Asianet Suvarna News Asianet Suvarna News

ಕಾಂಗ್ರೆಸ್‌ ಫೈನಲ್‌ ಪಟ್ಟಿ ಬಿಡುಗಡೆ: ಹೈಕಮಾಂಡ್‌ ಲೆಕ್ಕಾಚಾರವೇನು?

ಕಾಂಗ್ರೆಸ್‌ನ ಆರನೇ ಪಟ್ಟಿ ತಡರಾತ್ರಿ ಬಿಡುಗಡೆ
5 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ
ರಾಯಚೂರು ಅಭ್ಯರ್ಥಿ ಮೊಹಮ್ಮದ್ ಶಾಲಾಂ

ಮೇ. 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ತಡರಾತ್ರಿ ಅಭ್ಯರ್ಥಿಗಳ ಆರನೇ ಪಟ್ಟಿ ಬಿಡುಗಡೆ ಮಾಡಿದೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹೀಗಾಗಿ ಕಾಂಗ್ರೆಸ್ ಬುಧವಾರ ತಡರಾತ್ರಿ ಕೊನೆಯ ಪಟ್ಟಿ ಬಿಡುಗಡೆ ಮಾಡಿದ್ದು, ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ರಾಯಚೂರು ಅಭ್ಯರ್ಥಿಯಾಗಿ ಮೊಹಮ್ಮದ್ ಶಾಲಾಂ, ಶಿಡ್ಲಘಟ್ಟಕ್ಕೆ ಬಿ.ವಿ. ರಾಜೀವ್ ಗೌಡ, ಸಿವಿ ರಾಮನ್ ನಗರ ಅಭ್ಯರ್ಥಿಯಾಗಿ ಎಸ್.ಆನಂದ ಕುಮಾರ್, ಅರಕಲಗೂಡಿನಲ್ಲಿ ಹೆಚ್.ಪಿ.ಶ್ರೀಧರ್ ಗೌಡ ಹಾಗೂ ಮಂಗಳೂರು ನಗರ ಉತ್ತರದಲ್ಲಿ ಇನಾಯತ್ ಅಲಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಬೆಳಗಾವಿ ಬಂಡಾಯ ಶಮನ: ನಾಯಕರ ಜೊತೆ ಬಿ.ಎಲ್. ಸಂತೋಷ್‌ ಸಭೆ

Video Top Stories