10:20 PM (IST) Jul 27

Karnataka News LiveViral News - ತಿಥಿ ದಿನವೇ ಪ್ರತ್ಯಕ್ಷವಾಯ್ತು ಹೆಣ; ದಂಗಾದ ಗ್ರಾಮಸ್ಥರು! ಈ ಘಟನೆ ಲೋಕಿಕವೇ, ಅಲೌಕಿಕವೇ?

ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿ ವ್ಯಕ್ತಿಯೊಬ್ಬ ಮೂರು ದಿನಗಳ ನಂತರ ಜೀವಂತವಾಗಿ ಮನೆಗೆ ಮರಳಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಕುಟುಂಬ ಮತ್ತು ಪೊಲೀಸರು ದಂಗಾಗಿದ್ದು, ಅಂತ್ಯಕ್ರಿಯೆ ನಡೆಸಿದ್ದು ಯಾರ ಶವಕ್ಕೆ ಎಂಬ ಪ್ರಶ್ನೆ ಉದ್ಭವಿಸಿದೆ.

Read Full Story
09:17 PM (IST) Jul 27

Karnataka News Liveಬಾತ್‌ರೂಮ್‌ನಲ್ಲೇ ಅಡಗಿದ್ದ ಚಿರತೆ, ಸಾವಿನ ದವಡೆಯಿಂದ ಪಾರಾದ ಬೆಳಗಾವಿ ಮಹಿಳೆ!

ಖಾನಾಪುರ ತಾಲೂಕಿನ ಗುಂಜಿ ಗ್ರಾಮದಲ್ಲಿ, ಮನೆಯೊಂದರ ಶೌಚಾಲಯದಲ್ಲಿ ರಾತ್ರಿಯಿಡೀ ಅಡಗಿದ್ದ ಚಿರತೆಯೊಂದು ಬೆಳಿಗ್ಗೆ ಮಹಿಳೆಯೊಬ್ಬರ ಮೇಲೆ ದಾಳಿಗೆ ಯತ್ನಿಸಿದೆ. ಅದೃಷ್ಟವಶಾತ್ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Read Full Story
08:58 PM (IST) Jul 27

Karnataka News LiveMandya - ಗಾಳಿ-ಬೆಳಕು ಸೋಂಕಿಲ್ಲದೇ ಬರುವ ಸಾವಯವ ಹಾಲು; ಬೆಂಗಳೂರು, ಹೈದರಾಬಾದ್‌ನಲ್ಲಿ ಮಾರುಕಟ್ಟೆ

ಮಂಡ್ಯದ ಫಾರ್ಮ್ ಕನೆಕ್ಟ್ ಸಂಸ್ಥೆಯು 'ಸಾವಯವ ಹಾಲು' ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ. ಈ ವಿಧಾನದಲ್ಲಿ, ಹಾಲನ್ನು ಗಾಳಿ-ಬೆಳಕಿನ ಸೋಂಕಿಲ್ಲದೆ ಯಂತ್ರದ ಮೂಲಕ ಕರದು, ಶೀತಲೀಕರಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಇದರಿಂದ ಹಾಲಿನ ಪೋಷಕಾಂಶಗಳು ಉಳಿದುಕೊಳ್ಳುವುದಲ್ಲದೆ, ರೈತರಿಗೂ ಅಧಿಕ ಆದಾಯ ಸಿಗುತ್ತಿದೆ.
Read Full Story
08:36 PM (IST) Jul 27

Karnataka News Live58 ವಿದ್ಯಾರ್ಥಿಗಳಿಗೆ 5 ಲಕ್ಷ ರು. ಸ್ಕಾಲರ್‌ಶಿಪ್ ವಿತರಣೆ; ಮಕ್ಕಳ ಕನಸಿಗೆ ಸಿಕ್ತು ಬಲ

ರೋಟರಿ ಕ್ಲಬ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮತ್ತು ಭದ್ರಾ ಗ್ಯಾಸ್ ಏಜೆನ್ಸಿ ಸಹಯೋಗದಲ್ಲಿ 58 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ರೋಟರಿ ಕ್ಲಬ್‌ನ 58ನೇ ಹಾಗೂ ಭದ್ರಾ ಗ್ಯಾಸ್ ಏಜೆನ್ಸಿಯ 40ನೇ ವರ್ಷದ ಅಂಗವಾಗಿ ಒಟ್ಟು 5 ಲಕ್ಷ ರೂಪಾಯಿ ಮೊತ್ತದ ಸ್ಕಾಲರ್‌ಶಿಪ್ ನೀಡಲಾಯಿತು.

Read Full Story
08:14 PM (IST) Jul 27

Karnataka News LiveBengaluru - ಹುಸ್ಕೂರು ಗೇಟ್‌ ಮೆಟ್ರೋ ಸ್ಟೇಷನ್‌ನಲ್ಲಿ ಹಳಿಗೆ ಜಿಗಿದು ಪತ್ರಕರ್ತ ರಾಜೇಶ್‌ ಹೀರೇಮಠ್‌ ಸಾವು

ಬೆಂಗಳೂರಿನ ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತ ರಾಜೇಶ್ ಹಿರೇಮಠ್ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಬಿಟ್ಟಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಘಟನೆಯಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
Read Full Story
08:02 PM (IST) Jul 27

Karnataka News LiveTeam india - ಗೌತಮ್ ಗಂಭೀರ್‌ ಇನ್‌ಸ್ಟಾಗ್ರಾಮ್ ಪೋಸ್ಟ್‌ ವಿವಾದ; ಸಂಕಷ್ಟದಲ್ಲಿ ಗೌತಿ ಹುದ್ದೆ!

ಗಂಭೀರ ವ್ಯಕ್ತಿತ್ವಕ್ಕೆ ಹೆಸರಾದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಇನ್‌ಸ್ಟಾಗ್ರಾಮ್ ಖಾತೆಯ ಪೊಸ್ಟ್‌ನೊಂದಿಗೆ ಹೊಸ ವಿವಾದವೊಂದನ್ನು ತಳಕು ಹಾಕಿಕೊಂಡಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
07:47 PM (IST) Jul 27

Karnataka News Liveಬುಕ್​ ಮಾಡಿದ್ದೇ ಒಂದು ಆಟೊ, ಬಂದಿದ್ದೇ ಇನ್ನೊಂದು - ನಂಬರ್​ ಚೇಂಜ್​ ಇದ್ರೆ ಹತ್ತಲೇಬೇಡಿ- ಕಮಿಷನರ್‌ ಖಡಕ್‌ ಎಚ್ಚರಿಕೆ

ಆ್ಯಪ್‌ನಲ್ಲಿ ಬುಕ್‌ ಮಾಡಿದ ಆಟೋ ಅಥವಾ ಕ್ಯಾಬ್‌ನ ನೋಂದಣಿ ಸಂಖ್ಯೆಗೂ, ನಿಮ್ಮನ್ನು ಕರೆದೊಯ್ಯಲು ಬರುವ ವಾಹನದ ಸಂಖ್ಯೆಗೂ ವ್ಯತ್ಯಾಸವಿದ್ದರೆ ಅಂತಹ ವಾಹನವನ್ನು ಹತ್ತಲೇಬಾರದು. ಇಂತಹ ಸಂದರ್ಭದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ, ಆ್ಯಪ್ ಕಂಪನಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತವೆ ಮತ್ತು ನಿಮ್ಮ ಸುರಕ್ಷತೆಗೆ ನೀವೇ ಜವಾಬ್ದಾರರಾಗುತ್ತೀರಿ ಎಂದು ಬೆಂಗಳೂರು ಪೊಲೀಸರು ಎಚ್ಚರಿಸಿದ್ದಾರೆ.
Read Full Story
06:21 PM (IST) Jul 27

Karnataka News Live'ತಾಜ್‌ಮಹಲ್' ಬಳಿಕ ಮತ್ತೆ ಕನ್ನಡಕ್ಕೆ ಕುನಾಲ್ ಗಾಂಜಾವಾಲ - ಅಜಯ್ ರಾವ್ 'ಪಾರ್ಟ್ನರ್' ಹಾಡಿಗೆ ಧ್ವನಿ

ಸಂಗೀತ ಪ್ರಿಯರ ಪಾಲಿಗೆ ಇಂದಿಗೂ ವಿಶೇಷ ಸ್ಥಾನ ಪಡೆದಿರುವ 'ಖುಷಿಯಾಗಿದೆ ಏಕೋ ನಿನ್ನಿಂದಲೆ' ಹಾಡು ಕೇಳಿದಾಗ ಪ್ರೇಮ, ಕಾಲೇಜು ದಿನಗಳು ಹಾಗೂ ಕೃಷ್ಣ ಅಜಯ್ ರಾವ್ ಅವರ ನೆನಪಿನ ಪಾತ್ರಗಳು ಕಣ್ಣ ಮುಂದೆ ಬರುತ್ತವೆ.

Read Full Story
06:13 PM (IST) Jul 27

Karnataka News Liveಬಾಕಿ ವಸೂಲಿಯಾಗದಿದ್ದರೂ KSMCL ಕಂಪನಿಗೆ ಜಾಕ್‌ಪಾಟ್ - ಬಳ್ಳಾರಿಯಲ್ಲಿ 47 ಎಕರೆ ಅರಣ್ಯ ಭೂಮಿ ಬಳಕೆಗೆ ಕೇಂದ್ರದ ಗ್ರೀನ್ ಸಿಗ್ನಲ್!

ರಾಜ್ಯ ಸರ್ಕಾರದ KSMCL ಸಂಸ್ಥೆಯು ₹136 ಕೋಟಿಗೂ ಅಧಿಕ ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದರೂ, ಬಳ್ಳಾರಿಯಲ್ಲಿ ಕನ್ವೇಯರ್ ಬೆಲ್ಟ್ ನಿರ್ಮಾಣಕ್ಕೆ 47 ಎಕರೆ ಅರಣ್ಯ ಭೂಮಿ ಬಳಸಲು ಕೇಂದ್ರ ಪರಿಸರ ಸಚಿವಾಲಯದಿಂದ ಅನುಮೋದನೆ ಪಡೆದಿದೆ.

Read Full Story
05:45 PM (IST) Jul 27

Karnataka News Liveಕನ್ನಡಕ್ಕೆ ಪಾರುಲ್ ಯಾದವ್ ಗ್ರ್ಯಾಂಡ್ ಕಂಬ್ಯಾಕ್ - ಕಾರ್ತಿಕ್ ಮಹೇಶ್ ಜೊತೆ ಹೊಸ ಸಿನಿಮಾ

ದೀರ್ಘ ವಿರಾಮದ ಬಳಿಕ ನಟಿ ಪಾರುಲ್ ಯಾದವ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಿರ್ದೇಶಕ ಪನ್ನಗಾಭರಣ ಅವರ ಹೊಸ ಕಾಮಿಡಿ ಎಂಟರ್‌ಟೈನರ್ ಚಿತ್ರದ ಮೂಲಕ ಪಾರುಲ್ ಕಂಬ್ಯಾಕ್ ಮಾಡುತ್ತಿದ್ದಾರೆ.

Read Full Story
05:12 PM (IST) Jul 27

Karnataka News Liveರಿಷಬ್ ಶೆಟ್ಟಿ 'ಶಿವಾಜಿ' ಸಿನಿಮಾಗೆ ಭೂಮಿ ಪೆಡ್ನೇಕರ್ ಎಂಟ್ರಿ - ಬೆಳವಡಿ ಮಲ್ಲಮ್ಮ ಪಾತ್ರದಲ್ಲಿ ಬಾಲಿವುಡ್ ನಟಿ

'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ತಂಡಕ್ಕೆ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

Read Full Story
04:49 PM (IST) Jul 27

Karnataka News Liveಬೆಂಗಳೂರು ಟ್ರಾಫಿಕ್ ದಟ್ಟಣೆಗೆ ಮುಕ್ತಿ ನೀಡಲು ಕಾರ್ ಪೂಲಿಂಗ್ ಇನ್ನು ಅಧಿಕೃತ? ಸರ್ಕಾರಕ್ಕೆ ಬಿಟಿಪಿ 5 ಪ್ರಮುಖ ಪ್ರಸ್ತಾವನೆ!

ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆಯನ್ನು ನಿವಾರಿಸಲು, ಬೆಂಗಳೂರು ನಗರ ಸಂಚಾರ ಪೊಲೀಸರು 'ನಿಯಂತ್ರಿತ ಕಾರ್ ಪೂಲಿಂಗ್' ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಒಟ್ಟು 5 ಪ್ರಮುಖ ಪ್ರಸ್ತಾವನೆಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅನುಮೋದನೆಗಾಗಿ ಕಾಯುತ್ತಿದ್ದಾರೆ.

Read Full Story
04:43 PM (IST) Jul 27

Karnataka News LiveGold Medal - ನಮ್ಮ ಬೀದರ್‌ಗೆ ಕೂಗಳತೆ ದೂರದ ಊರಿನ ಹೆಣ್ಣುಮಗಳು ಈಗ ದೇಶದ ಹೆಮ್ಮೆ; 21ರ ಹರೆಯದಲ್ಲೇ 'ಚಿನ್ನ' ಗೆದ್ದು ಮನು ಭಾಕರ್‌ರನ್ನೇ ಹಿಂದಿಕ್ಕಿದ ಗೋಲ್ಡನ್‌ ಗರ್ಲ್!

ಬೀದರ್ ಸಮೀಪದ, ಚಾಲಕನ ಮಗಳಾದ 21ರ ಹರೆಯದ ಇಶಾ, ಶೂಟಿಂಗ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ISSF ವಿಶ್ವಕಪ್‌ನಲ್ಲಿ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರನ್ನು ಹಿಂದಿಕ್ಕಿ ಚಿನ್ನ ಗೆದ್ದ ಇವರು, ಏಷ್ಯನ್ ಗೇಮ್ಸ್‌ನಲ್ಲೂ ನಾಲ್ಕು ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. 

Read Full Story
04:40 PM (IST) Jul 27

Karnataka News Liveಸ್ಪೈಡರ್ ಮ್ಯಾನ್ ಪ್ರಪಂಚಕ್ಕೆ ರಿಷಬ್ ಶೆಟ್ಟಿ ಎಂಟ್ರಿ - ಸೋನಿ ಪಿಕ್ಚರ್ಸ್ ಜೊತೆ ಕೈಜೋಡಿಸಿದ ಭಾರತದ ಮೊದಲ ನಟ!

Spider Man Brand New Day India: 'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

Read Full Story
04:39 PM (IST) Jul 27

Karnataka News Liveಹಾವುಗಳು ನಾಗಸ್ವರಕ್ಕೆ ಶರಣಾಗುತ್ತವೆಯೇ? ನೂರಾರು ವರ್ಷಗಳ ಭ್ರಮೆ ಹಿಂದಿರುವ ಅಚ್ಚರಿಯ ವಿಜ್ಞಾನ ಇಲ್ಲಿದೆ

ಹಾವು ನಾಗಸ್ವರಕ್ಕೆ ಕುಣಿಯುವುದು ಮಂತ್ರದ ಶಕ್ತಿಯೂ ಅಲ್ಲ ಅಥವಾ ಸಂಗೀತದ ಮಹಿಮೆಯೂ ಅಲ್ಲ. ಅದು ಕೇವಲ ಒಂದು ಜೀವಿಯ ರಕ್ಷಣಾತ್ಮಕ ನಡವಳಿಕೆ ಮಾತ್ರ. ಪ್ರಕೃತಿಯ ಈ ಅದ್ಭುತ ಜೀವಿಗಳನ್ನು ಅವುಗಳ ಪಾಡಿಗೆ ಕಾಡಿನಲ್ಲಿ ಬದುಕಲು ಬಿಡುವುದೇ ನಾವು ಅವಕ್ಕೆ ನೀಡುವ ಗೌರವ

Read Full Story
04:22 PM (IST) Jul 27

Karnataka News Live'ಹುಚ್ಚು ಹುಚ್ಚರ ಥರ..' ಹೇಳಿಕೆ ಬಳಿಕ ಬಿಗ್ ಬಾಸ್ ಧ್ರುವಂತ್‌ಗೆ ಟ್ರೋಲ್ ಕಾಟ - ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ

ಕಿರುತೆರೆ ನಟ ಧ್ರುವಂತ್‌, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ ಹಾಗೂ ಮಾನಹಾನಿಕಾರಕ ಪೋಸ್ಟ್‌ಗಳನ್ನು ಪ್ರಕಟಿಸುತ್ತಿರುವ ಟ್ರೋಲರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

Read Full Story
03:49 PM (IST) Jul 27

Karnataka News LiveNitin Gadkari - ಮೆಟಾ, ಎಕ್ಸ್ ಮತ್ತು ಗೂಗಲ್ ವಿರುದ್ಧ ಪ್ರಕರಣ ದಾಖಲಿಸಿದ ಗಡ್ಕರಿ! ತಪ್ಪಿತಸ್ಥರೆಂದು ಸಾಬೀತಾದರೆ ಯಾರಿಗೆ ಶಿಕ್ಷೆ!

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು,ಬಾಂಬೆ ಹೈಕೋರ್ಟ್‌ನಲ್ಲಿ ಮೆಟಾ, ಗೂಗಲ್, ಮತ್ತು ಎಕ್ಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಸಾಮಾಜಿಕ ಜಾಲತಾಣ ದೈತ್ಯರ ಹೊಣೆಗಾರಿಕೆಯನ್ನು ಪ್ರಶ್ನಿಸಿದ್ದೇಕೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

Read Full Story
02:38 PM (IST) Jul 27

Karnataka News LiveAmruthadhaare Serial - ಮಲ್ಲಿ ಖಡಕ್‌ ಎಂಟ್ರಿ! ಜೈದೇವ್ ಸಿಕ್ಕಿ ಬಿದ್ನಾ? ಮಗನ ಜೊತೆ ಶಕುಂತಲಾಗೂ ಜೈಲೂಟ ಗ್ಯಾರಂಟಿನಾ?

"ಕಥೆ ಎಳೆಯೋ ಬದಲು, ಎಲ್ಲರೂ ಸುಖವಾಗಿದ್ದಾಗಲೇ ಮುಗಿಸಿಬಿಡಿ" ಎಂಬ ಕೂಗು ಒಂದೆಡೆಯಾದರೆ, "ಭೂಮಿಕಾ ಸಾವನ್ನಪ್ಪಬಾರದು, ಚಮತ್ಕಾರ ನಡೆಯಬೇಕು" ಎನ್ನುವ ಹಂಬಲ ಇನ್ನೊಂದೆಡೆ. ಮುಂದೇನಾಗುತ್ತೆ? ಈ ಸ್ಟೋರಿ ನೋಡಿ..

Read Full Story
02:14 PM (IST) Jul 27

Karnataka News Liveಸತ್ಯ ಹೇಳಿದ್ದೇ ಮುಳುವಾಯ್ತಾ, ಕೋಟಿ ಸಂಬಳದ ಉದ್ಯೋಗ ಕಳೆದುಕೊಂಡ ನೆಟ್‌ಫ್ಲಿಕ್ಸ್ ಎಕ್ಸಿಕ್ಯೂಟಿವ್!

ಕಂಪನಿಯ 'ವಿಶ್ವಾಸ ವೃದ್ಧಿ ವ್ಯಾಯಾಮ'ದ ವೇಳೆ ತಮ್ಮ ಖಿನ್ನತೆಯ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾತನಾಡಿದ್ದ ನೆಟ್‌ಫ್ಲಿಕ್ಸ್‌ನ ಹಿರಿಯ ಅಧಿಕಾರಿಯೊಬ್ಬರನ್ನು ವಜಾಗೊಳಿಸಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ, ಅವರು ತಾರತಮ್ಯ ಮತ್ತು ಅನ್ಯಾಯದ ಆರೋಪದ ಮೇಲೆ ಈಗ ನೆಟ್‌ಫ್ಲಿಕ್ಸ್ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾರೆ.
Read Full Story
01:31 PM (IST) Jul 27

Karnataka News Liveಕ್ರೆಡಿಟ್ ಕಾಡ್‌ ಬಿಲ್‌ ಕಟ್ಟಲು ವೀಕೆಂಡ್ ರ‍್ಯಾಪಿಡೋ ಚಾಲಕನಾದ ಟೆಕ್ಕಿ, ಆದ್ರೆ ಗಿಗ್ ಕಾರ್ಮಿಕರ ವಾಸ್ತವ ಹೇಳಿದ ಇಂಜಿನಿಯರ್!

ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ತಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ವಾರಾಂತ್ಯದಲ್ಲಿ ರ್ಯಾಪಿಡೊ ಚಾಲಕರಾಗಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಗ್ರಾಹಕನೊಬ್ಬನಿಂದಾದ ಕಹಿ ಘಟನೆಯು, ಗಿಗ್ ಕಾರ್ಮಿಕರು ದಿನನಿತ್ಯ ಎದುರಿಸುವ ಸವಾಲುಗಳು ಮತ್ತು ಅಸಹಾಯಕತೆಯ ಕರಾಳ ಮುಖವನ್ನು ಅವರಿಗೆ ಪರಿಚಯಿಸಿತು.
Read Full Story