ಪುನೀತ್ ಸಮಾಧಿಗೆ ಹಾಲು- ತುಪ್ಪ ಕಾರ್ಯ, ಕಣ್ಣೀರಿಟ್ಟು ತೆರಳಿದ ಪತ್ನಿ
5 ನೇ ದಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಕುಟುಂಬದ ಸದಸ್ಯರಿಂದ ಹಾಲು ತುಪ್ಪ ಬಿಡುವ ಶಾಸ್ತ್ರ ನೆರವೇರಿತು. ಪುನೀತ್ ಅವರ ಮಾವ ಗೋವಿಂದ ರಾಜ್ ನೇತೃತ್ವದಲ್ಲಿ ಈ ಕಾರ್ಯ ನೆರವೇರಿತು.
ಬೆಂಗಳೂರು (ನ. 03): 5 ನೇ ದಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಕುಟುಂಬದ ಸದಸ್ಯರಿಂದ ಹಾಲು ತುಪ್ಪ ಬಿಡುವ ಶಾಸ್ತ್ರ ನೆರವೇರಿತು. ಪುನೀತ್ (Puneeth Rajkumar) ಅವರ ಮಾವ ಗೋವಿಂದ ರಾಜ್ ನೇತೃತ್ವದಲ್ಲಿ ಈ ಕಾರ್ಯ ನೆರವೇರಿತು.
ಅಪ್ಪು ಕೊನೆಯ ಕರೆ ಯಾರಿಗೆ ಮಾಡಿದ್ದರು ಗೊತ್ತಾ?
ಪುನೀತ್ಗೆ ಇಷ್ಟವಾದ ತಿಂಡಿಗಳನ್ನು ಎಡೆಗೆ ಇಡಲಾಯಿತು. ಕುಟುಂಬದ ಸದಸ್ಯರು ಒಬ್ಬೊಬ್ಬರು ಒಂದೊಂದು ಖಾದ್ಯಗಳನ್ನು ಇಟ್ಟು ನಮಿಸಿದರು. ಪೂಜೆ ಮುಗಿದ ತಕ್ಷಣ ಪತ್ನಿ ಅಶ್ವಿನಿ ಕಣ್ಣೀರಿಡುತ್ತಾ ಹೊರ ಬಂದರು. ರಾಘಣ್ಣ ಭಜನೆ ಮಾಡಿ ಸಹೋದರನಿಗೆ ವಿದಾಯ ಕೋರಿದರು.