ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ

ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನದಿಂದ ನಡೆದ ಭಾರಿ ಭದ್ರತಾ ತಪಾಸಣೆ ನಡುವೆ ಭದ್ರತಾ ಪಡೆಯ ಶ್ವಾನ ಸಿದ್ಧಲಿಂಗ ಸ್ವಾಮೀಜಿಗಳಿಗೆ ಸಲ್ಯೂಟ್ ಹೊಡೆದ ದೃಶ್ಯ ಎಲ್ಲರ ಗಮನಸೆಳೆದಿದೆ.  ಶ್ವಾನಕ್ಕೆ ಬಿಸ್ಕೆಟ್ ನೀಡಿ ಕೆಲ ಹೊತ್ತು ಮುದ್ದಾಡಿದ್ದಾರೆ. 

Share this Video
  • FB
  • Linkdin
  • Whatsapp

ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ ಜನ್ಮದಿನಾಚರಣೆ ಮತ್ತು ಗುರುವಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿದ್ದಾರೆ. ಈಗಾಗಲೆ ಬೆಂಗಳೂರಿಗೆ ಆಗಮಿಸಿರುವ ದ್ರೌಪದಿ ಮುರ್ಮುವನ್ನು ರಾಜ್ಯಪಾಲರು ಬರಮಾಡಿಕೊಂಡಿದ್ದಾರೆ. ಇತ್ತ ರಾಷ್ಟ್ರಪತಿಗಳ ಆಗಮನದ ಹಿನ್ನಲೆಯಲ್ಲಿ ತುಮಕೂರು ಸಿದ್ಧಗಂಗಾ ಮಠದಲ್ಲಿ ಭದ್ರತಾ ತಪಾಸಣೆ ನಡೆದಿದೆ. ಭದ್ರತಾ ಸಿಬ್ಬಂದಿಗಳ ಜೊತೆ ಶ್ವಾನದಳ ಕೂಡ ತಪಾಸಣೆ ನಡೆಸಿದೆ. ಈ ವೇಳೆ ಸಿದ್ದಲಿಂಗ ಸ್ವಾಮೀಜಿ ಮುಂದೆ ಶ್ವಾನ ಸಲ್ಯೂಟ್ ಮಾಡಿದ ದೃಶ್ಯ ಎಲ್ಲರ ಗಮನಸೆಳೆದಿದೆ. ಈ ವೇಳೆ ಸ್ವಾಮೀಜಿಗಳು ಶ್ವಾನಕ್ಕೆ ಬಿಸ್ಕಟ್ ನೀಡಿದ್ದಾರೆ. 

Related Video