
ದೇವರನ್ನೇ ನಂಬದಿರುವವಳು ನಿತ್ಯಾನಂದನನ್ನ ನಂಬಿದ್ದಳು: 10ನೇ ಕ್ಲಾಸ್ನಲ್ಲೇ ರಂಜಿತಾ ಮೇಲೆ ಲವ್ !
ನಾಡೋಡಿ ತೆಂಡ್ರಲ್ ಸಿನಿಮಾ ನೋಡುತ್ತಿದ್ದಂತೆ ನಿತ್ಯಾನಂದನ ವರ್ತನೆಯಲ್ಲಿ ಬದಲಾವಣೆಯಾಗಿದ್ದು, ನಟಿ ರಂಜಿತಾ ಮೇಲೆ ಲವ್ ಸಹ ಆಗಿತ್ತಂತೆ.
ನಿತ್ಯಾನಂದ ಮತ್ತು ನಟಿ ರಂಜಿತಾ ಲವ್ ಸ್ಟೋರಿ ಇದೀಗ ಮತ್ತೆ ಸುದ್ದಿಯಲ್ಲಿದೆ. ನಟ ಅಶೋಕ್ ಕುಮಾರ್ ತಮ್ಮ ಮಕ್ಕಳಿಬ್ಬರು ನಿತ್ಯಾನಂದ ಸ್ವಾಮಿಜಿ ಬಳಿ ಇದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಿತ್ಯಾನಂದ 10ನೇ ತರಗತಿಯಲ್ಲಿ ಇದ್ದಾಗಲೇ, ರಂಜಿತಾಗೆ ಮನಸೋತಿರುವ ವಿಷಯ ಇದೀಗ ಗೊತ್ತಾಗಿದೆ. ನಿತ್ಯಾನಂದಾ ಜೊತೆ ರಂಜಿತಾ ಹೆಸರು ತಳುಕು ಹಾಕೊಂಡಾಗ ದೇಶದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಯಾಗಿತ್ತು. ಅಶೋಕ್ ಕುಮಾರ್ ಅವರ ಎರಡನೇ ಪುತ್ರಿನೇ ರಂಜಿತಾ. ಮಗಳು ಸಿನಿಮಾಗೆ ಎಂಟ್ರಿ ಕೊಟ್ಟಾಗ ಖುಷಿಪಟ್ಟಿದ್ದರು. ತಮಿಳಿನ ಜನಪ್ರಿಯ ನಿರ್ದೇಶಕ ಭಾರತಿರಾಜನ್ ನಿರ್ದೇಶಿಸಿದ 'ನಾಡೋಡಿ ತೆಂಡ್ರಲ್'ನಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ನಿತ್ಯಾನಂದನ ಬದುಕನ್ನೇ ಬದಲಿಸಿತ್ತು. ಈ ಸಿನಿಮಾ ನೋಡಿದ ತಕ್ಷಣ ನಿತ್ಯಾನಂದನಿಗೆ ರಂಜಿತಾ ಮೇಲೆ ಲವ್ ಹುಟ್ಟಿದೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಕತ್ರಿನಾ ಗಂಡನನ್ನು ಪಕ್ಕಕ್ಕೆ ತಳ್ಳಿದ ಸಲ್ಮಾನ್ ಬಾಡಿಗಾರ್ಡ್!: ಹೀಗ್ಯಾಕೆ ಮಾಡಿದ್ರು?