
Today Horoscope: ಇಂದು ಪ್ರದೋಷ ಪೂಜೆ ಮಾಡಿ..ಇದರಿಂದ ದೊರೆಯುವ ಫಲಗಳು ಏನು ಗೊತ್ತಾ ?
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಬುಧವಾರ, ದ್ವಾದಶಿ-ತ್ರಯೋದಶಿ ತಿಥಿ, ರೋಹಿಣಿ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಂದು ಪ್ರದೋಷ ಇದ್ದು, ಇದರಲ್ಲಿ ಭಾಗವಹಿಸಿ. ಇಂದು ಶಾಂಭ ಸದಾಶಿವರ ಪೂಜೆಯನ್ನು ಮಾಡಿ. ಈ ಪೂಜೆಯನ್ನು ಮಾಡುವುದರಿಂದ ಶತ್ರುಗಳು ದೂರವಾಗುತ್ತಾರಂತೆ. ಮಿಥುನ ರಾಶಿಯವರಿಗೆ ಅಧಿಕ ವ್ಯಯ ಇದ್ದು, ವೃತ್ತಿಯಲ್ಲಿ ಒತ್ತಡವಿರಲಿದೆ. ಮಿತ್ರರ ಜೊತೆ ವಿಹಾರ. ಕೃಷಿಕರಿಗೆ ಹಿನ್ನಡೆ. ಗ್ರಾಮ ದೇವತಾದರ್ಶನ ಮಾಡಿ. ಕರ್ಕಟಕ ರಾಶಿಯವರಿಗೆ ಲಾಭದ ದಿನ. ವ್ಯಾಪಾರಿಗಳಿಗೆ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಸೇವಕರಿಂದ ಅನಾನುಕೂಲ. ಆಂಜನೇಯ ಪ್ರಾರ್ಥನೆ ಮಾಡಿ.
ಇದನ್ನೂ ವೀಕ್ಷಿಸಿ: ಸೂರಜ್ ರೇವಣ್ಣ ಮಹಾನ್ ದೈವ ಭಕ್ತ, ಅವ್ನು ಬಹಳ ಬೇಗ ಹೊರಬರುತ್ತಾನೆ: ಹೆಚ್ ಡಿ ರೇವಣ್ಣ