
ಮುಂದಿನ ಚುನಾವಣೆಯಲ್ಲಿ ಅಖಂಡಗೆ ಟಿಕೆಟ್ ಸಿಗಲ್ವಂತೆ; ಜೋರಾಗ್ತಿದೆ ಸಿದ್ದು-ಡಿಕೆಶಿ ಫೈಟ್
ಡಿಜೆ ಹಳ್ಳಿ ಗಲಭೆ, ಅಖಂಡ ಶ್ರೀನಿವಾಸ್ ಬಗ್ಗೆ ಕಾಂಗ್ರೆಸ್ ಮಾಜಿ ಶಾಸಕ ಪ್ರಸನ್ನ ಕುಮಾರ್ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಬೆಂಗಳೂರು (ಫೆ. 28): ಡಿಜೆ ಹಳ್ಳಿ ಗಲಭೆ, ಅಖಂಡ ಶ್ರೀನಿವಾಸ್ ಬಗ್ಗೆ ಕಾಂಗ್ರೆಸ್ ಮಾಜಿ ಶಾಸಕ ಪ್ರಸನ್ನ ಕುಮಾರ್ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. 'ಮುಂದಿನ ಚುನಾವಣೆಯಲ್ಲಿ 200 ಪರ್ಸೆಂಟ್ ಅಖಂಡಗೆ ಟಿಕೆಟ್ ಸಿಗಲ್ಲ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿಗೂ ಅಖಂಡನೇ ಕಾರಣ' ಎಂದಿರುವ ಆಡಿಯೋ ಸುವರ್ಣ ನ್ಯೂಸ್ಗೆ ಲಭ್ಯವಾಗಿದೆ.