Asianet Suvarna News Asianet Suvarna News

Asianet Suvarna Special: ಸೋನಿಯಾ ಚಾಣಕ್ಯ ತಂತ್ರ, PK ಪವರ್ ಸಿಕ್ಕರೆ ಹೇಗೆ ಗೆಲ್ಲುತ್ತೆ ಕಾಂಗ್ರೆಸ್?

ಅನೇಕ ಚುನಾವಣೆಗಳಲ್ಲಿ ಗೆಲುವಿನ ಸೂತ್ರದಾರನಾಗಿರುವ ಪ್ರಶಾಂತ್ ಕಿಶೋರ್ ಎಂಬ ಚುನಾವಣಾ ತಂತ್ರಗಳ ನಿಪುಣ ಕಾಂಗ್ರೆಸ್ ಪಕ್ಷದ ಪುನಃಶ್ಚೇತನಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಅವರ ಈ ಮಾಸ್ಟರ್ ಪ್ಲಾನ್‌ನಲ್ಲಿ ಏನಿದೆ? ಕಾಂಗ್ರೆಸ್ ಗೆಲುವಿಗೆ ಬಹಳ ಅಗತ್ಯ ಇರುವ ಸೂತ್ರಗಳನ್ನ ಅವರು ಕಂಡುಹಿಡಿದಿದ್ದಾರೆಯೇ?
 

ನವದೆಹಲಿ, (ಏ.24): ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಬಹುತೇಕ ಚುನಾವಣೆಗಳಲ್ಲಿ ನೆಲ ಕಚ್ಚುತ್ತಾ ಬಂದಿರುವುದು ಹೌದು. ನಾಯಕತ್ವ ಬದಲಾವಣೆಯ ಕೂಗು ಹಿಂದೆಂದಿಗಿಂತಲೂ ಈಗ ಹೆಚ್ಚು ಬಲವಾಗಿ ವ್ಯಕ್ತವಾಗುತ್ತಿದೆ. ಈ ಕೂಗಿಗೆ ಸ್ಪಂದಿಸುವ ಕಿವಿಗಳೂ ಹೆಚ್ಚುತ್ತಿವೆ. ಕಾಂಗ್ರೆಸ್ ಪಕ್ಷವನ್ನು ಹೇಗಾದರೂ ಮಾಡಿ ಗೆಲುವಿನ ಲಯಕ್ಕೆ ತರಬೇಕು ಎಂದು ರಾಹುಲ್ ಗಾಂಧಿ ಆದಿಯಾಗಿ ಬಹಳ ಮಂದಿ ಕಸರತ್ತು ಮಾಡಿದ್ದಾರೆ.

ನಮ್ಜೊತೆ ಎಲ್ಲಿಯವರೆಗೆ ಇರುತ್ತೀರಿ? ಕಾಂಗ್ರೆಸ್ ಪ್ರಶ್ನೆಗೆ ಪ್ರಶಾಂತ್ ಕಿಶೋರ್ ಕೊಟ್ಟ ಉತ್ತರವಿದು

 ಆದರೆ, ಅದರಿಂದ ಆದ ಪ್ರಯೋಜನ ನಗಣ್ಯ. ಈಗ ಅನೇಕ ಚುನಾವಣೆಗಳಲ್ಲಿ ಗೆಲುವಿನ ಸೂತ್ರದಾರನಾಗಿರುವ ಪ್ರಶಾಂತ್ ಕಿಶೋರ್ ಎಂಬ ಚುನಾವಣಾ ತಂತ್ರಗಳ ನಿಪುಣ ಕಾಂಗ್ರೆಸ್ ಪಕ್ಷದ ಪುನಃಶ್ಚೇತನಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಅವರ ಈ ಮಾಸ್ಟರ್ ಪ್ಲಾನ್‌ನಲ್ಲಿ ಏನಿದೆ? ಕಾಂಗ್ರೆಸ್ ಗೆಲುವಿಗೆ ಬಹಳ ಅಗತ್ಯ ಇರುವ ಸೂತ್ರಗಳನ್ನ ಅವರು ಕಂಡುಹಿಡಿದಿದ್ದಾರೆಯೇ?

Video Top Stories