Asianet Suvarna News Asianet Suvarna News

ಬೀದರ್‌: ಡಿಸಿ ಕಚೇರಿ ಮುಂದೆ ಸತ್ತ ಹಾವು ಇಟ್ಟು ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಸತ್ತ ಹಾವು ಇಟ್ಟು ಪ್ರತಿಭಟನೆ| ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಧಾರಜವಾಡಿ ಗ್ರಾಮದ ರೈತ ಮಹಿಳೆಯರ ಆಕ್ರೋಶ| ಹೊಲದಲ್ಲಿ ಕೆಲಸ ಮಾಡುವ ವೇಲೆ ಮಹಿಳೆಗೆ ಕಚ್ಚಿದ್ದ ಹಾವು| ತಕ್ಷಣ ಮಹಿಳೆಯನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರೂ ಕೂಡ ವೈದ್ಯರು ಚಿಕಿತ್ಸೆ ನೀಡಿರಲಿಲ್ಲ| 

ಬೀದರ್‌(ಆ.27): ಜಿಲ್ಲಾಧಿಕಾರಿ ಕಚೇರಿ ಎದುರು ಸತ್ತ ಹಾವು ಇಟ್ಟು ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ. ಹಾವು ಕಡಿದ ಮಹಿಳೆಗೆ ಜಿಲ್ಲೆ ಭಾಲ್ಕಿ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ರೈತ ಮಹಿಳೆಯರು ಸತ್ತ ಹಾವನ್ನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. 

ಹೋಟೆಲ್‌ನಲ್ಲಿ ರೂಂ  ಮಾಡಿ ಪರಾರಿಯಾಗ್ತಿದ್ದ ಅಜ್ಜ ಧಾರವಾಡದಲ್ಲಿ ಸಿಕ್ಕಿಬಿದ್ದ!

ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಧಾರಜವಾಡಿ ಗ್ರಾಮದ ರೈತ ಮಹಿಳೆಯರು ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಹೊಲದಲ್ಲಿ ಕೆಲಸ ಮಾಡುವ ವೇಲೆ ಮಹಿಳೆಗೆ ಹಾವು ಕಚ್ಚಿತ್ತು, ತಕ್ಷಣ ಮಹಿಳೆಯನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರೂ ಕೂಡ ವೈದ್ಯರು ಚಿಕಿತ್ಸೆ ನೀಡಿರಲಿಲ್ಲ.
 

Video Top Stories