Asianet Suvarna News Asianet Suvarna News

ಕೃಷಿಕಾಯ್ದೆ ವಿರೋಧಿ ಹೋರಾಟಕ್ಕೆ 6 ತಿಂಗಳು ಪೂರ್ಣ, ಇಂದು ಕರಾಳ ದಿನ ಆಚರಣೆ

- ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ

-  ಅನ್ನದಾತನ ಹೋರಾಟಕ್ಕೆ 6 ತಿಂಗಳು ಪೂರ್ಣ

- ರೈತರು ತಾವು ಇರುವ ಕಡೆಗಳಲ್ಲೇ ಕಪ್ಪು ಬಾವುಟ ಪ್ರದರ್ಶಿನ

ಬೆಂಗಳೂರು (ಮೇ. 26): ಕೇಂದ್ರ ಕೃಷಿಕಾಯ್ದೆ ವಿರೋಧಿಸಿ ನಡೆದ ರೈತರ ಪ್ರತಿಭಟನೆಗೆ 6 ತಿಂಗಳು ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ಇಂದು ರೈತರು ಕಪ್ಪು ದಿನವನ್ನು ಆಚರಿಸಲಿದ್ದಾರೆ.

ಚಿಕ್ಕಮಗಳೂರು: ವಧುವನ್ನು ಸ್ಟೇಜ್ ಮೇಲೆ ಬಿಟ್ಟು ಎದ್ದನೋ ಬಿದ್ದನೋ ಓಡಿದ ವರ

ಕೃಷಿಕಾಯ್ದೆಗಳನ್ನು ಹಿಂಪಡೆಯದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯ ಅಂಗವಾಗಿ ಜನರು ತಾವು ಇರುವ ಕಡೆಗಳಲ್ಲೇ ಕಪ್ಪು ಬಾವುಟ ಪ್ರದರ್ಶಿಸಲು ಕರೆ ನೀಡಲಾಗಿದೆ. ರೈತರ ಈ ಹೋರಾಟಕ್ಕೆ ಜೆಡಿಎಸ್, ಕಾಂಗ್ರೆಸ್ ಸೇರಿದಂತೆ 12 ವಿಪಕ್ಷಗಳು ಬೆಂಬಲ ಘೋಷಿಸಿವೆ.