- Home
- News
- State
- Karnataka News Live: ಶಿವಮೊಗ್ಗ - ಮಕ್ಕಳಿಗೆ ಪೌಷ್ಟಿಕ ಮೊಟ್ಟೆ ಖರೀದಿ - ಶಿಕ್ಷಕರ ಜೇಬಿಗೆ ಕತ್ತರಿ..!
Karnataka News Live: ಶಿವಮೊಗ್ಗ - ಮಕ್ಕಳಿಗೆ ಪೌಷ್ಟಿಕ ಮೊಟ್ಟೆ ಖರೀದಿ - ಶಿಕ್ಷಕರ ಜೇಬಿಗೆ ಕತ್ತರಿ..!

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿಡಬ್ಲ್ಯುಸಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಹೈಕಮಾಂಡ್ ನಾಯಕರೊಂದಿಗೆ ಸೋಮವಾರ ಇಲ್ಲವೇ ಮಂಗಳವಾರ ಮಹತ್ವದ ಸಭೆ ನಡೆಸಲಿದ್ದಾರೆ. ಹೈಕಮಾಂಡ್ ನಾಯಕರೊಂದಿಗೆ ಸಭೆಗೆ ಇನ್ನೂ ನಿರ್ದಿಷ್ಟ ಸಮಯ ನಿಗದಿಯಾಗಿಲ್ಲ, ಸೋಮವಾರ ನಿಗದಿಯಾಗಲಿದೆ. ಒಂದು ವೇಳೆ ಸೋಮವಾರ ಸಮಯ ನಿಗದಿಯಾಗದಿದ್ದಲ್ಲಿ ಮಂಗಳವಾರ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯೇ ಮೂವರೂ ನಾಯಕರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ರಾಜ್ಯ ಎಂಪಿಗಳ ಜತೆ ಸಿಎಂ ಸಭೆ
ಇನ್ನೊಂದೆಡೆ ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ರಾಜ್ಯದ ಯೋಜನೆಗಳು ಸೇರಿ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರೊಂದಿಗೆ ನವದೆಹಲಿಯಲ್ಲಿ ಸೋಮವಾರ ಸಂಜೆ ಸಭೆ ನಡೆಸಲಿದ್ದಾರೆ. ಸೋಮವಾರ ಬೆಳಗ್ಗೆಯೇ ಬೆಂಗಳೂರಿನಿಂದ ದೆಹಲಿಗೆ ತೆರಳುವ ಮುಖ್ಯಮಂತ್ರಿ ಅವರು, ಸಂಜೆ ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ.
Karnataka News Liveಶಿವಮೊಗ್ಗ - ಮಕ್ಕಳಿಗೆ ಪೌಷ್ಟಿಕ ಮೊಟ್ಟೆ ಖರೀದಿ - ಶಿಕ್ಷಕರ ಜೇಬಿಗೆ ಕತ್ತರಿ..!
Karnataka News LiveHaveri - ಸಾವಿನಲ್ಲೂ ಒಂದಾದ ಸತಿ-ಪತಿ - ಪತ್ನಿಯ ಅಗಲಿಕೆ ತಾಳಲಾರದೆ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟ ಪತಿ!
Karnataka News Liveಬಿಗ್ ಬಾಸ್ ಗೆದ್ದರೂ ರಕ್ಷಿತಾ ಶೆಟ್ಟಿ ಈಗ ಒಂಟಿ? 'ಕ್ಲೋಸ್' ಆಗಿದ್ದವರು ಫೋನ್ ಪಿಕ್ ಮಾಡ್ತಿಲ್ಲ ಏಕೆ? 'ಶಾಕಿಂಗ್' ಸತ್ಯ ಇಲ್ಲಿದೆ!
ಬಿಗ್ ಬಾಸ್ ಗೆದ್ದ ಖುಷಿಯಲ್ಲಿರುವ ರಕ್ಷಿತಾ ಶೆಟ್ಟಿಗೆ ಅವರ ಹಳೆಯ ‘ಗೆಳೆಯರ’ ವರ್ತನೆ ಸ್ವಲ್ಪ ಬೇಸರ ತರಿಸಿರಬಹುದು. ಆದರೂ ರಕ್ಷಿತಾ ಒಬ್ಬ ಅದ್ಭುತ ಆಟಗಾರ್ತಿ ಎಂಬುದನ್ನು ಒಪ್ಪಿಕೊಂಡಿರುವ ಜಾಹ್ನವಿ, ಶೋ ಯಶಸ್ಸಿಗೆ ತಾವೆಲ್ಲರೂ ಕೊಟ್ಟ ‘ಮಸಾಲಾ’ ಕೂಡ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
Karnataka News Liveಕಾಮನ್ವೆಲ್ತ್ ಗೇಮ್ಸ್ 2026ರ ಭಾರತೀಯ ತಂಡದ ಫಿಸಿಯೋ ಆಗಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಪುತ್ರ ರೋಹನ್
Karnataka News Live'ನೀವು ನನಗಾಗಿ ಎಲ್ಲಾ ತ್ಯಾಗ ಮಾಡಿದ್ರಿ, ಕ್ಷಮಿಸಿ ಅಮ್ಮ' ಮತ್ತೊಂದು ಬಲಿ ಪಡೆದ NEET
ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಯುವ ನೀಟ್ (NEET) ಪರೀಕ್ಷೆಯ ಫಲಿತಾಂಶದ ಒತ್ತಡ ಮತ್ತೊಂದು ಬಲಿಯನ್ನು ಪಡೆದಿದೆ.
Karnataka News Liveಕುಡಿದ ಮತ್ತಿನಲ್ಲಿ ಬೆಂಗಳೂರಿನ ಪಬ್ ಮುಂದೆ ಯುವತಿ ಕಿರಿಕ್.. ಸುಮ್ಮನಿರಿಸಲು ಬಂದ ಯುವಕನಿಗೆ ಶಾಕ್!
Karnataka News Liveಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ದಂಧೆ - ಫಾರ್ಮ್ ಪ್ಲಾಟ್ ಹೆಸರಲ್ಲಿ ಅಕ್ರಮ ಮಿನಿ ಟೌನ್ಶಿಪ್!
ವರದಿ: ರಂಗೂಪುರ ಶಿವಕುಮಾರ್
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಅಂಚಿನಲ್ಲಿ, ರಿಯಲ್ ಎಸ್ಟೇಟ್ ಉದ್ಯಮಿಗಳು ಕೃಷಿ ಭೂಮಿಯನ್ನು ಅಕ್ರಮವಾಗಿ 'ಫಾರ್ಮ್ ಫ್ಲಾಟ್'ಗಳಾಗಿ ಪರಿವರ್ತಿಸಿ ಮಿನಿ ಟೌನ್ಶಿಪ್ ನಿರ್ಮಿಸುತ್ತಿದ್ದಾರೆ.
Karnataka News Liveಕಡೂರಿನಲ್ಲಿ ಹಂದಿ ಬೇಟೆಗಾಗಿ ಹಾಕಿದ್ದ ಲೈನ್ ತುಳಿದು ವ್ಯಕ್ತಿ ಸಾವು.. ಸಾಕ್ಷ್ಯ ನಾಶಕ್ಕೆ ನಡೀತು ಮೈ ನಡುಗಿಸುವ ಕೃತ್ಯ
ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ, ಕೊಲೆ ಪ್ರಕರಣದ ಮಾದರಿಯಲ್ಲೇ ತಿರುವು ಪಡೆದುಕೊಂಡಿದೆ. ಸಿಕ್ಕಿಬೀಳುವ ಭೀತಿಯಿಂದ ಬೇಟೆಗಾರರು ಶವವನ್ನೇ ಹೂತು ಹಾಕಿ, ಕೇಸ್ ಮುಚ್ಚಿ ಹಾಕಲು ನಡೆಸಿದ್ದ ಮಾಸ್ಟರ್ ಪ್ಲಾನ್ ಸಿಸಿ ಕ್ಯಾಮೆರಾದ ಒಂದು ದೃಶ್ಯದಿಂದ ವಿಫಲವಾಗಿದೆ
Karnataka News Liveಬೆಂಗಳೂರು ಮಣ್ಣಲ್ಲಿ ಗಂಗರ ಕಾಲದ ಹುಲಿಬೇಟೆ ವೀರರಹಸ್ಯ! ಕ್ರಿ.ಶ 850ರ ಕಾಲಮಾನದ ಕನ್ನಡದ ಶಾಸನ ರಕ್ಷಣೆಗೆ ಒತ್ತಾಯ
Karnataka News Liveದಾವಣಗೆರೆ ದುರ್ಗಾಂಬಿಕಾ ದೇವಿ ಆಭರಣ ಕದ್ದು ಮಾರಿದ ಪೂಜಾರಿ; ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಾರ್ನಿಂಗ್!
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಪೂಜಾರಿ ಆಕಾಶ್, ದೇವಿಯ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು, ಕರಗಿಸಿ ಮಾರಾಟ ಮಾಡಿದ್ದಾನೆ. ಈ ವಂಚನೆ ಬೆಳಕಿಗೆ ಬಂದ ನಂತರ, ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದ ದೇವಸ್ಥಾನ ಟ್ರಸ್ಟ್, ಕಳುವಾದ ಸಂಪೂರ್ಣ ಚಿನ್ನವನ್ನು ವಾಪಸ್ ನೀಡುವಂತೆ ಆರೋಪಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಸದ್ಯ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.