ್ಥಿ ಅಂತಿದ್ದ ಸುರೇಶ್(DK Suresh) ಹೊಸ ಟ್ವಿಸ್ಟ್ ಕೊಟ್ಟಂತೆ ಕಾಣ್ತಿದೆ. ಡಿ.ಕೆ. ಬ್ರದರ್ಸ್ ಹೊಸ ರಣತಂತ್ರ ಹೆಣೆಯುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಡಿಕೆಶಿಯೇ ಸ್ಪರ್ಧೆ ಮಾಡ್ತಾರೆ ಎಂಬ ಸುಳಿವು ಸಿಕ್ತಿದೆ. ಚನ್ನಪಟ್ಟಣ ಗೆದ್ದು ತಮ್ಮನಿಗೆ ಕನಕಪುರ ಬಿಟ್ಟುಕೊಡುಲು ಡಿಸಿಎಂ(DK Shivakumar) ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಲೋಕಸಭೆ ಸೇಡು ತೀರಿಸಿಕೊಳ್ಳಲು ಈ ನಿರ್ಧಾರ ಅಂತಿದ್ರೆ. ಜೊತೆಗೆ ಚನ್ನಪಟ್ಟಣದಿಂದ ಗೆದ್ದು ಸಿಎಂ ಆಗುವ ಡಿ.ಕೆ. ಶಿವಕುಮಾರ್ ಕನಸು ಈಡೇರುತ್ತಾ ಎಂಬ ಚರ್ಚೆ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಪಟ್ಟ ಯಾರಿಗೆ? ಜಿ.ಟಿ.ದೇವೆಗೌಡರಿಗೆ ಪಟ್ಟ ಕಟ್ಟಲು ತೀರ್ಮಾನ?