
ಆನಂದ್ ಸಿಂಗ್ ರಾಜೀನಾಮೆ; ಕೈಚಿಲ್ಲಿದ ಟ್ರಬಲ್ ಶೂಟರ್ ಡಿಕೆಶಿ?
ಶಾಸಕ ಆನಂದ್ ಸಿಂಗ್ ರಾಜೀನಾಮೆ; ಮನವೊಲಿಸಲು ಪ್ರಯತ್ನಿಸಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್; ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದ ಆನಂದ್ ಸಿಂಗ್!
ಬೆಂಗಳೂರು (ಜು.01): ಮೈತ್ರಿ ಸರ್ಕಾರ ರಚನೆಯ ಮೊದಲ ದಿನದಿಂದ ವಿಜಯನಗರ ಶಾಸಕ ಆನಂದ್ ಸಿಂಗ್ರನ್ನು ಕಾಂಗ್ರೆಸ್ನಲ್ಲಿ ಹಿಡಿದಿಟ್ಟುಕೊಳ್ಳುವುದರ ಹಿಂದೆ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಪಾತ್ರ ದೊಡ್ಡದು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸುವ ವೇಳೆ, ಈಗಲ್ಟನ್ ರೆಸಾರ್ಟ್ನಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ರಿಂದ ಹಲ್ಲೆ ನಡೆದ ಸಂದರ್ಭದಲ್ಲಿ, ಆನಂದ್ ಸಿಂಗ್ರನ್ನು ಡಿ.ಕೆ. ಶಿವಕುಮಾರ್ ‘ಕೈ’ಯಲ್ಲೇ ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗಿದ್ದರು.
ಆದರೆ ಈ ಬಾರಿ ಟ್ರಬಲ್ ಶೂಟರ್ಗೇ ಆನಂದ್ ಸಿಂಗ್ ಕೈಕೊಟ್ಟಿದ್ದಾರೆ. ಅದಕ್ಕೆ ಕಾರಣ ಬರೇ ಜಿಂದಾಲ್ಗೆ ಭೂಮಿ ಕಾರಣನಾ? ಅಥವಾ ಇನ್ನೇನಾದರೂ ಇದೆಯಾ? ಡಿಕೆಶಿ ಏನು ಹೇಳ್ತಿದ್ದಾರೆ? ಈ ಸ್ಟೋರಿ ನೋಡಿ...