- Home
- Entertainment
- ಡೈರೆಕ್ಟರ್ ಕೆನ್ನೆಗೆ ಬಾರಿಸಿದ್ರು, ವಾಪಸ್ ಹೊಡೆಯೋಕೆ ಹೋಗಿದ್ದೆ: ಆ ಸತ್ಯ ಬಿಚ್ಚಿಟ್ಟ ಆ್ಯಕ್ಷನ್ ಕಿಂಗ್!
ಡೈರೆಕ್ಟರ್ ಕೆನ್ನೆಗೆ ಬಾರಿಸಿದ್ರು, ವಾಪಸ್ ಹೊಡೆಯೋಕೆ ಹೋಗಿದ್ದೆ: ಆ ಸತ್ಯ ಬಿಚ್ಚಿಟ್ಟ ಆ್ಯಕ್ಷನ್ ಕಿಂಗ್!
'ಬ್ಲಾಸ್ಟ್' ಸಿನಿಮಾ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿರುವ ನಟ ಅರ್ಜುನ್ ಸರ್ಜಾ, ತಾವು ಬಾಲನಟನಾಗಿದ್ದಾಗ ನಡೆದ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ನಿರ್ದೇಶಕರೊಬ್ಬರು ತನಗೆ ಕಪಾಳಮೋಕ್ಷ ಮಾಡಿದ್ದರಂತೆ.

ಭರ್ಜರಿ ಕಮ್ಬ್ಯಾಕ್
ಬಾಲನಟನಾಗಿ ಸಿನಿರಂಗಕ್ಕೆ ಬಂದು, ದಕ್ಷಿಣ ಭಾರತದ ಸೂಪರ್ಸ್ಟಾರ್ ಆದವರು ನಟ ಅರ್ಜುನ್ ಸರ್ಜಾ. 90ರ ದಶಕದಲ್ಲಿ ವಿಜಯ್, ಅಜಿತ್, ರಜನಿಕಾಂತ್, ಕಮಲ್ ಹಾಸನ್ ಅವರಷ್ಟೇ ದೊಡ್ಡ ಸ್ಟಾರ್ಡಮ್ ಇವರಿಗೂ ಇತ್ತು. ಕನ್ನಡಿಗರಿಗೂ ಇವರು 'ಆ್ಯಕ್ಷನ್ ಕಿಂಗ್' ಅಂತಾನೇ ಫೇಮಸ್. 2005ರವರೆಗೂ ಹೀರೋ ಆಗಿ ಮಿಂಚಿದ ಇವರು, ನಂತರ ವಿಲನ್ ಮತ್ತು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಈಗ 'ಬ್ಲಾಸ್ಟ್' ಎಂಬ ಸೂಪರ್ಹಿಟ್ ಸಿನಿಮಾ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ.
ಫುಲ್ ಖುಷ್
ಅಭಿಮಾನಿಗಳು ತಮ್ಮ 'ಆ್ಯಕ್ಷನ್ ಕಿಂಗ್' ವಾಪಸ್ ಬಂದಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ. ಬಾಕ್ಸ್ ಆಫೀಸ್ನಲ್ಲೂ 'ಬ್ಲಾಸ್ಟ್' ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುತ್ತಿದೆ. ಈ ಖುಷಿ ಮಧ್ಯೆ, ಅರ್ಜುನ್ ಸರ್ಜಾ ತಾವು ಬಾಲನಟನಾಗಿದ್ದಾಗ ಹಿಂದಿ ಸಿನಿಮಾವೊಂದರ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಅದು 1985ರಲ್ಲಿ ತೆರೆಕಂಡ 'ಸಿಂಹದ ಮರಿ ಸೈನ್ಯ' ಎಂಬ ಸಿನಿಮಾ.
ಡೈರೆಕ್ಟರ್ ಕೈಲಿ ಏಟು ತಿಂದೆ
ಆ ಸಿನಿಮಾದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತನಗೆ ಹೊಡೆದಿದ್ದರು ಅಂತ ಅರ್ಜುನ್ ಸರ್ಜಾ ಹೇಳಿದ್ದಾರೆ. ಯಾಕೆ ಹೊಡೆದರು ಎಂಬುದನ್ನು ಅವರೇ ವಿವರಿಸಿದ್ದಾರೆ. ಸಿನಿಮಾ ಶೂಟಿಂಗ್ನ ಮೊದಲ ದಿನವೇ ನಾನು ಡೈರೆಕ್ಟರ್ ಕೈಲಿ ಏಟು ತಿಂದೆ. ಕತೆಯಲ್ಲಿ ಒಂದು ಹುಡುಗ ಸಾಯುವ ದೃಶ್ಯವಿತ್ತು. ಅದನ್ನೇ ಶೂಟ್ ಮಾಡುತ್ತಿದ್ದರು.
ಜೋಕ್ ಮಾಡಿ ನಗಿಸುತ್ತಿದ್ದರು
ಡೈರೆಕ್ಟರ್ ನನಗೆ ಅತ್ತು ನಟಿಸು ಅಂತ ಹೇಳುತ್ತಿದ್ದರು. ಆದರೆ ನನಗೆ ಅಳು ಬರುತ್ತಿರಲಿಲ್ಲ. ಅಕ್ಕಪಕ್ಕ ಇದ್ದವರೆಲ್ಲಾ ಜೋಕ್ ಮಾಡಿ ನಗಿಸುತ್ತಿದ್ದರು. ನನಗೂ ನಗು ಕಂಟ್ರೋಲ್ ಮಾಡೋಕೆ ಆಗಲಿಲ್ಲ. ಆಗ ಡೈರೆಕ್ಟರ್ ಹತ್ತಿರ ಬಂದು ಕೆನ್ನೆಗೆ ಒಂದೇಟು ಬಾರಿಸಿದರು. ನನಗೆ ಶಾಕ್ ಆಗೋಯ್ತು. ಕಣ್ಣು ಕೆಂಪಾಗಿ, ಕಣ್ಣೀರು ಬಂತು.
ಈಗ ಸರಿ ಹೋಯ್ತು, ಶಾಟ್ ರೆಡಿ
ವಾಪಸ್ ಡೈರೆಕ್ಟರ್ಗೆ ಹೊಡೆಯಬೇಕು ಅನ್ನೋವಷ್ಟು ಕೋಪ ಬಂತು. ಆದರೆ ಎಲ್ಲವನ್ನೂ ಕಂಟ್ರೋಲ್ ಮಾಡಿಕೊಂಡೆ. ಆಗ ಡೈರೆಕ್ಟರ್, 'ಈಗ ಸರಿ ಹೋಯ್ತು, ಶಾಟ್ ರೆಡಿ' ಅಂದರು ಅಂತ ಅರ್ಜುನ್ ಸರ್ಜಾ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ನನಗೆ 16-17 ವರ್ಷ ವಯಸ್ಸಲ್ಲೇ ಸಿಕ್ಸ್ ಪ್ಯಾಕ್ ಇತ್ತು, ಆದರೆ ಆಗ ಆ ಕಲ್ಚರ್ ಇರಲಿಲ್ಲ ಅಂತಾನೂ ಅರ್ಜುನ್ ಸರ್ಜಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

