ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ ಅವರು ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿನ ರೈಲು ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲು ಸೂಚಿಸಿದ್ದಾರೆ. ಸುಮಾರು ₹70 ಕೋಟಿ ವೆಚ್ಚದ ಈ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
- Home
- News
- State
- Karnataka News Live: ನಾನೇ ಹಲವು ಬಾರಿ ಸಮಸ್ಯೆ ಅನುಭವಿಸಿದ್ದೇನೆ, ಶೀಘ್ರವೇ ಪರಿಹಾರ - ಸಂಸದ CN ಮಂಜುನಾಥ್
Karnataka News Live: ನಾನೇ ಹಲವು ಬಾರಿ ಸಮಸ್ಯೆ ಅನುಭವಿಸಿದ್ದೇನೆ, ಶೀಘ್ರವೇ ಪರಿಹಾರ - ಸಂಸದ CN ಮಂಜುನಾಥ್

ಬೆಂಗಳೂರು: ಮಳೆ ಅಭಾವದಿಂದಾಗಿ ರಾಜ್ಯದಲ್ಲಿ ಪೂರ್ವ ಮುಂಗಾರಿನ ಬಿತ್ತನೆ ಪ್ರಮಾಣದಲ್ಲಿ ಭಾರೀ ಕುಂಠಿತವಾಗಿದೆ. ಒಟ್ಟಾರೆ 2.78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಇಲಾಖೆ ಬಿತ್ತನೆ ಗುರಿ ಹೊಂದಿದ್ದು, ಆದರೆ 1.62 ಲಕ್ಷ ಹೆಕ್ಟೇರ್ನಲ್ಲಿ(ಶೇ.58) ಮಾತ್ರ ಬಿತ್ತನೆಯಾಗಿದೆ.
51 ಸಾವಿರ ಹೆಕ್ಟೇರ್ನಲ್ಲಿ ಮೆಕ್ಕೆಜೋಳ ಬಿತ್ತುವ ಗುರಿ ಇತ್ತಾದರೂ 38 ಸಾವಿರ ಹೆಕ್ಟೇರ್ನಲ್ಲಿ (ಶೇ.74) ಮಾತ್ರ ಬಿತ್ತನೆಯಾಗಿದೆ. ಒಟ್ಟಾರೆ 1.51 ಲಕ್ಷ ಹೆಕ್ಟೇರ್ನಲ್ಲಿ ಆಹಾರ ಧಾನ್ಯ ಬಿತ್ತನೆ ಅಂದಾಜಿದ್ದು. ಇದಕ್ಕೆ ಬದಲಾಗಿ 77 ಸಾವಿರ ಹೆಕ್ಟೇರ್(ಶೇ.51)ನಲ್ಲಿ ಬಿತ್ತನೆಯಾಗಿದೆ. ಸೂರ್ಯಕಾಂತಿ, ಶೇಂಗಾ ಸೇರಿ 26 ಸಾವಿರ ಹೆಕ್ಟೇರ್ನಲ್ಲಿ ಎಣ್ಣೆಕಾಳುಗಳ ಬೆಳೆ ಬೆಳೆಯುವ ಅಂದಾಜಿತ್ತು. ಆದರೆ, 16 ಸಾವಿರ ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿ ಶೇ.42 ರಷ್ಟು ಸಾಧನೆಯಾಗಿದೆ.
ಪೂರ್ವ ಮುಂಗಾರಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 16 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದ್ದು, 28 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗಿ ಶೇ.175 ರಷ್ಟು ಸಾಧನೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 6 ಸಾವಿರ ಹೆಕ್ಟೇರ್(ಶೇ.71), ಚಾಮರಾಜನಗರ 28 ಸಾವಿರ ಹೆಕ್ಟೇರ್(ಶೇ.55), ಮೈಸೂರಿನ 1.63 ಲಕ್ಷ ಹೆಕ್ಟೇರ್ ಗುರಿ ಪೈಕಿ ಶೇ.54 ರಷ್ಟು ಬಿತ್ತನೆಯಾಗಿದೆ. ಆದರೆ ಇನ್ನುಳಿದ ಜಿಲ್ಲೆಗಳಲ್ಲಿ ಬಿತ್ತನೆ ಬಹಳಷ್ಟು ಕಡಿಮೆಯಾಗಿದೆ.
Karnataka News Live 11 June 2026ನಾನೇ ಹಲವು ಬಾರಿ ಸಮಸ್ಯೆ ಅನುಭವಿಸಿದ್ದೇನೆ, ಶೀಘ್ರವೇ ಪರಿಹಾರ - ಸಂಸದ CN ಮಂಜುನಾಥ್
Karnataka News Live 11 June 2026Belagavi - ಬೆಳಗಾವಿ ನಮ್ಮದೆನ್ನಲು ವಿಳಂಬವೇಕೆ? ಡಿಸಿ ಹೇಳಿದರೂ ಪತ್ರ ಬರೆಯದ ಪಾಲಿಕೆ!
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವು ಅಂಗೀಕಾರದ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ನೀಡಿದ್ದ ಸೂಚನೆಯನ್ನು ಮಹಾನಗರ ಪಾಲಿಕೆ ಪಾಲಿಸಿಲ್ಲ. ಸಚಿವ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ ನಡೆದ ಸಭೆಯ ನಿರ್ಧಾರಕ್ಕೂ ಬೆಲೆ ಸಿಕ್ಕಿಲ್ಲ. ಈ ಆಡಳಿತಾತ್ಮಕ ನಿರ್ಲಕ್ಷ್ಯವು ಕನ್ನಡಪರ ಸಂಘಟನೆಗಳ ಅಸಮಾಧಾನ.
Karnataka News Live 11 June 2026ನಿಧಿ ಆಸೆಗಾಗಿ ಮೂಕಬಸವೇಶ್ವರ, ಈಶ್ವರ ಮೂರ್ತಿಯುಳ್ಳ ದೇವಸ್ಥಾನ ಕೆಡವಿದ ನಾಲ್ವರ ಬಂಧನ
ನಿಧಿ ಆಸೆಗಾಗಿ ಪುರಾತನ ಮೂಕಬಸವೇಶ್ವರ ಹಾಗೂ ಈಶ್ವರ ದೇವಸ್ಥಾನವನ್ನು ಕೆಡವಿ, ಜೆಸಿಬಿಯಿಂದ ನೆಲ ಅಗೆದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪದ ಮೇಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Karnataka News Live 11 June 2026ಶಾಲಾ ಆರಂಭ 15 ನಿಮಿಷ ಮುಂದೂಡಿ, ಮುಕ್ತಾಯದ ಸಮಯದಲ್ಲಿ ಬದಲಾವಣೆ ಬೇಡ; ಶಿಕ್ಷಕರ ಮನವಿ
ಶಾಲಾ ಆರಂಭದ ಸಮಯವನ್ನು 15 ನಿಮಿಷಗಳ ಕಾಲ ಮುಂದೂಡಿ, ಆದ್ರೆ ಶಾಲಾ ಮುಕ್ತಾಯದ ಸಮಯದಲ್ಲಿ ಯಾವುದೇ ಬದಲಾವಣೆ ಮಾಡುವುದು ಬೇಡ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
Karnataka News Live 11 June 2026Bengaluru crime - ಕೆಲಸಕ್ಕಿದ್ದ ಮನೆಯಲ್ಲಿ ₹25 ಲಕ್ಷ ಹಣದೋಚಿದ್ದ ನೇಪಾಳ ದಂಪತಿ ಬಂಧನ; ಕಳ್ಳತನ ಬಳಿಕ ಏನು ಮಾಡಿದ್ರು ನೋಡಿ!
Karnataka News Live 11 June 202618 ರಸ್ತೆಗೆ ದುರಸ್ತಿ ಅಭಿವೃದ್ಧಿಗೆ ₹119 ಕೋಟಿ ಬಿಡುಗಡೆ - ಕೋಟಾ ಶ್ರೀನಿವಾಸ್ ಪೂಜಾರಿ
Karnataka News Live 11 June 2026ಕಸ ಸಂಸ್ಕರಣೆಗೆ ದೆಹಲಿ ಕಂಪನಿಗೆ 35 ವರ್ಷ ಗುತ್ತಿಗೆ ನೀಡಿ ₹10 ಸಾವಿರ ಕೋಟಿ ಕಿಕ್ ಬ್ಯಾಕ್? ಆರ್ ಅಶೋಕ್ ಗಂಭೀರ ಆರೋಪ
ಬೆಂಗಳೂರಿನ ಕಸ ಸಂಸ್ಕರಣೆ ಗುತ್ತಿಗೆಯಲ್ಲಿ ಕಾಂಗ್ರೆಸ್ ಸರ್ಕಾರ 39 ಸಾವಿರ ಕೋಟಿ ರೂ. ಹಗರಣ ನಡೆಸಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ದೆಹಲಿ ಮೂಲದ ರಾಮ್ಕಿ ಕಂಪನಿಗೆ 35 ವರ್ಷ ಗುತ್ತಿಗೆ ನೀಡಿ 10 ಸಾವಿರ ಕೋಟಿ ರೂ. ಕಿಕ್ಬ್ಯಾಕ್, ಈ ಸಂಬಂಧ ರಾಜ್ಯಪಾಲರು, ಲೋಕಾಯುಕ್ತಕ್ಕೆ ದೂರು.