
ದ. ಭಾರತದಲ್ಲಿ ಉಗ್ರ ಜಾಲ, ಶಂಕಿತ ಉಗ್ರರು ಬಿಚ್ಚಿಟ್ರು ಸ್ಫೋಟಕ ಸತ್ಯ!
ಕರ್ನಾಟಕದಲ್ಲಿ ಭಯೋತ್ಪಾದಕ ಜಾಲ ಹಬ್ಬಿಕೊಳ್ಳುತ್ತಿದ್ದು, ಬಂಧಿತ ಶಂಕಿತ ಉಗ್ರನೊಬ್ಬ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾನೆ. ದಕ್ಷಿಣ ಭಾರತದಲ್ಲಿ ಉಗ್ರ ಜಾಲ ವಿಸ್ತರಣೆಗೆ ಯತ್ನಿಸುತ್ತಿರುವ ಬಗ್ಗೆಯೂ ಮಾಹಿತಿಬ ನೀಡಿದ್ದಾನೆ. ಈ ವಿಚಾರ ಕೇಳಿ ಜಿಹಾದಿಗಳನ್ನ ಬಂಧಿಸಿದ ತಮಿಳುನಾಡು ಪೊಲೀಸರಿಗೇ ಶಾಕ್ ಆಗಿದೆ.
ಬೆಂಗಳೂರು[ಜ.12]: ಕರ್ನಾಟಕದಲ್ಲಿ ಭಯೋತ್ಪಾದಕ ಜಾಲ ಹಬ್ಬಿಕೊಳ್ಳುತ್ತಿದ್ದು, ಬಂಧಿತ ಶಂಕಿತ ಉಗ್ರನೊಬ್ಬ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾನೆ. ದಕ್ಷಿಣ ಭಾರತದಲ್ಲಿ ಉಗ್ರ ಜಾಲ ವಿಸ್ತರಣೆಗೆ ಯತ್ನಿಸುತ್ತಿರುವ ಬಗ್ಗೆಯೂ ಮಾಹಿತಿಬ ನೀಡಿದ್ದಾನೆ. ಈ ವಿಚಾರ ಕೇಳಿ ಜಿಹಾದಿಗಳನ್ನ ಬಂಧಿಸಿದ ತಮಿಳುನಾಡು ಪೊಲೀಸರಿಗೇ ಶಾಕ್ ಆಗಿದೆ.
Add Asianetnews Kannada as a Preferred Source

ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಗ್ಯಾಂಗ್ಸ್ಟರ್ ಪರಾರಿ: ಮಂಗಳೂರಲ್ಲಿ ಹೈಅಲರ್ಟ್
ಕೇರಳದ ಕಣ್ಣೂರಿನ ಕಾಡಿನಲ್ಲಿ ಜಿಹಾದಿಗಳಿಗೆ ಟ್ರೈನಿಂಗ್ ನೀಡಿದ್ದು, RSS ನಾಯಕರ ಹತ್ಯೆಗೆ ತರಬೇತಿಯನ್ನೂ ನೀಡಲಾಗಿತ್ತು. ತಂಡವು ಗೊಂಬೆಗಳನ್ನು ಸಾಲಾಗಿ ನಿಲ್ಲಿಸಿ ಫೈರಿಂಗ್ ಟ್ರೈನಿಂಗ್ ನೀಡಿತ್ತು. ಬೆಂಗಳೂರಿನ ಮೂವರು ಯುವಕರು ಕೂಡಾ ಇಲ್ಲಿ ತರಬೇತಿ ಪಡೆದಿದ್ದು, ಕೇಂದ್ರ ತನಿಖಾ ತಂಡಕ್ಕೆ ಸುಳಿವು ಸಿಕ್ಕಿತ್ತು. ಹೀಗಾಗಿ ಈ ಮೂವರು ಯುವಕರ ಮೇಲೆ ಕೇಂದ್ರದ ತಂಡಗಳು ನತೀವ್ರ ನಿಗಾ ಇಟ್ಟಿದ್ದವು.