12:12 AM (IST) Jul 24

Karnataka News Live 23rd July:ಅಂದು BSY, ಇಂದು ಡಿಕೆಶಿ - ಸಿಎಂ ಬದಲಾವಣೆ ಚರ್ಚೆ ನಡುವೆಯೇ ಗುಟ್ಟಾಗಿ ದೇವಾಲಯಕ್ಕೆ ಡಿಸಿಎಂ ಭೇಟಿ

DCM DK Shivakumar And Temple Visiting: ಡಿಸಿಎಂ ಡಿಕೆ ಶಿವಕುಮಾರ್ ದೇವಾಲಯಕ್ಕೆ ಖಾಸಗಿ ಭೇಟಿ ನೀಡಿದ್ದಾರೆ. ಈ ಹಿಂದೆ ಬಿಎಸ್ ಯಡಿಯೂರಪ್ಪ ಸಹ ಸಿಎಂ ಆಗುವ ಮುನ್ನ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಸಿಎಂ ಬದಲಾವಣೆ ಚರ್ಚೆ ನಡುವೆ ಡಿಕೆಶಿ ಭೇಟಿ ಕುತೂಹಲ ಮೂಡಿಸಿದೆ.

Read Full Story
11:53 PM (IST) Jul 23

Karnataka News Live 23rd July:Karwar Canada job fraud - ಕೆನಡಾದಲ್ಲಿ ಲೈಬ್ರರಿ ಬಾಯ್ ಕೆಲಸದ ಆಸೆ ತೋರಿಸಿ ₹3 ಉಂಡೇನಾಮ; ಆರೋಪಿಗೆ ತೀವ್ರ ಶೋಧ

ಕೆನಡಾದಲ್ಲಿ ಲೈಬ್ರರಿ ಬಾಯ್ ಕೆಲಸ ಕೊಡಿಸುವುದಾಗಿ ನಂಬಿಸಿ 3 ಲಕ್ಷ ರೂ. ಪಡೆದು ವಂಚಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story
09:37 PM (IST) Jul 23

Karnataka News Live 23rd July:Ekka Box Office Collection - ನಿರ್ಮಾಪಕರ ಜೇಬು ತುಂಬಿಸ್ತಿದೆ ಬ್ಯಾಂಗಲ್ ಬಂಗಾರಿ; ಈವರೆಗಿನ ಕಲೆಕ್ಷನ್ ಎಷ್ಟು?

Ekka Movie Box Office Collection: ಕನ್ನಡ ಚಿತ್ರರಂಗದಲ್ಲಿ ಚೇತರಿಕೆ ಕಾಣದೇ ಇರುವ ಸಮಯದಲ್ಲಿ 'ಎಕ್ಕ' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಳ್ಳಿಯಿಂದ ಬೆಂಗಳೂರಿಗೆ ಬರುವ ಮುತ್ತು ಎಂಬಾತನ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ಕಥಾವಸ್ತು.

Read Full Story
09:17 PM (IST) Jul 23

Karnataka News Live 23rd July:ಬೆಂಗಳೂರಲ್ಲಿ ಇಬ್ಬರು ಬಾಲ್ಯ ಸ್ನೇಹಿತೆಯರು ಡಿಜಿಟಲ್; ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಹಣಕ್ಕೆ ವಂಚಕರು ಡಿಮ್ಯಾಂಡ್!

ಬೆಂಗಳೂರಿನಲ್ಲಿ 'ಡಿಜಿಟಲ್ ಅರೆಸ್ಟ್' ಎಂಬ ಹೊಸ ಸೈಬರ್ ವಂಚನೆ ಕಾಣಿಸಿಕೊಂಡಿದ್ದು, ಇಬ್ಬರು ಬಾಲ್ಯ ಸ್ನೇಹಿತೆಯರನ್ನು ವಿವಸ್ತ್ರಗೊಳಿಸಿ 58 ಸಾವಿರ ರೂಪಾಯಿ ಸುಲಿಗೆ ಮಾಡಲಾಗಿದೆ. 

Read Full Story
08:50 PM (IST) Jul 23

Karnataka News Live 23rd July:ಉಡುಪಿಯಲ್ಲಿ ರೆಡ್ ಅಲರ್ಟ್ - ಜಿಲ್ಲೆಯ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ರಜೆ

Udupi Rain Alert Update: ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲಾಡಳಿತವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆಗಳಿವೆ.

Read Full Story
08:39 PM (IST) Jul 23

Karnataka News Live 23rd July:Kodagu Horror - 2ನೇ ಹೆಂಡತಿ ಮಗು ಹತ್ಯೆ ಮಾಡಿ, ಮೊದಲನೇ ಹೆಂಡತಿ ಮಗುವನ್ನು ಹಳ್ಳಕ್ಕೆ ಎಸೆದವನು ಅಂದರ್!

ಎರಡನೇ ಪತ್ನಿಯ ಮಗುವನ್ನು ಕೊಂದು ತೋಟದಲ್ಲಿ ಹೂತಿಟ್ಟಿದ್ದ ವ್ಯಕ್ತಿಯ ಕ್ರೌರ್ಯ, ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮತ್ತೊಂದು ಬಾಲಕಿಯಿಂದ ಬಯಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story
08:17 PM (IST) Jul 23

Karnataka News Live 23rd July:Raichur Tree Falls incident - ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮರ ಮುರಿದು ಬಿದ್ದು ದಂಪತಿ ಸ್ಥಳದಲ್ಲೇ ಸಾವು, ಮಗು ಬದುಕಿದ್ದೇ ಪವಾಡ!

ರಾಯಚೂರಿನಲ್ಲಿ ಭೀಕರ ದುರ್ಘಟನೆ. ಮರ ಬಿದ್ದು ಬೈಕ್‌ ಸವಾರ ದಂಪತಿ ಸ್ಥಳದಲ್ಲೇ ಮೃತ್ಯು. ಮಗುವಿಗೆ ಪವಾಡಸದೃಶ ರಕ್ಷಣೆ.
Read Full Story
07:19 PM (IST) Jul 23

Karnataka News Live 23rd July:Bhatkal Girl Missing case - ಜುಲೈ 18ರಂದು ನಾಪತ್ತೆಯಾಗಿದ್ದ ಯುವತಿ ಮಥುರಾದಲ್ಲಿ ಪತ್ತೆ! ಭಟ್ಕಳ ಪೊಲೀಸರ ಕ್ರಮಕ್ಕೆ ಮೆಚ್ಚುಗೆ, ಏನಿದು ಪ್ರಕರಣ?

ಭಟ್ಕಳದಲ್ಲಿ ನಾಪತ್ತೆಯಾಗಿದ್ದ ಯುವತಿ ಮಥುರಾದಲ್ಲಿ ಪತ್ತೆ. ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ಕರೆತರಲಾಗಿದೆ. ಯುವತಿ ಸ್ವಇಚ್ಛೆಯಿಂದ ಮಹಿಳೆಯೊಂದಿಗೆ ತೆರಳಿದ್ದಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
Read Full Story
06:59 PM (IST) Jul 23

Karnataka News Live 23rd July:ಬೆಂಗಳೂರು ಕೆ.ಜಿ.ಹಳ್ಳಿ-ಡಿಜೆ.ಹಳ್ಳಿ ಗಲಭೆ - ತಪ್ಪೊಪ್ಪಿಕೊಂಡ ಮೂವರಿಗೆ ಎನ್ಐಎ ಕೋರ್ಟ್ 7 ವರ್ಷ ಜೈಲು ಶಿಕ್ಷೆ

2020ರ ಕೆ.ಜಿ.ಹಳ್ಳಿ ಮತ್ತು ಡಿಜೆ.ಹಳ್ಳಿ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ತಪ್ಪು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
Read Full Story
06:46 PM (IST) Jul 23

Karnataka News Live 23rd July:ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರ ಕೊಲೆ; ಕತ್ತು ಸೀಳಿ ಹೆದ್ದಾರಿಯಲ್ಲಿ ಬೀಸಾಡಿದ ಕಿಡಿಗೇಡಿಗಳು!

ಬೆಂಗಳೂರು ಮೂಲದ ಇಬ್ಬರು ಬಿಜೆಪಿ ಮುಖಂಡರಾದ ತಂದೆ-ಮಗನನ್ನು ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಲು ತೆರಳಿದ್ದ ವೇಳೆ, ರಾಜಿ ಮಾಡಿಕೊಳ್ಳೋಣವೆಂದು ಕರೆದಾಗ ಈ ಘಟನೆ ನಡೆದಿದೆ.

Read Full Story
06:35 PM (IST) Jul 23

Karnataka News Live 23rd July:IRCTCಯಿಂದ ಮುಂಗಾರು ಆಫರ್ - ಬೆಂಗಳೂರು-ಮೈಸೂರಿಗೆ ವಿಶೇಷ ಟ್ರಿಪ್

Bengaluru Mysuru Travel IRCTC Package: ಐಆರ್‌ಸಿಟಿಸಿ ಬೆಂಗಳೂರು ಮತ್ತು ಮೈಸೂರಿಗೆ 2 ರಾತ್ರಿ 3 ದಿನಗಳ ಪ್ರವಾಸ ಪ್ಯಾಕೇಜ್ ನೀಡುತ್ತಿದೆ. ಈ ಪ್ಯಾಕೇಜ್‌ನಲ್ಲಿ ಎಸಿ ಕಾರು, ಹೋಟೆಲ್ ವಸತಿ, ಊಟ ಮತ್ತು ಪ್ರಯಾಣ ವಿಮೆ ಸೇರಿವೆ. ಹಾಗಾಗಿ ಪ್ರಯಾಣಿಕರು ಈ ವಿಶೇಷ ಟೂರ್ ಪ್ಯಾಕೇಜ್‌ನ್ನು ಆನಂದಿಸಬಹುದು.

Read Full Story
06:17 PM (IST) Jul 23

Karnataka News Live 23rd July:ಮಲೆನಾಡಿಗೆ ಗುಡ್‌ನ್ಯೂಸ್ ಕೊಟ್ಟ ಸಚಿವರು, ಶಿವಮೊಗ್ಗಕ್ಕೆ ಬರಲಿದೆ ಬರಲಿದೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ!

ಶಿವಮೊಗ್ಗವನ್ನು ಮಲೆನಾಡಿನ ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳಿವೆ. ಸಿಮ್ಸ್ ಮತ್ತು ಮೆಗ್ಗಾನ್ ಆಸ್ಪತ್ರೆಗಳ ಮೂಲಸೌಕರ್ಯವನ್ನು ಹೆಚ್ಚಿಸಲಾಗುವುದು.
Read Full Story
06:12 PM (IST) Jul 23

Karnataka News Live 23rd July:ಯತ್ನಾಳ್‌ರಿಂದ ಮಠ ವಿವಾದದ ಬಗ್ಗೆ ಪ್ರತಿಕ್ರಿಯೆ, ದಕ್ಷಿಣೆ ಚೊಲೊ ಕೊಟ್ಟಾನ ಅಂತ ರಾಜಕೀಯ ಟೀಕೆ

ಶಾಸಕ ಯತ್ನಾಳ್ ಅವರು ಧರ್ಮಸ್ಥಳದ ಮಠದ ವಿವಾದ, ರಾಜಕೀಯ ನಾಯಕರು ಮತ್ತು ಸ್ವಾಮೀಜಿಗಳ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. ಸಿಎಂ ಬದಲಾವಣೆ, ಪಕ್ಷಗಳ ಗೊಂದಲಗಳ ಬಗ್ಗೆಯೂ ಮಾತನಾಡಿದ್ದಾರೆ.
Read Full Story
06:08 PM (IST) Jul 23

Karnataka News Live 23rd July:₹1654 ಕೋಟಿ ಎಫ್‌ಡಿಐ ಉಲ್ಲಂಘನೆ - ಮಿಂತ್ರಾ ವಿರುದ್ಧ ಇಡಿ ಕೇಸ್

ಮಿಂತ್ರಾ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಂಬಂಧಿತ ಕಂಪನಿಗಳ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಮೇಲೆ ₹1654 ಕೋಟಿ ದೂರು ದಾಖಲಾಗಿದೆ. ಹೋಲ್‌ಸೇಲ್ ವ್ಯಾಪಾರದ ನೆಪದಲ್ಲಿ ಮಲ್ಟಿ ಬ್ರಾಂಡ್ ಚಿಲ್ಲರೆ ವ್ಯಾಪಾರ ನಡೆಸಿ ಎಫ್‌ಡಿಐ ನಿಯಮ ಉಲ್ಲಂಘನೆ ಆರೋಪ.

Read Full Story
06:07 PM (IST) Jul 23

Karnataka News Live 23rd July:ಪುಟ್ಟಗೌರಿ ಮದುವೆ ಸೀರಿಯಲ್‌ ನೋಡುವ ಆಸೆಗಾಗಿ ರಹಸ್ಯ ಬಿಟ್ಟುಕೊಟ್ಟ ಅಜ್ಜಿ - ಸೂಪರ್ ಸೀಕ್ರೆಟ್ ಎಂದ ನೆಟ್ಟಿಗರು

Puttagowri Maduve Serial Popularity: ಪುಟ್ಟಗೌರಿ ಮದುವೆ ಧಾರಾವಾಹಿ ಮತ್ತೆ ನೋಡಲು ಅಜ್ಜಿಯೊಬ್ಬರು ತಮ್ಮ ಕಿಚನ್ ರೆಸಿಪಿಯನ್ನು ಹಂಚಿಕೊಂಡಿದ್ದಾರೆ. 5 ವರ್ಷದ ಹಿಂದಿನ ಪುಟ್ಟಗೌರಿ ನೋಡುವ ಆಸೆಗಾಗಿ ಅಜ್ಜಿ ಹೇಳಿಕೊಟ್ಟ ಸೀಕ್ರೆಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Read Full Story
05:44 PM (IST) Jul 23

Karnataka News Live 23rd July:Onlineನಲ್ಲಿ ವಸ್ತು ಸೇಲ್​ ಮಾಡ್ತಿದ್ದೀರಾ? ಯಾಮಾರಿದ್ರೆ ಬ್ಯಾಂಕ್ ಖಾತೆ ಗೋವಿಂದ! ಈ ಅನುಭವ ಕೇಳಿ...

OLX ಸೇರಿದಂತೆ ಯಾವುದೇ ಆನ್​ಲೈನ್​ ಪ್ಲ್ಯಾಟ್​ಫಾರ್ಮ್​ನಲ್ಲಿ ವಸ್ತು ಸೇಲ್​ ಮಾಡಲು ಇಟ್ಟರೆ ಎಚ್ಚರ ಎಚ್ಚರ... ನಿಮಗೂ ಇದೇ ಗತಿ ಆಗ್ಬೋದು. ಇವರ ಅನುಭವ ಕೇಳಿ...

Read Full Story
05:39 PM (IST) Jul 23

Karnataka News Live 23rd July:ಜಿಎಸ್‌ಟಿ ನೋಟೀಸ್ ಕೊಟ್ಟಿದ್ದರೂ, ಯಾರಿಂದಲೂ ತೆರಿಗೆ ಕಟ್ಟಿಸಿಕೊಳ್ಳಲ್ಲ - ಸಿಎಂ ಸಿದ್ದರಾಮಯ್ಯ

೪೦ ಲಕ್ಷ ರೂ.ಗಿಂತ ಅಧಿಕ ವ್ಯವಹಾರದ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ವಿಚಾರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಎಂ ಸಿದ್ದರಾಮಯ್ಯನವರು ಸಭೆ ನಡೆಸಿ, ತೆರಿಗೆ ವಸೂಲಿ ಮಾಡುವುದಿಲ್ಲ ಮತ್ತು ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Read Full Story
05:26 PM (IST) Jul 23

Karnataka News Live 23rd July:ಗುಜರಾತ್ ಎಟಿಎಸ್‌ನಿಂದ ಭರ್ಜರಿ ಭೇಟೆ; ಅಲ್-ಖೈದಾ ಸಂಪರ್ಕ ಹೊಂದಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

ಗುಜರಾತ್ ಎಟಿಎಸ್ ಅಲ್-ಖೈದಾ ಜೊತೆ ಸಂಪರ್ಕ ಹೊಂದಿದ್ದ ನಾಲ್ವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಸೇರ್ಪಡೆಗೊಳಿಸುತ್ತಿದ್ದ ಈ ಗುಂಪು ದೊಡ್ಡ ದುಷ್ಕೃತ್ಯಕ್ಕೆ ಸಂಚು ರೂಪಿಸಿತ್ತು.
Read Full Story
05:08 PM (IST) Jul 23

Karnataka News Live 23rd July:102 ಕೇಜಿ ಮೂಟೆ ಹೊತ್ತು 575 ಮೆಟ್ಟಿಲೇರಿ ಅಂಜನಾದ್ರಿ ತಲುಪಿದ 61ರ ಹರೆಯದ ಹನುಮ ಭಕ್ತ

61 ವರ್ಷ ಪ್ರಾಯದ ಹನುಮ ಭಕ್ತರೊಬ್ಬರು ಜೋಳ ತುಂಬಿದ್ದ 102 ಕೇಜಿ ತೂಕದ ಮೂಟೆಯನ್ನು ಹೊತ್ತು ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ. ಬೆನ್ನ ಮೇಲೆಮೂಟೆ ಹೊತ್ತು ಅವರು ಅಂಜನಾದ್ರಿ ಬೆಟ್ಟದ 575 ಮೆಟ್ಟಿಲನ್ನು ಏರಿ ಹೋಗುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Read Full Story
04:53 PM (IST) Jul 23

Karnataka News Live 23rd July:Rajadrohi - 40 ವರ್ಷಗಳ ಬಳಿಕ ಒಂದಾದ ಅನಂತ್​ನಾಗ್​-ಲಕ್ಷ್ಮಿ ಜೋಡಿ! ಕಣ್ತುಂಬಿಸಿಕೊಳ್ಳಲು ಫ್ಯಾನ್ಸ್​ ಕಾತರ

70-80ರ ದಶಕದಲ್ಲಿ ಕಿಚ್ಚು ಹೊತ್ತಿಸಿದ್ದ ಅನಂತ್​ನಾಗ್​-ಲಕ್ಷ್ಮಿ ಜೋಡಿ 40 ವರ್ಷಗಳ ಬಳಿಕ ಜೊತೆಯಾಗಿ ನಟಿಸಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಾವುದೀ ಚಿತ್ರ? ಡಿಟೇಲ್ಸ್​ ಇಲ್ಲಿದೆ...

Read Full Story