
ಕಲಬುರಗಿಯಲ್ಲಿ ಸಿಎಂ ಬೊಮ್ಮಾಯಿಗೆ ಸ್ವಾಗತ ಕೋರಿ ಆರ್.ಡಿ ಪಾಟೀಲ್ ಬ್ಯಾನರ್
ಕಲಬುರಗಿಯ ಹಾದಿ-ಬೀದಿಯಲ್ಲಿ ಪಿಎಸ್ಐ ಹಗರಣದ ಕಿಂಗ್ ಪಿನ್ ಆರ್.ಡಿ ಪಾಟೀಲ್, ಸಿಎಂ ಬೊಮ್ಮಾಯಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿದ್ದಾನೆ.
ಕಲಬುರಗಿ ಜಿಲ್ಲೆಯ ಗಾಣಗಾಪೂರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು, ಸಿಎಂಗೆ ಸ್ವಾಗತ ಕೋರಿ ಆರ್.ಡಿ ಪಾಟೀಲ್ ಬ್ಯಾನರ್ ಹಾಕಿದ್ದಾನೆ. ಜನವರಿ 23ರಂದು ಕಲಬುರಗಿಯ ಕೋರ್ಟ್ ಮುಂದೆ ಪಾಟೀಲ್ ಶರಣಾಗತಿಯಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದರು ಆತನ ಹವಾ ಕಮ್ಮಿ ಆಗಿಲ್ಲ. ವಿಠ್ಠಲ್ ಹೇರೂರು ಕಂಚಿನ ಮೂರ್ತಿ ಅನಾವರಣ ಸಮಾರಂಭಕ್ಕೆ ಸಿಎಂ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಬ್ಯಾನರ್ ಹಾಕಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ