Asianet Suvarna News Asianet Suvarna News

ಲಾಕ್‌ಡೌನ್‌ನಿಂದ ಬಾಳೆಯನ್ನು ಕೇಳುವವರಿಲ್ಲ, ಬೆಳೆ ನಾಶ ಮಾಡಿದ ರೈತ ಮಹಿಳೆ

ಲಾಕ್‌ಡೌನ್ ಹೊಡೆತದಿಂದ ರೈತರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ಬಾಳೆ ಬೆಳೆಯನ್ನು  ವಿಜಯಪುರ ಜಿಲ್ಲೆಯ ನೆಬಗೇರಿ ರೈತ ಮಹಿಳೆ ಸಂಗಮ್ಮ ನಾಶ ಮಾಡಿದ್ದಾರೆ. 

ವಿಜಯಪುರ (ಜೂ. 13): ಲಾಕ್‌ಡೌನ್  ಹೊಡೆತದಿಂದ ರೈತರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ಬಾಳೆ ಬೆಳೆಯನ್ನು  ವಿಜಯಪುರ ಜಿಲ್ಲೆಯ ನೆಬಗೇರಿ ರೈತ ಮಹಿಳೆ ಸಂಗಮ್ಮ ನಾಶ ಮಾಡಿದ್ದಾರೆ. 3 ಲಕ್ಷ ರೂ ಖರ್ಚು ಮಾಡಿ 5 ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆದಿದ್ದರು.

ಪರಿಸರ ಸ್ನೇಹಿ ಮಾಸ್ಕ್ ಆವಿಷ್ಕರಿಸಿದ ಮಂಗಳೂರು ಯುವಕ, ಇದರಲ್ಲಿದೆ ಒಂದು ವಿಶೇಷ

ಆದರೆ ಲಾಕ್‌ಡೌನ್‌ನಿಂದಾಗಿ ಬಾಳೆಯನ್ನು ಕೇಳುವವರಿಲ್ಲದಂತಾಗಿದೆ. ಜೊತೆಗೆ ಭಾರೀ ಮಳೆಯಿಂದಾಗಿ ಬಾಳೆ ಕೊಳೆತು ಹೊಂದಿದೆ. ಎರಡೆರಡು ಕಡೆಯಿಂದ ನಷ್ಟ ಅನುಭವಿಸಿದ ರೈತ ಮಹಿಳೆ, ಜೆಸಿಬಿಯಿಂದ ಬಾಳೆಯನ್ನು ನಾಶ ಮಾಡಿದ್ಧಾರೆ. ಸರ್ಕಾರ ನೆರವಿಗೆ ಬರಲಿ ಎಂದು ಮನವಿ ಮಾಡಿದ್ದಾರೆ.

 

Video Top Stories