Asianet Suvarna News Asianet Suvarna News

ಹಿಂದೂ ಧರ್ಮ ಟೀಕೆಯ ಅಸ್ತ್ರವಾಗ್ತಿದೆಯಾ? ಲೋಕಸಭೆ ಕುರುಕ್ಷೇತ್ರದಲ್ಲಿ ಬಿಜೆಪಿಗೆ ಚುನಾವಣಾ ಅಸ್ತ್ರನಾ ?

ತಮಿಳುನಾಡು ನಾಯಕರು ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಈ ಕುರಿತ ಚರ್ಚೆಯ ವಿಡಿಯೋ ಇಲ್ಲಿದೆ..
 

ಸನಾತನ ಧರ್ಮದ ಬಗ್ಗೆ ಇತ್ತೀಚೆಗೆ ಮಾತನಾಡಿದ ಉದಯನಿಧಿ(Udayanidhi) ಇದನ್ನು ಡೆಂಘೀ, ಮಲೇರಿಯಾಗೆ ಹೋಲಿಸಿದ್ದರು. ಇದೀಗ ಡಿಎಂಕೆ ನಾಯಕ ಎ. ರಾಜಾ(A.Raja) ಸನಾತನ ಧರ್ಮವನ್ನು(Sanatana Dharma) ಹೆಚ್‌ಐವಿ(HIV) ಮತ್ತು ಕುಷ್ಟರೋಗಕ್ಕೆ ಹೋಲಿಸಿದ್ದಾರೆ. ಇದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಉದಯನಿಧಿ ನಾವು ಸನಾತನ ಧರ್ಮವನ್ನು ನಾಶಪಡಿಸಬೇಕು ಎಂದಿದ್ದಾರೆ. ಇನ್ನೂ ರಾಜ್ಯ ನಾಕಯರಾದ ಪ್ರಿಯಾಂಕ್‌ ಖರ್ಗೆ, ಡಾ.ಜಿ. ಪರಮೇಶ್ವರ್‌ ಸಹ ಇವರ ಹೇಳಿಕೆಯನ್ನು ಸಮರ್ಥಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಇನ್ನೊಂದೆಡೆ ಲೋಕಸಭಾ ಚುನಾವಣೆಗೆ ಇದು ಬಿಜೆಪಿ ಅಸ್ತ್ರವಾಗುವ ಸಾಧ್ಯತೆಯೂ ಇದೆ. ಈ ಹಿಂದೂ ವಿರೋಧಿ ಅಜೆಂಡಾದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  ರಾಘವೇಂದ್ರ ಶ್ರೀಗಳ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ: ಮುದ್ದು ಮಕ್ಕಳ ಜೊತೆ ಶ್ರೀಗಳು ಭಾಗಿ

Video Top Stories