Asianet Suvarna News Asianet Suvarna News

ಸ್ವೆಟರ್ ಹಗರಣ: ನೀವು ಆನೆ ಆಗಿದ್ದರೆ ಪಲಾಯನ ಮಾಡ್ಬೇಡಿ, ಜಗ್ಗೇಶ್‌ಗೆ ಚರ್ಚೆಗೆ ಆಹ್ವಾನ

ಸ್ವೆಟರ್ ಹಗರಣಅ ಆರೋಪವನ್ನು ಜಗ್ಗೇಶ್ ತಳ್ಳಿಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಡಿಎಸ್‌ಎಸ್‌ ಮುಖಂಡ ಸಿ.ಎಸ್ ರಘು ಕೆಂಡಾಮಂಡಲರಾಗಿದ್ದು, ನೀವು ಆನೆ ಆಗಿದ್ದರೆ ಪಲಾಯನ ಮಾಡಬೇಡಿ ಎಂದು ಜಗ್ಗೇಶ್‌ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.

ಬೆಂಗಳೂರು, (ಆ.25): ಚಂದನವನದ ಮೋಸ್ಟ್​ ಫೇಮಸ್​ ಹಾಸ್ಯ ನಟ, ಹೀರೋ ಕೋಮಲ್​ ವಿರುದ್ಧ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಸಂಘಟನೆಗಳ ವತಿಯಿಂದ ಗಂಭೀರ ಆರೋಪ ಕೇಳಿ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಸ್ವೆಟರ್​ ಯೋಜನೆಯ ಹಣವನ್ನ ತಮ್ಮ ಲಾಭಕ್ಕೆ ಕೋಮಲ್​ ಬಳಸಿಕೊಂಡಿದ್ದಾರೆ ಎಂಬ ಆರೋಪ ಬೆಳಕಿಗೆ ಬಂದಿದೆ.

ಕೋಮಲ್ ಸ್ವೆಟರ್ ಹಗರಣ: ದಲಿತ ಸಂಘರ್ಷ ಸಮಿತಿಯನ್ನು ನಾಯಿಗೆ ಹೋಲಿಸಿದ ಜಗ್ಗೇಶ್?

ಆದ್ರೆ, ಈ ಆರೋಪವನ್ನು ಜಗ್ಗೇಶ್ ತಳ್ಳಿಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಡಿಎಸ್‌ಎಸ್‌ ಮುಖಂಡ ಸಿ.ಎಸ್ ರಘು ಕೆಂಡಾಮಂಡಲರಾಗಿದ್ದು, ನೀವು ಆನೆ ಆಗಿದ್ದರೆ ಪಲಾಯನ ಮಾಡಬೇಡಿ ಎಂದು ಜಗ್ಗೇಶ್‌ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.

Video Top Stories