MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಮಂತ್ರಿಗಿರಿ ಅಸಮಾಧಾನ ಶಮನಕ್ಕೆ ಅಖಾಡಕ್ಕಿಳಿದ ಟ್ರಬಲ್ ಶೂಟರ್ ಸಿಎಂ ಡಿ.ಕೆ.ಶಿವಕುಮಾರ್, ಚಕ್ರಾಯುಧ ಕೆಳಗಿಳಿಸ್ತಾರ ಕೃಷ್ಣಪ್ಪ!

ಮಂತ್ರಿಗಿರಿ ಅಸಮಾಧಾನ ಶಮನಕ್ಕೆ ಅಖಾಡಕ್ಕಿಳಿದ ಟ್ರಬಲ್ ಶೂಟರ್ ಸಿಎಂ ಡಿ.ಕೆ.ಶಿವಕುಮಾರ್, ಚಕ್ರಾಯುಧ ಕೆಳಗಿಳಿಸ್ತಾರ ಕೃಷ್ಣಪ್ಪ!

ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಮುನಿಸಿಕೊಂಡಿದ್ದ ಶಾಸಕ ಎಂ. ಕೃಷ್ಣಪ್ಪ ಅವರನ್ನು ಸಮಾಧಾನಪಡಿಸಲು ಡಿ.ಕೆ. ಶಿವಕುಮಾರ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರ ನಿವಾಸಕ್ಕೆ ಭೇಟಿ ನೀಡಿದರು. ಅಸಮಾಧಾನ ತೋರಿದ ಕೃಷ್ಣಪ್ಪ ಅವರೊಂದಿಗೆ 'ಕ್ಲೋಸ್ ಡೋರ್' ಸಭೆ ನಡೆಸಿ ಚರ್ಚೆ ನಡೆಸಲಾಗಿದೆ.

2 Min read
Author : Sathish Kumar KH
Published : Aug 05 2026, 09:01 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಬೆಂಗಳೂರು (ಆ.05): ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ನಾಯಕರನ್ನು ತಂಪಾಗಿಸಲು ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ/ಬದಲಾವಣೆಯ ಬೆನ್ನಲ್ಲೇ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಮುನಿಸಿಕೊಂಡಿರುವ ಬೆಂಗಳೂರಿನ ವಿಜಯನಗರ ಕ್ಷೇತ್ರದ ಹಿರಿಯ ಶಾಸಕ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ಕಾಂಗ್ರೆಸ್‌ನ 'ಟ್ರಬಲ್ ಶೂಟರ್' ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ದಿಢೀರ್ ಭೇಟಿ ನೀಡಿ ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : Asianet News

ಮನೆಯಲ್ಲಿದ್ದರೂ ಸ್ವಾಗತಿಸಲು ಹೊರಬರದೆ ಮುನಿಸು ತೋರಿದ ಕೃಷ್ಣಪ್ಪ!

ವಿಜಯನಗರದಲ್ಲಿರುವ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ಹೈಕಮಾಂಡ್ ನಾಯಕರು ಆಗಮಿಸಿದ ವೇಳೆ ಮನೆಯಲ್ಲಿ ಆತಂಕ ಮತ್ತು ಅಸಮಾಧಾನದ ವಾತಾವರಣ ಎದ್ದು ಕಾಣುತ್ತಿತ್ತು. ಪ್ರಮುಖ ನಾಯಕರು ಮನೆ ಬಾಗಿಲಿಗೆ ಬಂದರೂ ಶಾಸಕ ಎಂ. ಕೃಷ್ಣಪ್ಪ ಅವರು ಹೊರಗೆ ಬಾರದೆ ತಮ್ಮ ತೀವ್ರ ಮುನಿಸನ್ನು ಪ್ರದರ್ಶಿಸಿದರು. ಕೊನೆಗೆ ಅವರ ಪುತ್ರ, ಶಾಸಕ ಪ್ರಿಯಾ ಕೃಷ್ಣ ಅವರೇ ಅತ್ಯಂತ ಬೇಸರದಿಂದಲೇ ಬಂದಂತಹ ನಾಯಕರನ್ನು ಮನೆಗೆ ಬರಮಾಡಿಕೊಂಡರು.

ಈ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ರಾಜ್ಯ ನಾಯಕರಾದ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತಾ, ಸಚಿವರಾದ ಜಮೀರ್ ಅಹಮದ್ ಖಾನ್, ಹೆಚ್.ಸಿ. ಬಾಲಕೃಷ್ಣ, ಶಾಸಕ ರಂಗನಾಥ್ ಹಾಗೂ ಎಂಎಲ್‌ಸಿ ವಿನಯ್ ಕಾರ್ತಿಕ್ ಉಪಸ್ಥಿತರಿದ್ದರು.

Related Articles

Related image1
ರಾಜ್ಯಕ್ಕೆ ಶೇ.60 ಮುಂಗಾರು ಕೊರತೆ, 178 ತಾಲೂಕು ಬರ ಪೀಡಿತ; ಶಾಸಕರಿಗೆ ₹1 ಕೋಟಿ ಅನುದಾನ ಕೊಟ್ಟ ಡಿ.ಕೆ. ಶಿವಕುಮಾರ್
Related image2
ಕಣ್ಮುಚ್ಚಿ ಕುಳಿತ ಬಿಬಿಎಂಪಿ; ಬಸ್‌ಸ್ಟಾಪ್‌ಗಳನ್ನೇ ಮುಚ್ಚಿಹಾಕಿದ 'ಬ್ಯಾನರ್‌' ಕೃಷ್ಣಪ್ಪ!
35
Image Credit : Asianet News

ಸತತ ಒಂದೂವರೆ ಗಂಟೆ ಕ್ಲೋಸ್ ಡೋರ್ ಸಭೆ!

ಕೃಷ್ಣಪ್ಪ ಅವರ ನಿವಾಸದ ಪ್ರತ್ಯೇಕ ಕೊಠಡಿಯಲ್ಲಿ ಸತತ 1.5 ಗಂಟೆಗಳ ಕಾಲ ಸುದೀರ್ಘ 'ಕ್ಲೋಸ್ ಡೋರ್' (ಬಾಗಿಲು ಮುಚ್ಚಿದ) ಚರ್ಚೆ ನಡೆಯಿತು. ಈ ಮಹತ್ವದ ಸಭೆಯಲ್ಲಿ ಡಿ.ಕೆ. ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ, ಶಾಸಕ ಎಂ. ಕೃಷ್ಣಪ್ಪ, ಶಾಸಕ ಪ್ರಿಯಾ ಕೃಷ್ಣ ಹಾಗೂ ಕೃಷ್ಣಪ್ಪ ಅವರ ಎರಡನೇ ಪುತ್ರ ಪ್ರದೀಪ್ ಮಾತ್ರ ಭಾಗವಹಿಸಿದ್ದರು. ಸಚಿವರಾದ ಜಮೀರ್ ಅಹಮದ್, ಹೆಚ್.ಸಿ. ಬಾಲಕೃಷ್ಣ ಸೇರಿದಂತೆ ಇತರ ನಾಯಕರು ಹೊರಗಿನ ಹಾಲ್‌ನಲ್ಲೇ ಕಾಯುತ್ತ ಕುಳಿತಿದ್ದರು.

ಸಭೆಯ ಉದ್ದಕ್ಕೂ ಎಂ. ಕೃಷ್ಣಪ್ಪ ಅವರು ತಮಗಾದ ಅನ್ಯಾಯ ಮತ್ತು ನೋವನ್ನು ನಾಯಕರ ಮುಂದೆ ತೋಡಿಕೊಂಡರು. ಬೆಂಗಳೂರಿನಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸಚಿವ ಸ್ಥಾನ ನೀಡದೆ ನಿರ್ಲಕ್ಷಿಸಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ.

45
Image Credit : Asianet News

ಕೃಷ್ಣಪ್ಪ ಮನೆಯಲ್ಲೇ 'ದೋಸೆ ಡಿಪ್ಲೊಮಸಿ':

ಸುದೀರ್ಘ ಸಭೆಯ ಬಳಿಕ ಶಾಸಕರ ಮುನಿಸು ತಣಿಸಲು 'ದೋಸೆ ಡಿಪ್ಲೊಮಸಿ' ತಂತ್ರ ಬಳಸಲಾಯಿತು. ಕೃಷ್ಣಪ್ಪ ಅವರ ಮನೆಯಲ್ಲೇ ನಾಯಕರು ಊಟ ಮಾಡಲು ನಿರ್ಧರಿಸಿದರು. ಪ್ರಸಿದ್ಧ ಇಂದ್ರಪ್ರಸ್ಥ ಹೋಟೆಲ್‌ನಿಂದ ವಿಶೇಷವಾಗಿ 'ಖಾಲಿ ದೋಸೆ' ತರಿಸಿ, ಡಿ.ಕೆ. ಶಿವಕುಮಾರ್ ಹಾಗೂ ಸುರ್ಜೇವಾಲ ಅವರಿಗೆ ಕೃಷ್ಣಪ್ಪ ಉಪಚಾರ ಮಾಡಿದರು.

ಅಸಮಾಧಾನದ ನಡುವೆಯೂ ನಡೆದ ಈ ಭೋಜನ ಕೂಟವು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಹೈಕಮಾಂಡ್ ನಾಯಕರ ಭರವಸೆಯಿಂದಾಗಿ ಎಂ. ಕೃಷ್ಣಪ್ಪ ತಮ್ಮ ಪಟ್ಟು ಸಡಿಲಿಸಿ 'ಚಕ್ರಾಯುಧ' ಕೆಳಗಿಳಿಸುತ್ತಾರೆಯೇ ಅಥವಾ ತಮ್ಮ ಅಸಮಾಧಾನವನ್ನು ಮುಂದುವರಿಸುತ್ತಾರೆಯೇ ಎಂಬುದನ್ನು ಕಾಯ್ದುನೋಡಬೇಕಿದೆ.

55
Image Credit : Asianet News

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಂದಿದ್ದರು. ಮಿಸ್ಟೇಕ್ ಆಗಿದೆ ಸರಿ ಮಾಡ್ತೀನಿ ಎಂದಿದ್ದಾರೆ.  ಹೇಗೆ ಸರಿ ಮಾಡಿ ಕೊಡ್ತಾರೆ ಗೊತ್ತಿಲ್ಲ. ಮಿಸ್ಟೇಕ್ ಆಗಿದೆ ತಪ್ಪಾಗಿದೆ ಎಂದು ತಿಳಿಸಿದ್ದಾರೆ. ನಾವು ಬೆಸ್ಟ್ ಏನು ಮಾಡೋದಕ್ಕೆ ಸಾಧ್ಯ ಅದನ್ನು ಮಾಡುತ್ತೇವೆ ಅಂದಿದ್ದಾರೆ. ಸಚಿವ ಸ್ಥಾನ ಹೊರತು ಪಡಿಸಿ ಬೇರೆ ಏನಾದ್ರು ಕೊಟ್ಟರೆ ನಿಮಗೆ ಒಪ್ಪಿಗೆ ಇದೆಯೇ ಎಂಬ ಪ್ರಶ್ನೆಗೆ ಇಲ್ಲ…, ಒಪ್ಪಿಗೆ ಇಲ್ಲ ಎಂದು ಶಾಸಕ ಕೃಷ್ಣಪ್ಪ ತಿಳಿಸಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ರಾಜಕೀಯ
ರಾಜಕೀಯ ಸುದ್ದಿ
ರಾಜಕೀಯ ಪಕ್ಷ
ಡಿ.ಕೆ. ಶಿವಕುಮಾರ್
Latest Videos
Recommended Stories
Recommended image1
ಕಾವೇರಿ, ಮೇಕೆದಾಟು ವಿವಾದ ತೀವ್ರಗೊಳ್ಳುತ್ತಿದ್ದಂತೆ ಕಿಶಾವು ಜಲ ಮಾದರಿ ಚರ್ಚೆಯಾಗುತ್ತಿರುವುದೇಕೆ?
Recommended image2
ಕರ್ನಾಟಕದಲ್ಲಿ ಸಿಪ್ಲಾ 200 ಕೋಟಿ, ರಾಕೆಟ್ ಇಂಡಿಯಾದಿಂದ 100 ಕೋಟಿ ಹೂಡಿಕೆ
Recommended image3
ರಾಜೀನಾಮೆ ವಾಪಸ್ ಪಡೆದ ಶಾಸಕ ಯಶವಂತರಾಯಗೌಡ ಪಾಟೀಲ್; ಸಚಿವ ಸಂಪುಟ ವಿಸ್ತರಣೆ ಪ್ರಹಸನಕ್ಕೆ ತೆರೆ!
Related Stories
Recommended image1
ರಾಜ್ಯಕ್ಕೆ ಶೇ.60 ಮುಂಗಾರು ಕೊರತೆ, 178 ತಾಲೂಕು ಬರ ಪೀಡಿತ; ಶಾಸಕರಿಗೆ ₹1 ಕೋಟಿ ಅನುದಾನ ಕೊಟ್ಟ ಡಿ.ಕೆ. ಶಿವಕುಮಾರ್
Recommended image2
ಕಣ್ಮುಚ್ಚಿ ಕುಳಿತ ಬಿಬಿಎಂಪಿ; ಬಸ್‌ಸ್ಟಾಪ್‌ಗಳನ್ನೇ ಮುಚ್ಚಿಹಾಕಿದ 'ಬ್ಯಾನರ್‌' ಕೃಷ್ಣಪ್ಪ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved