ಕೇಸ್‌ನಲ್ಲಿ ಹೆಸರು ಬರದಂತೆ ದರ್ಶನ್‌ ಲಕ್ಷ ಲಕ್ಷ ಡೀಲ್ ‌? 30 ಲಕ್ಷ ನೀಡಿರೋದನ್ನು ಒಪ್ಪಿಕೊಂಡ ನಟ!

ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರದಂತೆ ಮಾಡಲು ಹಣದ ಡೀಲ್‌ ಮಾಡಿರುವ ವಿಷಯವನ್ನು ಪೊಲೀಸ್‌ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ನಟ ದರ್ಶನ್‌ (Actor Darshan) ಹೆಸರು ಕೇಳಿ ಬರದಂತೆ ಲಕ್ಷ ಲಕ್ಷ ಹಣದ ಡೀಲ್‌ ನಡೆದಿದೆ ಎಂಬ ವಿಷಯ ಇದೀಗ ಬಹಿರಂಗಗೊಂಡಿದೆ. ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಈ ಬಗ್ಗೆ ಸ್ವ- ಇಚ್ಚಾ ಹೇಳಿಕೆ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಬಳಿಕ ನಟ ದರ್ಶನ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಪ್ರಕರಣದಲ್ಲಿ ತನ್ನ ಹೆಸರು ಬರದಂತೆ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ. ಪೊಲೀಸ್ , ಲಾಯರ್, ಶವ ಸಾಗಿಸುವವರಿಗೆ ಹಣ ನೀಡಿರುವುದಾಗಿ(Money deal) ದರ್ಶನ್‌ ಒಪ್ಪಿಕೊಂಡಿದ್ದಾರಂತೆ. ಪ್ರದೂಶ್‌ಗೆ 30 ಲಕ್ಷ ಹಣ ನೀಡಿರೋದಾಗಿ ದರ್ಶನ್ ಸ್ವ ಇಚ್ಚೆ ಹೇಳಿಕೆ ನೀಡಿದ್ದಾರಂತೆ.

ಇದನ್ನೂ ವೀಕ್ಷಿಸಿ: ಮಂತ್ರಿ ಒತ್ತಡಕ್ಕೆ ಮಣಿದ್ರಾ ಸಿದ್ದರಾಮಯ್ಯ? ದರ್ಶನ್ ಬಚಾವೋ ಆಂದೋಲನಕ್ಕೆ ಕೈಹಾಕಿದ್ದೇಕೆ ನಾಯಕರು?

Related Video