
ಮಕ್ಕಳಿಗೆ ಕೊರೋನಾ ಬಂದರೆ ಆರೈಕೆ ಮಾಡೋದ್ಹೇಗೆ ? ತಜ್ಞರು ಏನ್ ಹೇಳ್ತಾರೆ ?
ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋ ಹಾಗೆ ಕೊರೋನಾ ಕಾಟ ಮತ್ತೆ ಹೆಚ್ಚಾಗ್ತಿದೆ. ಹಿರಿಯರು, ಕಿರಿಯರೆನ್ನದೆ ಎಲ್ಲರೂ ಮತ್ತೆ ಶೀತ, ಕೆಮ್ಮು, ನೆಗಡಿಯ ಸಮಸ್ಯೆಯಿಂದ ಬಳಲ್ತಿದ್ದಾರೆ. ಹಾಗಿದ್ರೆ ಮಕ್ಕಳಿಗೆ ಕೊರೋನಾ ಬಂದರೆ ಆರೈಕೆ ಮಾಡೋದ್ಹೇಗೆ ? ತಜ್ಞರು ಏನ್ ಹೇಳ್ತಾರೆ ತಿಳಿಯೋಣ.
ಚೀನಾದ ವುಹಾನ್ನಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ದೇಶಾದ್ಯಂತ ಅಲ್ಲೋಲಕಲ್ಲೋಲವನ್ನುಂಟು ಮಾಡಿತ್ತು. ಸೋಂಕಿನ ತೀವ್ರತೆಗೆ ಕೋಟ್ಯಾಂತರ ಮಂದಿ ಅಸ್ವಸ್ಥರಾದರು. ಅಸಂಖ್ಯಾತ ಮಂದಿ ಮೃತಪಟ್ಟರು. ಸರ್ಕಾರ ಹಂತ ಹಂತವಾಗಿ ಲಸಿಕೆಯನ್ನು ಬಿಡುಗಡೆ ಮಾಡಿದ ನಂತರ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂತು. ಆದರೆ ಈಗ ಮತ್ತೆ ಕೋವಿಡ್ ಸೋಂಕು ವ್ಯಾಪಕವಾಗುತ್ತಿದೆ. ಜನರು ಮತ್ತೆ ಶೀತ, ಕೆಮ್ಮು, ನೆಗಡಿ, ಗಂಟಲು ನೋವಿನ ಸಮಸ್ಯೆಯಿಂದ ಬಳಲ್ತಿದ್ದಾರೆ. ಅದರಲ್ಲೂ ಮಕ್ಕಳಿಗೆ ಕೊರೋನಾ ಬರುವ ಸಾಧ್ಯತೆ ಹೆಚ್ಚು. ಹಾಗಿದ್ರೆ ಮಕ್ಕಳಿಗೆ ಕೊರೋನಾ ಬಂದರೆ ಆರೈಕೆ ಮಾಡೋದ್ಹೇಗೆ ? ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಏನ್ ಹೇಳ್ತಾರೆ ಕೇಳೋಣ.
Add Asianetnews Kannada as a Preferred Source
