
ರಾಮ ಅಧಿಕಾರ ತ್ಯಾಗದ ಪ್ರತೀಕ: ಕಾಂಗ್ರೆಸ್ ಪ್ರತಿಕ್ರಿಯೆ!
ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ವಿಪಕ್ಷ ಕಾಂಗ್ರೆಸ್, ಜನರ ನಂಬಿಕೆಗಳಿಗೆ ಗೌರವ ನೀಡಿದ ಸುಪ್ರೀಂಕೋರ್ಟ್’ಗೆ ಧನ್ಯವಾದ ಅರ್ಪಿಸಿದೆ.
ನವದೆಹಲಿ(ನ.09):ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ವಿಪಕ್ಷ ಕಾಂಗ್ರೆಸ್, ಜನರ ನಂಬಿಕೆಗಳಿಗೆ ಗೌರವ ನೀಡಿದ ಸುಪ್ರೀಂಕೋರ್ಟ್’ಗೆ ಧನ್ಯವಾದ ಅರ್ಪಿಸಿದೆ. ಆದರೆ ಪ್ರಭು ಶ್ರೀರಾಮ ಅಧಿಕಾರ ತ್ಯಾಗದ ಪ್ರತೀಕವಾಗಿದ್ದು, ಅಧಿಕಾರದ ಹಸಿವಿನ ಪ್ರತೀಕವಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದೆ. ಅಧಿಕಾರದ ಲಾಲಸೆಯಿಂದ ಪ್ರಭು ಶ್ರೀರಾಮನ ಹೆಸರನ್ನು ಬಳಸುವುದನ್ನು ಇನ್ನಾದರೂ ರಾಜಕೀಯ ಪಕ್ಷಗಳು ಬಿಡಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
Add Asianetnews Kannada as a Preferred Source

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..