
ಇಂದಿನಿಂದ ಅಧಿಕ ಶ್ರಾವಣ ಮಾಸ ಆರಂಭ: ಏನು ಮಾಡಬೇಕು, ಮಾಡಬಾರದು ?
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪ್ರತಿಪತ್ ತಿಥಿ, ಪುಷ್ಯ ನಕ್ಷತ್ರ.
Add Asianetnews Kannada as a Preferred Source

ಇಂದಿನಿಂದ ಶ್ರಾವಣ ಮಾಸ ಆರಂಭವಾಗುತ್ತದೆ. ಅಧಿಕ ಶ್ರಾವಣ ಇದ್ದು, ಶುಭಕಾರ್ಯಗಳನ್ನು ಮಾಡುವುದಿಲ್ಲ. ನಿಜ ಶ್ರಾವಣ ಶುಭಕಾರ್ಯಗಳಿಗೆ ಉತ್ತಮವಾಗಿದೆ. ಅಧಿಕ ಮಾಸವು ವಿಷ್ಣುವಿನೊಂದಿಗೆ ಸಂಬಂಧವನ್ನು ಹೊಂದಿರುವುದರಿಂದ ಈ ಮಾಸದಲ್ಲಿ ತುಳಸಿ ಪೂಜೆಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಶ್ರಾವಣದಲ್ಲಿ ಶಿವನ ಆರಾಧನೆ ಹೆಚ್ಚು ಮಾಡಲಾಗುತ್ತದೆ. ಅದೇ ರೀತಿ ಅಧಿಕ ಶ್ರಾವಣದಲ್ಲಿ ವಿಷ್ಣು ಆರಾಧನೆಗೆ ಮಾಡಲಾಗುತ್ತದೆ.
ಇದನ್ನೂ ವೀಕ್ಷಿಸಿ: ವಿಪಕ್ಷದಿಂದಲೂ ಇಲ್ಲ ಎನ್ಡಿಎ ಸಭೆಗೂ ಆಹ್ವಾನವಿಲ್ಲ; ಸ್ಪಷ್ಟನೆ ನೀಡಿದ ಕುಮಾರಸ್ವಾಮಿ!