
Panchanga: ಧನಸ್ಸು ರಾಶಿಯವರ ತಂದೆ ಆರೋಗ್ಯದಲ್ಲಿ ಏರುಪೇರು..ಪರಿಹಾರಕ್ಕೆ ಹೀಗೆ ಮಾಡಿ
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಬುಧವಾರ, ಪ್ರತಿಪತ್ ತಿಥಿ, ಶ್ರವಣ ನಕ್ಷತ್ರ.
Add Asianetnews Kannada as a Preferred Source

ಬುಧವಾರ ಶ್ರವಣ ನಕ್ಷತ್ರ ಬಂದಿರುವುದರಿಂದ ಇದು ತುಂಬಾ ಒಳ್ಳೆಯದು. ಶ್ರವಣ ವಿಷ್ಣುವಿನ ನಕ್ಷತ್ರವಾಗಿದೆ. ಈ ಸಮಯದಲ್ಲಿ ವಿಶೇಷ ಪೂಜೆ, ಅಭಿಷೇಕಗಳು ನಡೆಯುತ್ತವೆ. ಈ ದಿನ ಮಿಥುನ ರಾಶಿಯವರಿಗೆ ಬುದ್ಧಿ ವ್ಯತ್ಯಾಸವಾಗಲಿದೆ. ಮನಸ್ಸು ಚಂಚಲವಾಗಿರಲಿದೆ.ಆದ್ರೆ ವೃತ್ತಿಯಲ್ಲಿ ಯಾವುದೇ ತೊಡಕು ಇಲ್ಲ. ಲಲಿತಾ ಸಹಸ್ರನಾಮ ಪಠಿಸಿ ಇದರಿಂದ ಒಳಿತಾಗಲಿದೆ.
ಇದನ್ನೂ ವೀಕ್ಷಿಸಿ: 'KGF ಚಾಪ್ಟರ್ 1' ಕ್ಲೈಮ್ಯಾಕ್ಸ್ ವಿಡಿಯೋ ವೈರಲ್: ಗರುಡನ ಕೊಂದ ದೃಶ್ಯದ ಶೂಟಿಂಗ್ ಹೇಗಿತ್ತು ಗೊತ್ತಾ?