Asianet Suvarna News Asianet Suvarna News

ಮಗನ ಸಾಧನೆಗೆ ಕನ್ನಡ ತಾಯಿ ಕಾರಣ, ಕನ್ನಡಾಂಬೆ ಮಗ ರಾಜಮೌಳಿ- ವಿಜಯೇಂದ್ರ ಪ್ರಸಾದ್!

ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕನ್ನಡ ನೆಲದ ಬಗ್ಗೆ  ಮಾತನಾಡಿದ್ದು,ಮಗನ ಸಾಧನೆಗೆ ಕನ್ನಡ ತಾಯಿಯೇ ಕಾರಣ ಎಂದಿದ್ದಾರೆ.

ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕನ್ನಡ ನೆಲದ ಬಗ್ಗೆ  ಮಾತನಾಡಿದ್ದು,ಮಗನ ಸಾಧನೆಗೆ ಕನ್ನಡ ತಾಯಿಯೇ ಕಾರಣ ಎಂದಿದ್ದಾರೆ.14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು.ಮೆಟ್ಟಿದರೆ ಕನ್ನಡ ಮಣ್ಣಿನಲ್ಲಿ ಮೆಟ್ಟಬೇಕು. ಆದ್ರೆ ನನಗೆ ಇಲ್ಲಿ ಹುಟ್ಟುವ ಅದೃಷ್ಟ ಇಲ್ಲ ನನ್ನ ಮಗ, ನನ್ನ ಮಗಳು ಇಲ್ಲೇ ಹುಟ್ಟಿದ್ದಾರೆ ಎಂದು ಕನ್ನಡ ನೆಲದ ಬಗ್ಗೆ ಅಭಿಮಾನದಿಂದ ಮಾತನಾಡಿದರು. ನನ್ನ ಮಗ ರಾಜಮೌಳಿ ಸಾಧನೆ ಮಾಡುವುದಕ್ಕೆ ಕನ್ನಡ ತಾಯಿಯ ದಯೆಯೇ ಕಾರಣ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.

Video Top Stories