Karnataka News Live: ಮಕ್ಕಳಿಗೆ ವಾಲಿ, ರುದ್ರ ಎಂದು ಹೆಸರಿಟ್ಟಿದ್ದೇಕೆ ಕಾಂತಾರ ನಟ ಕಿಶೋರ್..

ಬೆಂಗಳೂರು: ದೇವರು, ಜ್ಯೋತಿಷ್ಯ, ವಾಸ್ತು ವಿಚಾರಗಳಲ್ಲಿ ಅಪಾರ ನಂಬಿಕೆಯುಳ್ಳ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇನ್ನು ಮುಂದೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಗೆ ತಮ್ಮ ಕುರ್ಚಿಯನ್ನು ಉತ್ತರಕ್ಕೆ ಮುಖ ಮಾಡುವಂತೆ ವ್ಯವಸ್ಥೆ ಮಾಡಲು ಸೂಚಿಸಿದ ಘಟನೆ ನಡೆಯಿತು.
ಸಂಪುಟ ಸಭೆ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಮೊದಲ ಸುದ್ದಿಗೋಷ್ಠಿಗೆ ಆಗಮಿಸಿದ ಮುಖ್ಯಮಂತ್ರಿ ಅವರು, ತಾವು ಮತ್ತು ಸಂಪುಟ ಸಹೋದ್ಯೋಗಿಗಳು ಕುಳಿತುಕೊಳ್ಳಲು ದಕ್ಷಿಣಕ್ಕೆ ಮುಖ ಮಾಡಿರುವುದು ಕಂಡಿತು. ಇದನ್ನು ಗಮನಿಸಿದ ಶಿವಕುಮಾರ್ ಅವರು, ಬದಲಾವಣೆ ಮಾಡಲು ಸೂಚಿಸಿದರು. ಆದರೆ ವಿದ್ಯುನ್ಮಾನ ಮಾಧ್ಯಮದ ಸ್ನೇಹಿತರು ‘ಸರ್ ನಾವಾಗಲೇ ಲೈವ್ ಕವರೇಜಿಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಈಗ ಬದಲಾವಣೆ ಮಾಡುವುದು ಕಷ್ಟವಾಗುತ್ತದೆ’ ಎಂದರು. ಆಗ, ಡಿ.ಕೆ.ಶಿವಕುಮಾರ್ ಅವರು, ಇನ್ನು ಮುಂದೆ ಪತ್ರಿಕಾಗೋಷ್ಠಿಗೆ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳುವಂತೆ ಕುರ್ಚಿ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
Karnataka News Live 4 June 2026ಮಕ್ಕಳಿಗೆ ವಾಲಿ, ರುದ್ರ ಎಂದು ಹೆಸರಿಟ್ಟಿದ್ದೇಕೆ ಕಾಂತಾರ ನಟ ಕಿಶೋರ್..
Karnataka News Live 4 June 2026Ballari - ರಸ್ತೆ ಕಾಮಗಾರಿ ಗುಂಡಿಗೆ ಬೈಕ್ ಬಿದ್ದು ನರ್ಸ್ ಸಾವು - ಪತಿ ಗಂಭೀರ, ನಿರ್ಲಕ್ಷ್ಯ ಆರೋಪ
ರಸ್ತೆ ಕಾಮಗಾರಿಗಾಗಿ ತೆಗೆಯಲಾಗಿದ್ದ ಗುಂಡಿಗೆ ಬೈಕ್ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಅವರ ಪತಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ..
Karnataka News Live 4 June 2026ರಾಜ್ಯಸಭೆಗೆ ಕಾಂಗ್ರೆಸ್ನ 5 ಅಭ್ಯರ್ಥಿಗಳು, ಖಾತೆ ಹಂಚಿಕೆ ಪೂರ್ಣ - ಡಿ.ಕೆ.ಶಿವಕುಮಾರ್ ಮಹತ್ವದ ಹೇಳಿಕೆ!
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಹಿರಿಯ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳ ಅನುಭವವನ್ನು ಪಡೆದು ಆಡಳಿತ ನಡೆಸುವುದಾಗಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ..
Karnataka News Live 4 June 2026ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಫೈನಲ್; ಯಾರಿಗೆ ಯಾವ ಖಾತೆ? ಇಲ್ಲಿದೆ ಪಟ್ಟಿ!
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ 13 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಿಯಾಂಕ್ ಖರ್ಗೆಗೆ ಗೃಹ ಇಲಾಖೆ ಸಿಕ್ಕರೆ, ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರಿಗೆ ಯಾವ ಖಾತೆ ನೀವೇ ನೋಡಿ..
Karnataka News Live 4 June 2026GBA, ನಾಯಕರ ನಿರ್ಲಕ್ಷ್ಯಕ್ಕೆ ಬೇಸತ್ತ ಜನ - ಸ್ವಂತ ಹಣದಲ್ಲಿ ರಸ್ತೆ ನಿರ್ಮಾಣ ಮಾಡ್ತಿರುವ ಅಪಾರ್ಟ್ಮೆಂಟ್ ನಿವಾಸಿಗಳು
ಜಾಲಹಳ್ಳಿ ಈಸ್ಟ್ನ 'ಶ್ರೀರಾಮ್ ಸಮೀಕ್ಷಾ' ಅಪಾರ್ಟ್ಮೆಂಟ್ ನಿವಾಸಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರತಿ ವರ್ಷ ತಮ್ಮ ಸ್ವಂತ ಹಣದಿಂದ ರಸ್ತೆ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಭೂ ವಿವಾದದ ಕಾರಣ ಅಭಿವೃದ್ಧಿ ಕಾಣದ ಈ ರಸ್ತೆಯು ಕಸದ ಡಂಪ್ಯಾರ್ಡ್ ಆಗಿ ಮಾರ್ಪಟ್ಟಿದೆ.
Karnataka News Live 4 June 2026Bhatkal - ಮುರಿನ್ಕಟ್ಟೆ ಧ್ವಂಸ ಪ್ರಕರಣ, ಹಿಂದೂ ಸಂಘಟನೆಗಳಿಂದ ನಾಳೆ ಭಟ್ಕಳ ಬಂದ್
Karnataka News Live 4 June 2026ಡೈರೆಕ್ಟರ್ ಕೆನ್ನೆಗೆ ಬಾರಿಸಿದ್ರು, ವಾಪಸ್ ಹೊಡೆಯೋಕೆ ಹೋಗಿದ್ದೆ - ಆ ಸತ್ಯ ಬಿಚ್ಚಿಟ್ಟ ಆ್ಯಕ್ಷನ್ ಕಿಂಗ್!
'ಬ್ಲಾಸ್ಟ್' ಸಿನಿಮಾ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿರುವ ನಟ ಅರ್ಜುನ್ ಸರ್ಜಾ, ತಾವು ಬಾಲನಟನಾಗಿದ್ದಾಗ ನಡೆದ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ನಿರ್ದೇಶಕರೊಬ್ಬರು ತನಗೆ ಕಪಾಳಮೋಕ್ಷ ಮಾಡಿದ್ದರಂತೆ.
Karnataka News Live 4 June 202625 ಲಕ್ಷ ರೂಪಾಯಿ ಕಾರ್ ಖರೀದಿ ಹಿಂದೆ Oyo ರೂಮ್ ಕಥೆ ಇದೆಯಾ? ಕೊನೆಗೂ ಮೌನ ಮುರಿದ Sonu Srinivas Gowda
ಬಿಗ್ ಬಾಸ್ ಕನ್ನಡ ಒಟಿಟಿ ಸೋನು ಶ್ರೀನಿವಾಸ್ ಗೌಡ ಅವರು ಹೊಸ ಕಾರ್ ತಗೊಂಡಿದ್ದಾರೆ. 25 ಲಕ್ಷ ರೂಪಾಯಿ ಕಾರ್ಗೆ ಎಲ್ಲಿಂದ ಹಣ ಬಂತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದು, ಈ ಬಗ್ಗೆ Sonu Srinivas Gowda ಅವರು ಮಾತನಾಡಿದ್ದಾರೆ.
Karnataka News Live 4 June 2026Cleaning Tips - ಪ್ಲಾಸ್ಟಿಕ್ ಬಕೆಟ್ ಸಖತ್ ಕೊಳೆಯಾಗಿದ್ಯಾ? ಈ ಸಿಂಪಲ್ ಟ್ರಿಕ್ ಬಳಸಿ ನೋಡಿ, ಅದು ಪಕ್ಕಾ ಹೊಸದರಂತೆ ಹೊಳೆಯುತ್ತೆ!
ಪ್ರತಿದಿನ ಸೋಪು, ಶಾಂಪೂ ಮತ್ತು ಗಟ್ಟಿಯಾದ ನೀರಿನ (Hard water) ನಿರಂತರ ಸಂಪರ್ಕಕ್ಕೆ ಬರುವುದರಿಂದ ಪ್ಲಾಸ್ಟಿಕ್ ಬಕೆಟ್ಗಳ ಮೇಲೆ ಉಪ್ಪಿನಂಶದ ಬಿಳಿ ಕಲೆಗಳು ಮತ್ತು ಜಿಡ್ಡು ಕುಳಿತುಕೊಳ್ಳುವುದು ಸಾಮಾನ್ಯ. ಅನೇಕ ಬಾರಿ ನಾವು ಇವುಗಳನ್ನು ಸ್ವಚ್ಛಗೊಳಿಸಲು ಕಷ್ಟಪಟ್ಟು ಉಜ್ಜುತ್ತೇವೆ ಅಥವಾ ಹೊಸ ಬಕೆಟ್ ಖರೀದಿಸಲು ಆಲೋಚಿಸುತ್ತೇವೆ. ಆದರೆ, ಹೀಗೆ ಮಾಡಿ!
Karnataka News Live 4 June 2026ಶುಭಾ ಪೂಂಜರಂತೆ ಪ್ರೀತಿಸಿ, ಮದುವೆಯಾದ್ರೂ, ಕಡಿಮೆ ಟೈಮ್ನಲ್ಲಿ ಡಿವೋರ್ಸ್ ಪಡೆದ ಕನ್ನಡ ನಟಿಯರಿವರು!
Kannada Actress Photos: ನಟಿ ಶುಭಾ ಪೂಂಜ ಅವರು ಮದುವೆಯಾಗಿ ನಾಲ್ಕು ವರ್ಷಗಳಾಗಿತ್ತು. ಪ್ರೀತಿಸಿ ಮದುವೆಯಾದ ಈ ಜೋಡಿ ಈಗ ಕೋರ್ಟ್ ಮೆಟ್ಟಿಲೇರಿದೆ. ಹೀಗೆ ಬಹಳ ಕಡಿಮೆ ಟೈಮ್ಗೆ ಡಿವೋರ್ಸ್ಗೆ ಅರ್ಜಿ ಸಲ್ಲಿಸಿ ದೂರ ಆದ ಕನ್ನಡ ನಟಿಯರು ಇವರು! ಯಾರು? ಯಾರು?
Karnataka News Live 4 June 202654 ವರ್ಷದ ಬಳಿಕ ಮತ್ತೆ ಬಂದಿದೆ 'ಮಾಂಸ ತಿನ್ನುವ ಭಯಾನಕ ಹುಳ'! ಗಾಯದ ಮೂಲಕ ದೇಹ ಪ್ರವೇಶಿಸುವ ಕೀಟ!
ದಶಕಗಳ ನಂತರ 'ನ್ಯೂ ವರ್ಲ್ಡ್ ಸ್ಕ್ರೂವರ್ಮ್' ಎಂಬ ಮಾಂಸ ತಿನ್ನುವ ಪರಾವಲಂಬಿ ಹುಳ ಮತ್ತೆ ಕಾಣಿಸಿಕೊಂಡಿದೆ. ಇದು ಗಾಯಗಳಲ್ಲಿ ಮೊಟ್ಟೆಯಿಟ್ಟು, ಮಾಂಸವನ್ನು ತಿನ್ನುವ ಮೂಲಕ ಮಾರಣಾಂತಿಕವಾಗಬಲ್ಲದು. ಇದನ್ನು ನಿಯಂತ್ರಿಸಲು ಕೃಷಿ ಇಲಾಖೆ ಕ್ವಾರಂಟೈನ್ ಮತ್ತು ಸಂತಾನಶಕ್ತಿಹೀನ ನೊಣಗಳ ತಂತ್ರವನ್ನು ಬಳಸುತ್ತಿದೆ.
Karnataka News Live 4 June 2026ಡಿಕೆಶಿ ಪ್ರಮಾಣವಚನದಲ್ಲಿ ನಿರೂಪಕಿ ಬಗ್ಗೆ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ- ಇವರೇ ಮಾಡಿದ್ಯಾಕೆ? ಇಲ್ಲಿದೆ ವಿವರ
Karnataka News Live 4 June 2026ಇದು ಟ್ರೇಲರ್ ಮಾತ್ರ, ಪಿಕ್ಚರ್ ಅಭಿ ಬಾಕಿ ಹೈ.. - ಸಿಎಂ ಡಿಕೆಶಿ ಭೇಟಿಯ ಬಳಿಕ ಹರಿಪ್ರಸಾದ್ ಹೇಳಿದ್ದೇನು?
ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು, ಇದು ಕೇವಲ ಸೌಜನ್ಯ ಭೇಟಿಯಾಗಿದ್ದು, ಯಾವುದೇ ರಾಜಕೀಯ ಅಜೆಂಡಾ ಅಥವಾ ವಿಶೇಷ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
Karnataka News Live 4 June 2026ಹೈಕಮಾಂಡ್ ನಿರ್ಧಾರದ ಬಳಿಕ ಗುಡ್ ಅಥವಾ ಬ್ಯಾಡ್ ಚಾಯ್ಸ್ ಪ್ರಶ್ನೆಯೇ ಇಲ್ಲ - ಮಾಜಿ ಸಚಿವ ಕೆ.ಎನ್.ರಾಜಣ್ಣ
ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ತಾವು ಈ ಹಿಂದೆ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಸಮರ್ಥಿಸಿಕೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, ಅಂತಿಮ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್ನದ್ದೇ ಆಗಿದ್ದು, ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
Karnataka News Live 4 June 2026ಕನಸಲ್ಲೂ ಕೂಡಾ ನಾನು ಸ್ಪೀಕರ್ ಆಗ್ತೇನಿ ಅಂತ ಬಯಸಿರಲಿಲ್ಲ - ರುದ್ರಪ್ಪ ಲಮಾಣಿ ಹೇಳಿದ್ದೇನು?
ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆಯೇ ವಿಧಾನಸಭೆ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ಸಚಿವ ಸ್ಥಾನ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Karnataka News Live 4 June 2026ಕರ್ನಾಟಕ ಟ್ರೈನ್ ಸುದ್ದಿ - ನೈಋತ್ಯ ರೈಲ್ವೆಯ ಐತಿಹಾಸಿಕ ಸಾಧನೆ, ಮೇ ತಿಂಗಳಿನಲ್ಲಿ ದಾಖಲೆಯ ₹1481 ಕೋಟಿ ದಾಟಿದ ಆದಾಯ!
Karnataka News Live 4 June 2026ಕೊಪ್ಪಳ ಕಾಂಗ್ರೆಸ್ನಲ್ಲಿ ನಡೆಯಲಿರುವ ದೊಡ್ಡ ಬದಲಾವಣೆಯ ಸುಳಿವು ನೀಡಿದ ಹರಿಪ್ರಸಾದ್!
ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಭಿನ್ನಮತಗೊಂಡಿರುವ ಕಾಂಗ್ರೆಸ್ ಘಟಕಗಳಲ್ಲಿ ಒಗ್ಗಟ್ಟಾಗಿ ಪಕ್ಷ ಸಂಘಟಿಸ ಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅದ್ಯಕ್ಷ ಬಿ.ಕೆ.ಹರಿಪ್ರಾಸದ್ ಸೂಚನೆ ನೀಡಿದರು.
Karnataka News Live 4 June 2026ಫೋರ್ಬ್ಸ್ ಏಷ್ಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ 17 ರ ಹರೆಯದ ಬಾಲಕಿ, ಜಾಗತಿಕ ಮಟ್ಟದಲ್ಲಿ ಮಿಂಚಿದವಳು ಯಾರೀಕೆ?!
ಬೆಂಗಳೂರಿನ 17 ವರ್ಷದ ವಿದ್ಯಾರ್ಥಿನಿ ದಿವಾ ಉತ್ಕರ್ಷ, ತಮ್ಮ 'ಪ್ರಾಜೆಕ್ಟ್ ಸೂರ್ಯ' ಸಂಸ್ಥೆಯ ಮೂಲಕ ಮಾಡಿದ ಸಮಾಜ ಸೇವೆಗಾಗಿ 'ಫೋರ್ಬ್ಸ್ 30 ಅಂಡರ್ 30 ಏಷ್ಯಾ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ಸಹೋದರನಿಗೆ ಟೈಪ್ 1 ಮಧುಮೇಹ ಪತ್ತೆಯಾದ ನಂತರ ಪ್ರೇರಿತರಾಗಿ ಸ್ಥಾಪಿಸಿದ ಈ ಸಂಸ್ಥೆ ನೆರವು ನೀಡಿದೆ.
Karnataka News Live 4 June 2026ಇಂದಿರಾಗಾಂಧಿ ಹೆಸರಲ್ಲಿ ಸಿನಿಮಾ ಟೆಂಟ್, ಇಂದು ಅದೆಷ್ಟು ಥಿಯೇಟರ್ಗೆ ಓನರ್ ಗೊತ್ತಾ ಡಿಕೆ ಶಿವಕುಮಾರ್?
ಕರ್ನಾಟಕ ಪೊಲಿಟಿಕ್ಸನಲ್ಲಿ ಡಿಕೆಶಿ ಅನ್ನೊ ಹೊಸ ಸುನಾಮಿ ಎದ್ದಿದೆ. ಇಷ್ಟು ದಿನ ಉಪ ಮುಖ್ಯಮಂತ್ರಿ ಆಗಿದ್ದ ಡಿಕೆ ಶಿವಕುಮಾರ್, ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ರಾಜಕಾರಣ ಅನ್ನೋ ಕಾರ್ಕೋಟಕವನ್ನ ಗಟ ಗಟ ಅಂತ ಕುಡಿದು ಅರಗಿಸಿಕೊಂಡಿರೋ ಕನಕಪುರದ ಬಂಡೆ ರಾಜಕಾರಣಕ್ಕೆ ಬರೋ ಮೊದಲು ಏನಾಗಿದ್ರು ಅಂತ ನೋಡಿದ್ರೆ ಅಲ್ಲಿ ಸಿಗೋದು ಸಿನಿಮಾ ನಂಟು!