HDK VS DKShi: ನಾವೇನು ಗೋಡಂಬಿ, ಬಾದಾಮಿ ತಿನ್ನಲು ಸಭೆಗೆ ಕರೆದಿದ್ವಾ? ಎಚ್‌ಡಿಕೆ ಹೇಳಿಕೆಗೆ ಡಿಸಿಎಂ ಡಿಕೆಶಿ ಕೆಂಡಾಮಂಡಲ

ಎಚ್‌ಡಿಕೆ-ಡಿಕೆಶಿ ನಡುವೆ ಬಾದಾಮಿ, ಗೊಡಂಬಿ ಗಲಾಟೆ
ಸಭೆಗೆ ಗೋಡಂಬಿ, ಬಾದಾಮಿ ತಿನ್ನಲು ಹೋಗಬೇಕಿತ್ತಾ? 
ಎಚ್‌ಡಿಕೆ ಓಪನ್ ಡಿಬಿಟ್‌ಗೆ ಬರುವಂತೆ ಡಿಕೆಶಿ ಸವಾಲ್

Share this Video
  • FB
  • Linkdin
  • Whatsapp

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ನಡುವೆ ಬಾದಾಮಿ, ಗೊಡಂಬಿ ಗಲಾಟೆ ನಡೆದಿದೆ. ಸರ್ವ ಪಕ್ಷ ಸಭೆಗೆ (All party meeting) ಗೋಡಂಬಿ, ಬಾದಾಮಿ ತಿನ್ನಲು ಹೋಗಬೇಕಿತ್ತಾ? ಎನ್ನುವ ಮೂಲಕ ಎಚ್‌ಡಿಕೆ ಹೇಳಿಕೆಗೆ ಡಿಸಿಎಂ ಡಿಕೆಶಿ ಕೆಂಡಾಮಂಡಲವಾಗಿದ್ದಾರೆ. ಎಚ್‌ಡಿಕೆ ಯಾವತ್ತೂ ಸಿನಿಮಾ ಸ್ಟೈಲ್‌ನಲ್ಲಿ ಮಾತಾಡ್ತಾರೆ, ನಾವೇನು ಗೋಡಂಬಿ, ಬಾದಾಮಿ ತಿನ್ನಲು ಕರೆದಿದ್ವಾ?, ಹಾಗಿದ್ರೆ ಯಾಕೆ ಜೆಡಿಎಸ್(JDS) ನಾಯಕರನ್ನ ಕಳಿಸಿದ್ರು..? ಎಚ್‌ಡಿಕೆ ಕೇವಲ ರಾಜಕಾರಣ, ಟೀಕೆ ಟಿಪ್ಪಣೆ ಮಾಡ್ತಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ ನನ್ನ ಕಂಡ್ರೆ ಕುಮಾರಸ್ವಾಮಿಗೆ ಅಸೂಹೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ಎಚ್‌ಡಿಕೆ ಓಪನ್ ಡಿಬೆಟ್‌ಗೆ ಬಂದು ಮಾತನಾಡಲಿ ಎಂದು ಸವಾಲ್‌ ಹಾಕಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ವಾಲ್ಮೀಕಿ ನಿಗಮದ ಹಣ ಎಲ್ಲೆಲ್ಲಿಗೆ ಹೋಯ್ತು ? ಯಾರ ಅಕೌಂಟ್‌ಗೆ ಹೋಗಿದೆ ಎಂಬ ಮಾಹಿತಿ ಇಡಿಗೆ ಸಿಕ್ಕಿದೆಯಾ ?

Related Video