ಶಕ್ತಿ ಯೋಜನೆ ಜಾರಿ ಹಿನ್ನೆಲೆ ಮಹಿಳೆಯರಿಂದ ಬಸ್‌ ಫುಲ್‌ : ಜಾಗವಿಲ್ಲದೇ ಪುರುಷ ಪ್ರಯಾಣಿಕರ ಪರದಾಟ..!

ಧಾರವಾಡದ ಕೆಲಗೇರಿಯಿಂದ‌ ತೆರಳಿದ ಕೆಎಸ್‌ಆರ್‌ಟಿಸಿ‌ ಬಸ್
ಶಾಲಾ ಮಕ್ಕಳು, ಕೆಲಸಕ್ಕೆ‌ ಹೋಗೋ ಮಹಿಳೆಯರಿಂದ ಬಸ್ ಭರ್ತಿ 
ಬಸ್‌ನಲ್ಲಿ ಪುರುಷರಿಗಿಲ್ಲ ಅವಕಾಶ, ಪ್ರಯಾಣಿಕರ ಪರದಾಟ

Share this Video
  • FB
  • Linkdin
  • Whatsapp

ಧಾರವಾಡ: ಶಕ್ತಿ ಯೋಜನೆಯನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯ ಜಾರಿಗೆಗೊಳಿಸಿದ್ದಾರೆ. ಕಳೆದ ಎರಡು ದಿನದಿಂದ ಮಹಿಳೆಯರು ಬಸ್‌ನಲ್ಲಿ ಫ್ರೀಯಾಗಿ ಓಡಾಟವನ್ನೂ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಬಸ್‌ನಲ್ಲೆಲ್ಲಾ ಬರೀ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಧಾರವಾಡದ ಕೆಲಗೇರಿಯಿಂದ ತೆರಳಿದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬರೀ ಮಹಿಳಾ ಪ್ರಯಾಣಿಕರೇ ಇದ್ದು, ಪುರುಷರ ಪ್ರಯಾಣಿಕರು ಪರದಾಡುವಂತಾಯಿತು. ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವ ಮಹಿಳೆಯರಿಂದ ಬಸ್‌ ಭರ್ತಿಯಾಗಿತ್ತು. ಪುರುಷರು ಜಾಗವಿಲ್ಲದೇ ಪರದಾಡಿದ್ರು. ಅಲ್ಲದೇ ಕೆಲಗೇರಿಗೆ ಇನ್ನೇರಡು ಬಸ್‌ ಬಿಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯ ಜತೆ ಬಿಜೆಪಿ ನಾಯಕರು ಶಾಮೀಲು ..?: ಸ್ವಪಕ್ಷೀಯರ ವಿರುದ್ಧ ಪ್ರತಾಪ್‌ ಸಿಂಹ ಕಿಡಿ

Related Video