
DK Shivakumar: ಕಾಂಗ್ರೆಸ್ಗೆ ಆತ್ಮಸಾಕ್ಷಿಯ ವೋಟು ಹಾಕ್ತಾರೆ, ದುಡ್ಡಿದೆ ಎಂದು ಶಾಸಕರನ್ನ ಬೆದರಿಸಿದ್ರೆ ಆಗಲ್ಲ: ಡಿಕೆಶಿ
ಆತ್ಮಸಾಕ್ಷಿ ಅಂತಾರಲ್ಲ ಆ ವೋಟ್ನನ್ನು ಕಾಂಗ್ರೆಸ್ಗೆ ಹಾಕುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದೋಸ್ತಿ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಶಾಕ್ ಕೊಟ್ಟಿದ್ದಾರೆ. ಕಾಂಗ್ರೆಸ್ಗೆ(Congress) ಆತ್ಮಸಾಕ್ಷಿಯ ವೋಟು ಹಾಕ್ತಾರೆ. ದುಡ್ಡಿದೆ ಎಂದು ಶಾಸಕರನ್ನ ಬೆದರಿಸಿದ್ರೆ ಆಗಲ್ಲ. ಯಾರು ಅಡ್ಡಮತದಾನ(Cross Voting) ಮಾಡ್ತಾರೋ ಗೊತ್ತಾಗುತ್ತೆ. ಯಡಿಯೂರಪ್ಪ , ಅಶೋಕ್ಗೆ ಕೇಳಬೇಕು. ಬಿಜೆಪಿ(BJP)-ಜೆಡಿಎಸ್ನಿಂದ(JDS) ಅಡ್ಡಮತದಾನ ಸುಳಿವನ್ನು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದಾರೆ. ಯಾರು ಯಾರ ಪರ ಮತ ಹಾಕ್ತಾರೋ ? ಯಾರ ವಿರೋಧ ವೋಟ್ ಮಾಡ್ತಾರೋ ?ಬಿ.ಎಸ್.ಯಡಿಯೂರಪ್ಪ , ಕುಮಾರಸ್ವಾಮಿ, ಆರ್. ಅಶೋಕ್ ಬಳಿ ಕೇಳಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಕನ್ನಡದಲ್ಲಿ ಹಿಟ್ ಆಯ್ತು ಮತ್ತೊಂದು ಹೊಸಬರ ಸಿನಿಮಾ..! ಮಿ. ನಟ್ವರ್ ಲಾಲ್ ಮೆಚ್ಚಿದ ಸ್ಟಾರ್ಸ್..!