ತಲವಾರ್ನಲ್ಲಿ ಕೇಕ್ ಕಟ್ ಮಾಡಿದ್ದ ಬೆಳಗಾವಿ 'ವೀರ'ನ ಮೇಲೆ ಪ್ರಕರಣ
ಸರ್ಕಾರಿ ಶಾಲೆ ಆವರಣದಲ್ಲಿ ತಲವಾರ್ ಹಿಡಿದು ಬರ್ತ್ ಡೇ ಆಚರಣೆ ಪ್ರಕರಣ/ ಬರ್ತ್ ಡೇ ಮಾಡಿಕೊಂಡ ಜ್ಯೋತಿಬಾ ರಾಜು ನಾಯಕ ವಿರುದ್ಧ ಪ್ರಕರಣ ದಾಖಲು/ ಜ್ಯೋತಿಬಾ ನಾಯಕ, ಬೆಳಗಾವಿಯ ವಿಜಯ ನಗರ ನಿವಾಸಿ/ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲು
ಬೆಳಗಾವಿ(ಫೆ. 25) ಶಾಲೆಯಲ್ಲೇ ಖಡ್ಗದಿಂದ ಕೇಕ್ ಕತ್ತರಿಸಿ ಬರ್ತಡೆ ಆಚರಣೆ ಮಾಡಿಕೊಂಡವನ ಮೇಲೆ ಪ್ರಕರಣ ದಾಖಲಾಗಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು.
ವಿವಾಹಿತೆಯನ್ನು ತಲವಾರ್ ನಲ್ಲಿ ಕೊಚ್ಚಿ ಕೊಂದ
ಸರ್ಕಾರಿ ಶಾಲೆ ಆವರಣದಲ್ಲಿ ತಲವಾರ್ ಹಿಡಿದು ಕೇಕ್ ಕಟ್ ಮಾಡಿದ್ದ ಜ್ಯೋತಿಬಾ ರಾಜು ನಾಯಕ ವಿರುದ್ಧ ಪ್ರಕರಣ ದಾಖಲಾಗಿದೆ. ಜ್ಯೋತಿಬಾ ನಾಯಕ, ಬೆಳಗಾವಿಯ ವಿಜಯ ನಗರ ನಿವಾಸ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಬುಧಬಾರ ತಡರಾತ್ರಿ ಸರ್ಕಾರಿ ಶಾಲೆ ಆವರಣದಲ್ಲಿ ನೂರಾರು ಜನರನ್ನು ಸೇರಿಸಿ ಬರ್ತ್ ಡೇ ಆಚರಣೆ ಮಾಡಿಕೊಂಡಿದ್ದ.