ಬೆಂಗಳೂರಲ್ಲಿ ‘ಮಹಾಲಕ್ಷ್ಮೀ ಲೇಔಟ್ ಹಬ್ಬ’ ಸಂಭ್ರಮ: ಕನ್ನಡಪ್ರಭ, ಸುವರ್ಣ ನ್ಯೂಸ್ ಸಹಯೋಗದಲ್ಲಿ ಕಾರ್ಯಕ್ರಮ

ಬೆಂಗಲೂರಲ್ಲಿ ಮಹಾಲಕ್ಷ್ಮಿ ಲೇಔಟ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಕನ್ನಡಪ್ರಭ, ಏಷ್ಯಾ ನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ ಬೆಂಗಳೂರಿಗರಿಗೆ ಹಬ್ಬದ ಸಂಭ್ರಮವನ್ನು ಉಣ ಬಡಿಸ್ತಿದೆ. ದಿನಾ ಕೆಲಸದ ಜಂಜಾಟದಲ್ಲಿದ್ದ ಸಿಟಿ ಮಂದಿ ಮಹಾಲಕ್ಷ್ಮಿಲೇಔಟ್ ಹಬ್ಬದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ರು.
 

Share this Video
  • FB
  • Linkdin
  • Whatsapp

ಕೆಲಸದ ಜಂಜಾಟದಲ್ಲಿದ್ದ ಸಿಲಿಕಾನ್ ಸಿಟಿ ಮಂದಿಗೆ ಕನ್ನಡಪ್ರಭ, ಏಷ್ಯಾ ಸುವರ್ಣ ನ್ಯೂಸ್ ಹಬ್ಬದ ಸಂಭ್ರಮವನ್ನು ಉಣಬಡಿಸುತ್ತಿದೆ. ಮಹಾಲಕ್ಷ್ಮಿಲೇಔಟ್ ಫುಡ್ ಫೆಸ್ಟಿವಲ್‌ನಲ್ಲಿ(Mahalakshmi layout festival) ವಿವಿಧ ವಿನ್ಯಾಸದ ಉಡುಗೆಗಳು ಅದಕ್ಕೆ ಒಪ್ಪುವಂತಹ ಕಿವಿಯೋಲೆ, ಜ್ಯುವೆಲರಿ ಹಾಗೂ ಬಾಯಲ್ಲಿ ನೀರೂರಿಸೋ ವಿವಿಧ ಬಗೆಯ ತಿಂಡಿ ತಿನಿಸುಗಳು(Food) ಎಲ್ಲರ ಗಮನ ಸೆಳೆಯಿತು. ಶುಕ್ರವಾರದಿಂದ ಆರಂಭಗೊಂಡಿರುವ ಮಹಾಲಕ್ಷ್ಮೀ ಲೇಔಟ್ ಹಬ್ಬವನ್ನು ಜನರು ಕಣ್ತುಂಬಿಕೊಂಡರು. ಎರಡನೇ ದಿನವೂ ವಿವಿಧ ಕಾರ್ಯಕ್ರಮ ಫನ್ನಿ ಗೇಮ್ಸ್ ಜನರ ಗಮನಸೆಳೆದಿದ್ದು, ಜನಸಾಗರವೇ ಹರಿದು ಬಂದಿತ್ತು. ವಿಶೇಷ ಅಂದ್ರೆ ಇಂದು ಕಾರ್ಯಕ್ರಮದಲ್ಲಿ ನಟ ನಿನಾಸಂ ಸತೀಶ್(Sathish Ninasam) ಭಾಗಿಯಾಗಿದ್ರು. ಸಾಧಕರನ್ನು ಗೌರವಿಸುವ ಮೂಲಕ ಸತೀಶ್ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು. ರಾಣಿ ಅಬ್ಬಕ್ಕ ಕ್ರೀಡಾಂಗಣದಲ್ಲಿ ಮಹಾಲಕ್ಷ್ಮಿ ಲೇಔಟ್ ಸಂಭ್ರಮ ನಡೆಯುತ್ತಿದ್ದು, ವೀಕೆಂಡ್ ಹಿನ್ನಲೆ ಸಾಕಷ್ಟು ಸಂಖ್ಯೆಯಲ್ಲಿ ಜನ ಭೇಟಿ ನೀಡಿ ಎಂಜಾಯ್ ಮಾಡ್ತಿದ್ದಾರೆ. ನಾಳೆಯೂ ಹಬ್ಬದ ಸಂಭ್ರ ಮತ್ತಷ್ಟು ಕಿಕ್ಕೇರಲಿದ್ದು ವೀಕೆಂಡ್ ಆಗಿದ್ದರಿಂದ ತಾವೂ ತಮ್ಮ ಕುಟುಂಬಸಮೇತ ಮಹಾಲಕ್ಷ್ಮೀ ಲೇಔಟ್ ಹಬ್ಬದಲ್ಲಿ ಪಾಲ್ಗೊಳ್ಳಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಆಸ್ತಿ ನೋಂದಣಿ ಮಾಡಿಸೋರೆ ಹುಷಾರ್ ! ಸರ್ಕಾರಿ ಕಚೇರಿಯಲ್ಲೇ ನಿಮ್ಮ ಖಾತೆಗೆ ಬೀಳುತ್ತೆ ಕನ್ನ..!

Related Video