ರಾಜಾಜಿನಗರ ಅತಿರಥರ ಅಖಾಡ: ಬಿಜೆಪಿಯ ಭದ್ರ ಕೋಟೆಯಲ್ಲಿ ಹೇಗಿದೆ ರಣಕಣ ?
2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್ ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ರಾಜಾಜಿನಗರ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಮಾಡಲಾಗಿದೆ.
ರಾಜಾಜಿನಗರ ಒಂದು ರೀತಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಭದ್ರ ಕೋಟೆಯಾಗಿದ್ದು, 1994ರಿಂದ ಸುರೇಶ್ ಕುಮಾರ್ ಇಲ್ಲಿ ಸತತವಾಗಿ ಚುನಾವಣೆ ಗೆದ್ದು ಬರುತ್ತಿದ್ದಾರೆ . ಈ ಚುನಾವಣೆಯಲ್ಲಿ ಇವರ ವಿರುದ್ಧ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ವಿಧಾನಪರಿಷತ್ ಸದಸ್ಯ ಪುಟ್ಟಣ್ಣಗೆ ಕಾಂಗ್ರೆಸ್ ರಾಜಾಜಿನಗರದಲ್ಲಿ ಟಿಕೆಟ್ ನೀಡಿದೆ. ಹೀಗಾಗಿ ಈ ಕ್ಷೇತ್ರದ ಚುನಾವಣಾ ಪೈಟಿಂಗ್ ಕೂತುಹಲಕಾರಿಯಾಗಿದೆ.ಸುರೇಶ್ ಕುಮಾರ್ 2004ರಲ್ಲಿ ಒಮ್ಮೆ ಸೋತರು ನಂತರ ಸತತವಾಗಿ ಗೆದ್ದು ಬರುತ್ತಿದ್ದಾರೆ . ಸುರೇಶ್ ಕುಮಾರ್ ಎಲ್ಲರ ಮನೆಮಾತಾಗಿರುವ ವಿಷಯ ಎಂದರೆ ಸರಳ, ಸಜ್ಜನ,ಸಭ್ಯ ರಾಜಕಾರಣಿ ಎಂದು. ಅದಲ್ಲದೆ ಸುರೇಶ್ ಕುಮಾರ್ ಮಾತಿನಿಂದ ವಿಧಾನಸಭೆಯಲ್ಲಿ ಹೆಸರಾದವರು.