Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಕಲುಷಿತ ಆಹಾರ ಸೇವನೆ ಮಾಡಿ 25 ವಿದ್ಯಾರ್ಥಿಗಳು ಅಸ್ವಸ್ಥ, 8 ಮಕ್ಕಳು ಗಂಭೀರ

ಕಲುಷಿತ ಆಹಾರ ಸೇವನೆ ಮಾಡಿ 25 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆ. ರಾಗುಟ್ಟಹಳ್ಳಿ ಗ್ರಾಮದ ಬಾಲಕರ ಹಾಸ್ಟೆಲ್‌ನಲ್ಲಿ ನಡದಿದೆ. 

ಚಿಕ್ಕಬಳ್ಳಾಪುರ (ಆ.16):  ಕಲುಷಿತ ಆಹಾರ ಸೇವನೆ ಮಾಡಿ 25 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆ. ರಾಗುಟ್ಟಹಳ್ಳಿ ಗ್ರಾಮದ ಬಾಲಕರ ಹಾಸ್ಟೆಲ್‌ನಲ್ಲಿ ನಡದಿದೆ. 25 ವಿದ್ಯಾರ್ಥಿಗಳ ಪೈಕಿ 8 ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇಂದು(ಬುಧವಾರ) ಬೆಳಗ್ಗೆ 50 ವಿದ್ಯಾರ್ಥಿಗಳು ಇಡ್ಲಿ, ಸಾಂಬಾರ್‌ ಸೇವಿಸಿದ್ದರು. ಇವರಲ್ಲಿ 25 ವಿದ್ಯಾರ್ಥಿಗಳಲ್ಲಿ ಹೊಟ್ಟೆನ ನೋವು ಕಾಣಿಸಿಕೊಂಡಿತ್ತು. ತಕ್ಷಣ ವಿದ್ಯಾರ್ಥಿಗಳನ್ನ ಚಿಂತಾಮಣಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಬೆಂಗಳೂರು; ಸಿಲಿಕಾನ್‌ ಸಿಟಿಯಲ್ಲಿ ಪುಂಡರ ಅಟ್ಟಹಾಸ, ಕಾರು ಬೈಕ್‌ಗಳ ಮೇಲೆ ಕಲ್ಲು ಎಸೆತ