ಉಪಾಸನಾ ಸೀಮಂತ ಕಾರ್ಯಕ್ರಮ: ಮುನಿಸು ಮರೆತು ಒಂದಾದ್ರ ಅಲ್ಲು ಅರ್ಜುನ್, ರಾಮ್ಚರಣ್ !
ಉಪಾಸನಾ ಸೀಮಂತ ಕಾರ್ಯಕ್ರಮ ಹೈದರಾಬಾದ್ನಲ್ಲಿ ನಡೆದಿದ್ದು, ಇದರಲ್ಲಿ ನಟ ಅಲ್ಲು ಅರ್ಜುನ್ ಕುಟುಂಬ ಭಾಗಿಯಾಗಿತ್ತು.
ನಟ ರಾಮ್ಚರಣ್ ಪತ್ನಿ ಉಪಾಸನಾ ಸೀಮಂತ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಕುಟುಂಬ ಭಾಗಿಯಾಗಿದೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ಸೀಮಂತ ಕಾರ್ಯಕ್ರಮ ನಡೆದಿದೆ. ಈ ಮೂಲಕ ಮುನಿಸನ್ನು ಮರೆತು ಅಲ್ಲು ಅರ್ಜುನ್ ಹಾಗೂ ರಾಮ್ಚರಣ್ ಕುಟುಂಬ ಒಂದಾಗಿದೆ. ಬರೋಬ್ಬರಿ 10 ವರ್ಷದ ನಂತರ ಚಿರಂಜೀವಿ ಸೊಸೆ ಗರ್ಭಿಣಿಯಾಗಿದ್ದಾರೆ. ಇನ್ನೂ ಈ ಕಾರ್ಯಕ್ರಮದಲ್ಲಿ ಸಾನಿಯಾ ಮಿರ್ಜಾ ಮತ್ತು ಅಲ್ಲು ಅರ್ಜುನ್ ಸೇರಿದಂತೆ ಅವರ ಫ್ಯಾಮಿಲಿ ಸದಸ್ಯರು ಸಹ ಭಾಗಿಯಾಗಿದ್ದರು. ಮೂರು ವಾರಗಳ ಹಿಂದೆ ದುಬೈನಲ್ಲಿ ಉಪಾಸನಾ ಬೇಬಿಬಂಪ್ ಫೋಟೋ ಶೂಟ್ ಮಾಡಿಸಿದ್ದರು. ನಟ ಅಲ್ಲು ಅರ್ಜುನ್ ದಂಪತಿ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದೇ ಇದರ ವಿಶೇಷತೆಯಾಗಿದೆ.
ಇದನ್ನೂ ವೀಕ್ಷಿಸಿ: ಐಪಿಎಲ್ನಲ್ಲೂ ಜೋರಾಗಿದೆ ಪಂಜುರ್ಲಿ ಹವಾ: ಆರ್ಆರ್ ವಿರುದ್ಧ ಆರ್ಸಿಬಿ ಗೆಲ್ಲಲು ದೈವವೇ ಕಾರಣನಾ ?