11:33 AM (IST) Jul 27

Karnataka News Liveಶಿವಮೊಗ್ಗ - ಮಕ್ಕಳಿಗೆ ಪೌಷ್ಟಿಕ ಮೊಟ್ಟೆ ಖರೀದಿ - ಶಿಕ್ಷಕರ ಜೇಬಿಗೆ ಕತ್ತರಿ..!

ಹೊಸನಗರ ತಾಲೂಕಿನ ಶಾಲೆಗಳಲ್ಲಿ ಸರ್ಕಾರದ ಮೊಟ್ಟೆ ವಿತರಣೆ ಯೋಜನೆಯಿಂದಾಗಿ ಶಿಕ್ಷಕರು ತಮ್ಮ ಕೈಯಿಂದ ಹಣ ಹಾಕುವಂತಾಗಿದೆ. ಇದರ ಜೊತೆಗೆ, ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳಾದರೂ 60ಕ್ಕೂ ಹೆಚ್ಚು ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕಗಳು ತಲುಪಿಲ್ಲ, ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Read Full Story
11:27 AM (IST) Jul 27

Karnataka News LiveHaveri - ಸಾವಿನಲ್ಲೂ ಒಂದಾದ ಸತಿ-ಪತಿ - ಪತ್ನಿಯ ಅಗಲಿಕೆ ತಾಳಲಾರದೆ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟ ಪತಿ!

ಹಾವೇರಿ ಜಿಲ್ಲೆಯ ಹೆಸರೂರು ಗ್ರಾಮದಲ್ಲಿ 45 ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿದ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಪತ್ನಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಅವರ ಅಗಲಿಕೆಯ ದುಃಖ ತಾಳಲಾರದೆ ಪತಿಯೂ ಕೊನೆಯುಸಿರೆಳೆದಿದ್ದಾರೆ. ಈ ಹೃದಯವಿದ್ರಾವಕ ಘಟನೆ ಇಡೀ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದೆ.
Read Full Story
11:16 AM (IST) Jul 27

Karnataka News Liveಬಿಗ್‌ ಬಾಸ್ ಗೆದ್ದರೂ ರಕ್ಷಿತಾ ಶೆಟ್ಟಿ ಈಗ ಒಂಟಿ? 'ಕ್ಲೋಸ್' ಆಗಿದ್ದವರು ಫೋನ್ ಪಿಕ್ ಮಾಡ್ತಿಲ್ಲ ಏಕೆ? 'ಶಾಕಿಂಗ್' ಸತ್ಯ ಇಲ್ಲಿದೆ!

ಬಿಗ್‌ ಬಾಸ್ ಗೆದ್ದ ಖುಷಿಯಲ್ಲಿರುವ ರಕ್ಷಿತಾ ಶೆಟ್ಟಿಗೆ ಅವರ ಹಳೆಯ ‘ಗೆಳೆಯರ’ ವರ್ತನೆ ಸ್ವಲ್ಪ ಬೇಸರ ತರಿಸಿರಬಹುದು. ಆದರೂ ರಕ್ಷಿತಾ ಒಬ್ಬ ಅದ್ಭುತ ಆಟಗಾರ್ತಿ ಎಂಬುದನ್ನು ಒಪ್ಪಿಕೊಂಡಿರುವ ಜಾಹ್ನವಿ, ಶೋ ಯಶಸ್ಸಿಗೆ ತಾವೆಲ್ಲರೂ ಕೊಟ್ಟ ‘ಮಸಾಲಾ’ ಕೂಡ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Read Full Story
11:03 AM (IST) Jul 27

Karnataka News Liveಕಾಮನ್‌ವೆಲ್ತ್ ಗೇಮ್ಸ್ 2026ರ ಭಾರತೀಯ ತಂಡದ ಫಿಸಿಯೋ ಆಗಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಪುತ್ರ ರೋಹನ್

ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಪುತ್ರ ರೋಹನ್ ಆರ್. ಬಾರಿತ್ತಾಯ ಅವರು ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಕೋದಲ್ಲಿ ನಡೆಯಲಿರುವ 'ಕಾಮನ್‌ವೆಲ್ತ್ ಗೇಮ್ಸ್ - 2026'ರ ಭಾರತೀಯ ತಂಡದ ಅಧಿಕೃತ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. ಕ್ರೀಡಾ ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆದಿರುವ ರೋಹನ್ ಅವರ ಈ ಜಾಗತಿಕ ಸಾಧನೆಯು ಉಡುಪಿ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದೆ.
Read Full Story
10:49 AM (IST) Jul 27

Karnataka News Live'ನೀವು ನನಗಾಗಿ ಎಲ್ಲಾ ತ್ಯಾಗ ಮಾಡಿದ್ರಿ, ಕ್ಷಮಿಸಿ ಅಮ್ಮ' ಮತ್ತೊಂದು ಬಲಿ ಪಡೆದ NEET

ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಯುವ ನೀಟ್ (NEET) ಪರೀಕ್ಷೆಯ ಫಲಿತಾಂಶದ ಒತ್ತಡ ಮತ್ತೊಂದು ಬಲಿಯನ್ನು ಪಡೆದಿದೆ.

Read Full Story
10:19 AM (IST) Jul 27

Karnataka News Liveಕುಡಿದ ಮತ್ತಿನಲ್ಲಿ ಬೆಂಗಳೂರಿನ ಪಬ್ ಮುಂದೆ ಯುವತಿ ಕಿರಿಕ್.. ಸುಮ್ಮನಿರಿಸಲು ಬಂದ ಯುವಕನಿಗೆ ಶಾಕ್!

ಬೆಂಗಳೂರಿನ ಕೋರಮಂಗಲದಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿದ್ದ ಯುವತಿಯೊಬ್ಬಳು ನಡುರಸ್ತೆಯಲ್ಲಿ ಹೈಡ್ರಾಮಾ ಸೃಷ್ಟಿಸಿ, ಸಂಚಾರ ದಟ್ಟಣೆಗೆ ಕಾರಣಳಾಗಿದ್ದಾಳೆ. ಆಕೆಯ ವರ್ತನೆಯಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ.
Read Full Story
10:08 AM (IST) Jul 27

Karnataka News Liveಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ದಂಧೆ - ಫಾರ್ಮ್ ಪ್ಲಾಟ್ ಹೆಸರಲ್ಲಿ ಅಕ್ರಮ ಮಿನಿ ಟೌನ್‌ಶಿಪ್!

ವರದಿ: ರಂಗೂಪುರ ಶಿವಕುಮಾರ್‌

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಅಂಚಿನಲ್ಲಿ, ರಿಯಲ್ ಎಸ್ಟೇಟ್ ಉದ್ಯಮಿಗಳು ಕೃಷಿ ಭೂಮಿಯನ್ನು ಅಕ್ರಮವಾಗಿ 'ಫಾರ್ಮ್ ಫ್ಲಾಟ್'ಗಳಾಗಿ ಪರಿವರ್ತಿಸಿ ಮಿನಿ ಟೌನ್‌ಶಿಪ್ ನಿರ್ಮಿಸುತ್ತಿದ್ದಾರೆ.

Read Full Story
09:37 AM (IST) Jul 27

Karnataka News Liveಕಡೂರಿನಲ್ಲಿ ಹಂದಿ ಬೇಟೆಗಾಗಿ ಹಾಕಿದ್ದ ಲೈನ್ ತುಳಿದು ವ್ಯಕ್ತಿ ಸಾವು.. ಸಾಕ್ಷ್ಯ ನಾಶಕ್ಕೆ ನಡೀತು ಮೈ ನಡುಗಿಸುವ ಕೃತ್ಯ

ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ, ಕೊಲೆ ಪ್ರಕರಣದ ಮಾದರಿಯಲ್ಲೇ ತಿರುವು ಪಡೆದುಕೊಂಡಿದೆ. ಸಿಕ್ಕಿಬೀಳುವ ಭೀತಿಯಿಂದ ಬೇಟೆಗಾರರು ಶವವನ್ನೇ ಹೂತು ಹಾಕಿ, ಕೇಸ್ ಮುಚ್ಚಿ ಹಾಕಲು ನಡೆಸಿದ್ದ ಮಾಸ್ಟರ್ ಪ್ಲಾನ್ ಸಿಸಿ ಕ್ಯಾಮೆರಾದ ಒಂದು ದೃಶ್ಯದಿಂದ ವಿಫಲವಾಗಿದೆ

Read Full Story
09:34 AM (IST) Jul 27

Karnataka News Liveಬೆಂಗಳೂರು ಮಣ್ಣಲ್ಲಿ ಗಂಗರ ಕಾಲದ ಹುಲಿಬೇಟೆ ವೀರರಹಸ್ಯ! ಕ್ರಿ.ಶ 850ರ ಕಾಲಮಾನದ ಕನ್ನಡದ ಶಾಸನ ರಕ್ಷಣೆಗೆ ಒತ್ತಾಯ

ನೆಲಮಂಗಲ ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ಗಂಗರ ಕಾಲದ, ಕ್ರಿ.ಶ 850ಕ್ಕೆ ಸೇರಿದ ಅಪರೂಪದ ಹುಲಿಬೇಟೆ ವೀರಗಲ್ಲು ಪತ್ತೆಯಾಗಿದೆ. ಈ ಶಾಸನ ಸಹಿತ ವೀರಗಲ್ಲು, ಹುಲಿಯೊಂದಿಗೆ ಹೋರಾಡಿ ವೀರಮರಣ ಹೊಂದಿದ ಸಿವಮರೆನಾದಿ ಎಂಬ ವೀರನ ಕಥೆಯನ್ನು ಸಾರುತ್ತದೆ.
Read Full Story
08:33 AM (IST) Jul 27

Karnataka News Liveದಾವಣಗೆರೆ ದುರ್ಗಾಂಬಿಕಾ ದೇವಿ ಆಭರಣ ಕದ್ದು ಮಾರಿದ ಪೂಜಾರಿ; ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಾರ್ನಿಂಗ್!

ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಪೂಜಾರಿ ಆಕಾಶ್, ದೇವಿಯ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು, ಕರಗಿಸಿ ಮಾರಾಟ ಮಾಡಿದ್ದಾನೆ. ಈ ವಂಚನೆ ಬೆಳಕಿಗೆ ಬಂದ ನಂತರ, ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದ ದೇವಸ್ಥಾನ ಟ್ರಸ್ಟ್, ಕಳುವಾದ ಸಂಪೂರ್ಣ ಚಿನ್ನವನ್ನು ವಾಪಸ್ ನೀಡುವಂತೆ ಆರೋಪಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಸದ್ಯ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.

Read Full Story