Asianet Suvarna News Asianet Suvarna News

ಕುಡಿದ ಮತ್ತಿನಲ್ಲಿ ಈಜಲು ತೆರಳಿದ ಯುವಕ: ಬ್ರಿಡ್ಜ್‌ ಕಮ್‌ ಬ್ಯಾರೇಜ್‌ನಲ್ಲಿ ಜಲಸಮಾಧಿ

ಕುಡಿದ ಮತ್ತಿನಲ್ಲಿ ಈಜಾಡಲು ತೆರಳಿದ್ದ ಯುವಕ ಸಾವು
ಮೊಹಮ್ಮದ್ ಸಾಜೀದ್ ದಸ್ತಗೀರ್ (25) ಮೃತ ಯುವಕ
ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕುಡಿದ ಮತ್ತಿನಲ್ಲಿ(Drink) ನೀರಿಗೆ ಧುಮುಕಿ ಯುವಕ(Youth Died) ಸಾವಿಗೀಡಾಗಿರುವ ಘಟನೆ ಕಲಬುರಗಿಯ(Kalaburagi) ಕಮಲಾಪುರ ತಾಲೂಕಿನ ಪಟವಾದಲ್ಲಿ ನಡೆದಿದೆ. ಬ್ರಿಡ್ಜ್‌ ಕಮ್‌ ಬ್ಯಾರೇಜ್‌ನಲ್ಲಿ ಯುವಕ ಜಲಸಮಾಧಿಯಾಗಿದ್ದಾನೆ. ಸ್ನೇಹಿತರ ಕಣ್ಣೆದುರೇ ಎದುರೇ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಮೊಹಮ್ಮದ್ ಸಾಜೀದ್ ದಸ್ತಗೀರ್ (25) ಮೃತ ಯುವಕನಾಗಿದ್ದಾನೆ. ಸ್ನೇಹಿತರ ಮೊಬೈಲ್‌ನಲ್ಲಿ ಯುವಕನ ಸಾವಿನ ದೃಶ್ಯ ಸೆರೆಯಾಗಿದೆ. ಸ್ನೇಹಿತರ ಜೊತೆ ಮಸ್ತಾನ್‌ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ವೀಕ್ಷಿಸಿ:  ಬೆಂಗಳೂರಿನ ವಿದ್ಯಾರ್ಥಿನಿ ಪ್ರಬುದ್ಧ ಸಾವಿನ ಪ್ರಕರಣಕ್ಕೆ ಟ್ವಿಸ್ಟ್! ಅಪ್ರಾಪ್ತ ಆರೋಪಿ ಬಂಧನ