Asianet Suvarna News Asianet Suvarna News

Panchang: ಇಂದು ಚತುರ್ಥಿ, ಗಣಪತಿ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಶನಿವಾರ, ಚತುರ್ಥಿ ತಿಥಿ, ಭರಣಿ ನಕ್ಷತ್ರ.  

ಚತುರ್ಥಿ ಸಂದರ್ಭದಲ್ಲಿ ವಿನಾಯಕನ ಪೂಜೆ ಮಾಡಬೇಕು. ಕೃಷ್ಣ ಪಕ್ಷದಲ್ಲಿ ಸಂಕಷ್ಟಹರ ಚತುರ್ಥಿ ಆಚರಿಸುತ್ತೇವೆ. ಶುಕ್ಲ ಪಕ್ಷದಲ್ಲಿ ಶಕ್ತಿ ಗಣಪತಿ ವ್ರತ ಅಥವಾ ಸತ್ಯ ಗಣಪತಿ ವ್ರತ ಆಚರಿಸಬಹುದು. ಗಣಪತಿ ಸನ್ನಿಧಾನಕ್ಕೆ ಹೋಗಿ ಅಭಿಷೇಕ ಮಾಡಿಸಿ, ಲಡ್ಡು ಸಮರ್ಪಣೆ ಮಾಡಿ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ನಿಜವಾಗುತ್ತೆಯೇ ಸೌರ ಚಂಡಮಾರುತದ ಬಗ್ಗೆ ಬಾಬಾ ವಾಂಗಾ ಭಯಾನಕ ಭವಿಷ್ಯ? ಬರ್ತಾರಾ ಏಲಿಯನ್ಸ್?

Video Top Stories