Asianet Suvarna News Asianet Suvarna News

ಖಾಕಿ ಕುಟುಂಬದ ನಿದ್ದೆ ಕೆಡಿಸಿದ ಭಾನಾಮತಿ ಕೊರಿಯರ್‌..!

ನಿವೃತ್ತ ಎಎಸ್‌ಐ ಬಸವರಾಜ್‌ ಲಿಂಗದಹಳ್ಳಿ ಕುಟುಂಬಕ್ಕೆ ಮೂರು ವರ್ಷಗಳಿಂದ ಬರುತ್ತಿರುವ ಭಾನಾಮತಿ ಕೊರಿಯರ್‌| ಮಂತ್ರಿಸಿದ ನಿಂಬೆ, ಬೊಂಬೆ, ಸೂಜಿ, ಕರಿದಾರದ ಕೊರಿಯರ್‌ ಪ್ಯಾಕ್‌| ವಿಜಯಪುರ ಜಿಲ್ಲೆಯ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದ ಘಟನೆ| 

ವಿಜಯಪುರ(ಜ.28): ಕಳೆದ ಮೂರು ವರ್ಷಗಳಿಂದ ಬರುತ್ತಿರುವ ನಿಗೂಢ ಪಾರ್ಸಲ್‌ನಿಂದ ಕುಟುಂಬವೊಂದು ನರಕಯಾತನೆ ಅನುಭವಿಸುತ್ತಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ನಿವೃತ್ತಿ ನಂತರ ಆರಾಮವಿರಬೇಕು ಎಂಬ ಯೋಚನೆಯಲ್ಲಿದ್ದನ ಖಾಕಿ ಕುಟುಂಬಕ್ಕೆ ಇನ್ನಿಲ್ಲದ ಸಂಕಟ ಅನುಭವಿಸುತ್ತಿದೆ. 

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಓಪನ್‌ ಅಗುತ್ತಾ..?

ಮೂರು ವರ್ಷಗಳಿಂದ ನಿವೃತ್ತ ಎಎಸ್‌ಐ ಬಸವರಾಜ್‌ ಲಿಂಗದಹಳ್ಳಿ ಕುಟುಂಬಕ್ಕೆ ಭಾನಾಮತಿ ಕೊರಿಯರ್‌ ಬರುತ್ತಿದೆ. ಪಾರ್ಸಲ್‌ನಲ್ಲಿ ಮಂತ್ರಿಸಿದ ನಿಂಬೆ, ಬೊಂಬೆ, ಸೂಜಿ, ಕರಿದಾರದ ಕೊರಿಯರ್‌ ಪ್ಯಾಕ್‌ ಬರುತ್ತಿದೆ.