Asianet Suvarna News Asianet Suvarna News

ಅಕ್ರಮವಾಗಿ ಕಳ್ಳಭಟ್ಟಿ ವ್ಯಾಪಾರ ಮಾಡುತ್ತಿದ್ದವ ಅರೆಸ್ಟ್..!

ಚಾಮರಾಜನಗರದ ಹನೂರು ತಾಲೋಕಿನ ದೊರೆದೊಡ್ಡಿ ಗ್ರಾಮದಲ್ಲಿ  ಈ ಘಟನೆ ಬೆಳಕಿಗೆ ಬಂದಿದ್ದು, ಭೀಮಾನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳಭಟ್ಟಿ ಕುಡಿದರೆ ಕೊರೋನಾ ಬರಲ್ಲ ಎಂದು ನಂಬಿಸಿ ಭೀಮಾನಾಯ್ಕ ವ್ಯಾಪಾರ ಮಾಡುತ್ತಿದ್ದ.

ಚಾಮರಾಜನಗರ(ಏ.12): ಕಳ್ಳಭಟ್ಟಿ ಕುಡಿದ್ರೆ ಕೊರೋನಾ ವೈರಸ್ ಬರೊಲ್ಲವೆಂದು ನಂಬಿಸಿ ಕಳ್ಳಭಟ್ಟಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ. 

ಕೋಲಾರದಲ್ಲಿ ಜನರನ್ನು ನಿಯಂತ್ರಿಸಲು ಫೀಲ್ಡಿಗಿಳಿದ ಮಾಜಿ ಸೈನಿಕರು..!

ಚಾಮರಾಜನಗರದ ಹನೂರು ತಾಲೋಕಿನ ದೊರೆದೊಡ್ಡಿ ಗ್ರಾಮದಲ್ಲಿ  ಈ ಘಟನೆ ಬೆಳಕಿಗೆ ಬಂದಿದ್ದು, ಭೀಮಾನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳಭಟ್ಟಿ ಕುಡಿದರೆ ಕೊರೋನಾ ಬರಲ್ಲ ಎಂದು ನಂಬಿಸಿ ಭೀಮಾನಾಯ್ಕ ವ್ಯಾಪಾರ ಮಾಡುತ್ತಿದ್ದ.

ನಾದಸ್ವರದ ಡೋಲಿನೊಳಗೆ ಮದ್ಯ ಇಟ್ಟು ಅಕ್ರಮ ಸಾಗಾಟ; ಮಾರಾಟಗಾರ ಪೊಲೀಸ್ ವಶಕ್ಕೆ

ತಾನೇ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ದುಬಾರಿ ಬೆಲೆಗೆ ಕಳ್ಳಬಟ್ಟಿಯನ್ನು ಭೀಮಾನಾಯ್ಕ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.