Asianet Suvarna News Asianet Suvarna News

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ

ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ನದಿಗಳು| ಮಳೆಗೆ ನಾಸಿಕ್‌ನ ಹಲವು ಭಾಗಗಳು ಜಲಾವೃತ|ಪ್ರವಾಹಕ್ಕೆ ವಾಹನವೊಂದು ಕೊಚ್ಚಿ ಹೋಗಿದೆ|ವಾಹನ ಸವಾರರು ಪರದಾಟ|

ಬೆಳಗಾವಿ(ಜೂ.13): ಮಹಾಮಾರಿ ಕೊರೋನಾ ಅಟ್ಟಹಾಸಕ್ಕೆ ಮಹಾರಾಷ್ಟ್ರ ನಲುಗಿ ಹೋಗಿದೆ. ಈ ಮಧ್ಯೆ ವರುಣನ ಆರ್ಭಟಕ್ಕೆ ನದಿಗಳು ಉಕ್ಕಿ ಹರಿಯುತ್ತಿವೆ. ಹೌದು, ನಿನ್ನೆ ಸುರಿದ ಭಾರೀ ಮಳೆಗೆ ನಾಸಿಕ್‌ನ ಹಲವು ಭಾಗಗಳು ಜಲಾವೃತವಾಗಿವೆ. ಗೋದಾವರಿ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹಕ್ಕೆ ವಾಹನವೊಂದು ಕೊಚ್ಚಿ ಹೋಗಿದೆ. 

ಮಹಾಭಾರತ ಧಾರಾವಾಹಿಗೆ ಮೆಚ್ಚುಗೆ; ಶ್ರೀಕೃಷ್ಣ ಸಾರವನ್ನು ಶ್ಲಾಘಿಸಿದ ಸಿಎಂ

ಭಾರೀ ಮಳೆ ಸುರಿದ ಪರಿಣಾಮ ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ಬೆಳಗಾವಿ ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಲ್ಲೂ ಕೂಡ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ.