ವೃದ್ಧ ಪತಿಯ ಶವದೊಂದಿಗೆ ದಿನ ಕಳೆದ ಪತ್ನಿ: ಕೊರೋನಾ ಭಯದಿಂದ ಬಾರದ ಸಂಬಂಧಿಕರು..!
ಮಾನವ ಸಂಬಂಧಗಳ ಮುಖವಾಡ ಕಳಚಿದ ಕೊರೋನಾ ವೈರಸ್| ಅಮಾನವೀಯ ಘಟನೆಗೆ ಸಾಕ್ಷಿಯದ ಹಾಸನ| ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದ ವೃದ್ಧ| ವೃದ್ಧ ಸಾವನ್ನಪ್ಪಿದ ಸುದ್ದಿ ಕೇಳಿದ್ರೂ ಕೊರೋನಾ ಭಯದಿಂದ ಸಂಬಂಧಿಕರು ಬರಲೇ ಇಲ್ಲ|
ಹಾಸನ(ಜು.06): ಮಹಾಮಾರಿ ಕೊರೋನಾದಿಂದ ಸಂಬಂಧಗಳ ನಿಜ ಸ್ವರೂಪ ಬಯಲಾಗುತ್ತಿದೆ. ಮಾನವ ಸಂಬಂಧಗಳ ಮುಖವಾಡ ಕಳಚಿದೆ ಈ ಕೊರೋನಾ ವೈರಸ್. ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ ಹಾಸನ ಜಿಲ್ಲೆ. ವೃದ್ಧ ಪತಿಯ ಶವದೊಂದಿಗೆ ಪತ್ನಿಯೊಬ್ಬಳು ದಿನ ಕಳೆದ ಘಟನೆ ಹಾಸನದ ರಂಗೋಲಿಹಳ್ಳ ಬಡಾವಣೆಯಲ್ಲಿ ನಡೆದಿದೆ.
ಕೊರೋನಾ ರಣಕೇಕೆ: ರಾಜ್ಯದ ಜನತೆ ಈ ದೃಶ್ಯ ನೋಡಲೇಬೇಕು..!
ವಯೋಸಹಜ ಕಾಯಿಲೆಯಿಂದ ವೃದ್ಧ ಸಾವನ್ನಪ್ಪಿದ ಸುದ್ದಿ ಕೇಳಿದ್ರೂ ಕೊರೋನಾ ಭಯದಿಂದ ಯಾರೂ ಬಂದಿಲ್ಲ. ಹೀಗಾಗಿ ವೃದ್ಧೆಗೆ ಮಕ್ಕಳು ಇರದ ಪರಿಣಾಮ ವೃದ್ಧ ಪತಿಯ ಶವದೊಂದಿಗೆ ದಿನ ಕಳೆದಿದ್ದಾರೆ. ಕೊನೆಗೆ ನಗರಸಭೆ ಸಿಬ್ಬಂದಿಯಿಂದಲೇ ವೃದ್ಧನ ಅಂತ್ಯಕ್ರಿಯೆ ನಡೆದಿದೆ.