ಮಂಡ್ಯದಲ್ಲೊಂದು ಮನಕಲಕುವ ಘಟನೆ: ಲವ್, ಸೆ*ಕ್ಸ್, ದೋಖಾಗೆ ತಾಯಿ-ಮಗಳು ದಾರುಣ ಅಂತ್ಯ!

ಮಂಡ್ಯದಲ್ಲಿ ಪ್ರೀತಿ, ಮೋಸದಿಂದ ಮನನೊಂದು ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಿಯಕರನಿಂದ ಮೋಸ ಹೋದ ಮಗಳು ಆತ್ಮಹತ್ಯೆ ಮಾಡಿಕೊಂಡರೆ, ಆಕೆಯ ಸಾವಿಗೆ ನ್ಯಾಯ ಸಿಗದ ಕಾರಣ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಸಕ್ಕರೆನಾಡು ಮಂಡ್ಯದಲ್ಲೊಂದು ಮನಕಲಕುವ ಘಟನೆ ನಡೆದಿದೆ. ಲವ್,ಸೆಕ್ಸ್,ದೋಖಾಗೆ ಒಂದೇ ಕುಟುಂಬದ ಇಬ್ಬರು ದಾರುಣ ಅಂತ್ಯ ಕಂಡಿದ್ದಾರೆ. ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. 20 ದಿನಗಳ ಹಿಂದೆ ಸೂಸೈಡ್ ಮಾಡಿಕೊಂಡಿದ್ದ ವಿಜಯಲಕ್ಷ್ಮಿ(21) ಪುತ್ರಿ ಸಾವಿನ ಬೆನ್ನಲ್ಲೇ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪಕ್ಕದ ಮಾರಸಿಂಗನಹಳ್ಳಿಯ ಹರಿಕೃಷ್ಣ ಎಂಬಾತನಿಂದ ಮೋಸದ ಆರೋಪ ಕೇಳಿಬಂದಿದ್ದು, ವಿಜಯಲಕ್ಷ್ಮೀ-ಹರಿಕೃಷ್ಣ ನಡುವೆ ಪರಸ್ಪರ ಪ್ರೀತಿಯಾಗಿದೆ. ಪ್ರೀತಿಸುವ ನೆಪದಲ್ಲಿ ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿತ್ತು. ಇತ್ತೀಚೆಗೆ ಬೇರೆ ಹುಡುಗಿಯರ ಜೊತೆ ಹರಿಕೃಷ್ಣ ಸಂಪರ್ಕದಲ್ಲಿದ್ದ. ಈ ಬಗ್ಗೆ ಪ್ರಶ್ನಿಸಿ ವಿಜಯಲಕ್ಷ್ಮಿ ಮದುವೆಗೆ ಪಟ್ಟು ಹಿಡಿದಿದ್ದಳು. ಆದರೆ ಮದುವೆಗೆ ನಿರಾಕರಿಸಿ ಹರಿಕೃಷ್ಣ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಸಿದ್ದ. ಇದರಿಂದ ಮನನೊಂದು ವಿಜಯಲಕ್ಷ್ಮಿ ಸೂಸೈಡ್ ಮಾಡಿಕೊಂಡಿದ್ದಳು.

ಇದು ಮಂಡ್ಯ ಪೊಲೀಸರೇ ಮಾಡಿದ ಕೊಲೆ; ಮಗಳ 'ಸೂಸೈಡ್‌' ಕೇಸ್‌ಗೆ ಸಿಗದ ನ್ಯಾಯ, ತಾಯಿಯ ಆತ್ಮಹತ್ಯೆ!

ವಿಜಯಲಕ್ಷ್ಮಿ ಸಾವಿಗೆ ನ್ಯಾಯಕ್ಕಾಗಿ ಮಂಡ್ಯ ಗ್ರಾಮಾಂತರ ಠಾಣೆಗೆ ತಂದೆ ನಂಜುಂಡೇಗೌಡ ದೂರು ನೀಡಿದ್ದರು. ದೂರು ಕೊಟ್ಟು ನ್ಯಾಯ ಕೋರಲು ಹೋದವರ ಮೇಲೆಯೇ ಪೊಲೀಸರು FIR ದಾಖಲಿಸಿದ್ದರು. ಇತ್ತ ಮಗಳ ಸಾವಿಗೆ ನ್ಯಾಯವೂ ಇಲ್ಲ, ನಮ್ಮ ಪರ ಬಂದವರಿಗೆ ನೆಮ್ಮದಿಯೂ ಇಲ್ಲ ಎಂದು ನೊಂದಿದ್ದ ತಾಯಿ ಲಕ್ಷ್ಮಿ ನಿನ್ನೆ ಸಂಜೆ ಮನೆಯಲ್ಲೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ನಟಿ ರನ್ಯಾ ಚಿನ್ನ ಪ್ರಕರಣ: ಬಂಧಿತ ಆಪ್ತ ಸ್ನೇಹಿತ ತರುಣ್‌ ತೆಲುಗು ನಟ, ಅಲ್ಲಿ ಹೆಸರು ಬೇರೆ!

ಇದೀಗ ಗ್ರಾಮಸ್ಥರ ಆಕ್ರೋಶದ ಬೆನ್ನಲ್ಲೇ ಕೊನೆಗೂ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಇದೀಗ ಹರಿಕೃಷ್ಣ ಸೇರಿ 19 ಮಂದಿ ವಿರುದ್ಧ 189, 191, 64, 108, 54, 118, ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್‌ ದಾಖಲು ಮಾಡಿದ್ದರು.

Related Video