08:37 PM (IST) Jun 11

Karnataka News Live 11 June 2026ಮೊದಲ ನೀತಿ ಆಯೋಗದ ಸಭೆಯಲ್ಲೇ ಮೋದಿ ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್; ಸಿದ್ದುಗಿಂತ ವಿಭಿನ್ನ ಹೆಜ್ಜೆ!

ಮುಖ್ಯಮಂತ್ರಿಯಾದ ನಂತರ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಮೋದಿ ನೇತೃತ್ವದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಿಂತ ಭಿನ್ನವಾದ ಈ ನಡೆಯ ಮೂಲಕ, ಅವರು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ.
Read Full Story
07:53 PM (IST) Jun 11

Karnataka News Live 11 June 2026ಸೊಸೆ ಮಧು ಗೌಡ ಪ್ರಗ್ನೆಂಟ್;‌ ಮಗನ ಅಫೇರ್; ಕನ್ನಡ ಯುಟ್ಯೂಬರ್‌ ನಿಖಿಲ್‌ ರವೀಂದ್ರಗೆ ಗೂಸ ಕೊಟ್ಟ ತಾಯಿ!‌ ಸತ್ಯ ಬೇರೆ ಇದೆ

Youtuber Madhu Gowda: ಕನ್ನಡದ ಯುಟ್ಯೂಬರ್‌ ನಿಖಿಲ್‌, ನಿಶಾ, ಮಧು ಈ ಬಾರಿ ಜಗಳ ಆಡಿಕೊಂಡಿರೋ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೌದು, ಈಗ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಇದರ ಹಿಂದಿನ ಸತ್ಯ ಬೇರೆಯೇ ಇದೆ.

Read Full Story
07:38 PM (IST) Jun 11

Karnataka News Live 11 June 2026ಮುಂಬೈ-ಹೈದರಾಬಾದ್ ಬುಲೆಟ್ ರೈಲು ಯೋಜನೆ - ಡಿಪಿಆರ್ ವರದಿ ಸಿದ್ಧ, ಕಲಬುರಗಿಗೆ ಸಿಗಲಿದೆ ಹೈ-ಸ್ಪೀಡ್ ನಿಲ್ದಾಣ!

ಮುಂಬೈ-ಹೈದರಾಬಾದ್ ಬುಲೆಟ್ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಪೂರ್ಣಗೊಂಡಿದೆ. ಈ ಹೈ-ಸ್ಪೀಡ್ ಕಾರಿಡಾರ್ ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣವನ್ನು ಸಂಪರ್ಕಿಸಲಿದ್ದು, ಕಲಬುರಗಿಯಲ್ಲಿ ಪ್ರಮುಖ ನಿಲ್ದಾಣದೊಂದಿಗೆ ಪ್ರಯಾಣದ ಸಮಯವನ್ನು ಕೇವಲ 3 ಗಂಟೆಗಳಿಗೆ ಇಳಿಸಲಿದೆ.
Read Full Story
07:10 PM (IST) Jun 11

Karnataka News Live 11 June 2026ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸೇವೆ ಆರಂಭಿಸಲು ಒತ್ತಾಯ, 16 ಗಂಟೆಗಳ ರಸ್ತೆ ಪ್ರಯಾಣಕ್ಕೆ ಮುಕ್ತಿ ಸಿಗುವುದೇ?

ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸೇವೆ ವಿಸ್ತರಿಸಲು ಸ್ಥಳೀಯ ಸಂಘಟನೆಗಳು ಸ್ಟಾರ್ ಏರ್ ಸಂಸ್ಥೆಯೊಂದಿಗೆ ಚರ್ಚಿಸಿವೆ. ಈ ಸೇವೆ ಆರಂಭವಾದರೆ 16 ಗಂಟೆಗಳ ಪ್ರಯಾಣದ ಅವಧಿ ತಪ್ಪಲಿದ್ದು, ಪ್ರವಾಸೋದ್ಯಮ ಮತ್ತು ವಾಣಿಜ್ಯಕ್ಕೆ ಅನುಕೂಲವಾಗಲಿದೆ. ಜಾಗತಿಕ ಇಂಧನ ಬೆಲೆ ಏರಿಕೆಯ ಕಾರಣ ಸದ್ಯಕ್ಕೆ ವಿಳಂಬವಾದರೂ, ಸಂಸ್ಥೆಯು ಸಕಾರಾತ್ಮಕ ಭರವಸೆ ನೀಡಿದೆ.
Read Full Story
06:50 PM (IST) Jun 11

Karnataka News Live 11 June 2026Shocking Secret - ಚಂದನ್ ಶೆಟ್ಟಿ ಶಾಕಿಂಗ್ ಸೀಕ್ರೆಟ್ ಬಹಿರಂಗ.. ಈ ಆಲ್‌ರೌಂಡರ್ ಮುಂಗೈನಲ್ಲಿ ಏನಿದೆ ಗೊತ್ತಾ?!

ಅವರ ಎರಡು ಕೈಗಳ ಮೇಲೆ ಇಬ್ಬರು ಜಾಗತಿಕ ಮಟ್ಟದ ದಿಗ್ಗಜರ ಟ್ಯಾಟೂಗಳಿವೆ. ಈ ಟ್ಯಾಟೂಗಳು ಕೇವಲ ಸ್ಟೈಲ್‌ಗಾಗಿ ಹಾಕಿಸಿಕೊಂಡದ್ದಲ್ಲ, ಅದರ ಹಿಂದೆ ಒಂದು ಅದ್ಭುತವಾದ ಕಾರಣ ಇದೆ. ಇಷ್ಟೂ ದಿನ ಕಾಪಾಡಿಕೊಂಡಿದ್ದ ಆ ಸೀಕ್ರೆಟ್ ಏನು ನೋಡಿ..!

Read Full Story
06:37 PM (IST) Jun 11

Karnataka News Live 11 June 20263.5 ಲಕ್ಷ ರೂಪಾಯಿ Fridge ತಗೊಂಡ ಮಂಗಳೂರಿನ 'ಮಧ್ಯಮ ಕುಟುಂಬ'; ಅದ್ರ ವಿಶೇಷತೆ ನೋಡಿದ್ರೆ ದಂಗಾಗ್ತೀರಾ!

Madhyama Kutumba Youtube Channel: ಮಂಗಳೂರು ಮೂಲದ ಮಧ್ಯಮ ಕುಟುಂಬ ಎಂಬ ಯುಟ್ಯೂಬ್‌ ಚಾನೆಲ್‌ನವರು ಹೊಸ ಮನೆಗೆ ಕಾಲಿಟ್ಟು, ಕೆಲ ತಿಂಗಳುಗಳು ಕಳೆದಿವೆ. ಈಗ ಅವರು ಹೊಸ ಫ್ರಿಡ್ಜ್‌ ತಗೊಂಡಿದ್ದು, ಇದರ ಬೆಲೆ ಹಾಗೂ ಫೀಚರ್‌ ನೋಡಿ ವೀಕ್ಷಕರು ಕಂಗಾಲಾಗಿದ್ದಾರೆ.

Read Full Story
06:23 PM (IST) Jun 11

Karnataka News Live 11 June 2026ಗದಗ - ಈ ಊರಿನಲ್ಲಿ ಯಾರೇ ಮೃತಪಟ್ಟರು ಮನೆ ಮುಂದೆ ಹಾಜರಾಗೋ ನಾಯಿ, ಸ್ಮಶಾನದವರೆಗೂ ಬಂದು ವಿಧಿವಿಧಾನದಲ್ಲಿ ಭಾಗಿ!

ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಬೀದಿ ನಾಯಿಯೊಂದು ವಿಶಿಷ್ಟ ವರ್ತನೆಯಿಂದ ಗಮನ ಸೆಳೆದಿದೆ. ಗ್ರಾಮದಲ್ಲಿ ಯಾರೇ ಮೃತಪಟ್ಟರೂ, ಈ ಶ್ವಾನವು ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ವಿಧಿವಿಧಾನಗಳು ಮುಗಿಯುವವರೆಗೂ ಸ್ಮಶಾನದಲ್ಲಿಯೇ ಇರುತ್ತದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ನಡವಳಿಕೆಯನ್ನು ಪ್ರದರ್ಶಿಸುತ್ತಿರುವ ಈ ಮೂಕಪ್ರಾಣಿಯ ಸಂಸ್ಕಾರ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
Read Full Story
05:55 PM (IST) Jun 11

Karnataka News Live 11 June 2026Photos - ಮನೆಯಲ್ಲಿ‌ ಪವರ್‌ಫುಲ್ ರುದ್ರ ಪಾರಾಯಣ, ಮೃಜ್ಯುಂಜಯ ಯಾಗ ಮಾಡಿದ ಜೊತೆ ಜೊತೆಯಲಿ ನಟ ಅನಿರುದ್ಧ ಜತ್ಕರ್

Jothe Jotheyali Serial Actor Aniruddha: ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ್‌ ಜತ್ಕರ್‌ ಮನೆಯಲ್ಲಿ ವಿಶೇಷ ಪೂಜೆ ನಡೆದಿದೆ. ಈ ಸುಂದರ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story
05:50 PM (IST) Jun 11

Karnataka News Live 11 June 2026ಧರ್ಮಸ್ಥಳ - 26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ - ಸತೀಶ್ ಆಗಿ ಹೋದವನು ಸಲೀಂ ಆಗಿ ಬಂದ ಕಥೆ!

ಧರ್ಮಸ್ಥಳದಲ್ಲಿ 26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಸತೀಶ್, ಸಲೀಂ ಅಬ್ದುಲ್ ಅನ್ಸಾರಿ ಹೆಸರಿನಲ್ಲಿ ಮಹಾರಾಷ್ಟ್ರದಲ್ಲಿ ಬದುಕು ಕಟ್ಟಿಕೊಂಡ ಬಳಿಕ ಮತ್ತೆ ಹುಟ್ಟೂರಿಗೆ ಮರಳಿದ್ದಾರೆ. ತಾಯಿ-ಮಗನ ಭಾವುಕ ಮಿಲನದ ಸಂಪೂರ್ಣ ಕಥೆ ಇಲ್ಲಿದೆ.

Read Full Story
05:42 PM (IST) Jun 11

Karnataka News Live 11 June 2026ಕಾಡುಗೋಡಿ ಮಗು ವೆನ್ನೆಲಾ ಹತ್ಯೆ ಪ್ರಕರಣ - ತಾಯಿ ಪ್ರಿಯಾಂಕ ಕೊನೆಗೂ ಸಕಲೇಶಪುರದಲ್ಲಿ ಬಂಧನ

ಬೆಂಗಳೂರಿನಲ್ಲಿ ಪುಟ್ಟ ಮಗು ವೆನ್ನೆಲಾಳನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ತಾಯಿ ಪ್ರಿಯಾಂಕಳನ್ನು, ನಾಲ್ಕು ದಿನಗಳ ಸತತ ಕಾರ್ಯಾಚರಣೆಯ ನಂತರ ಕಾಡುಗೋಡಿ ಪೊಲೀಸರು ಹಾಸನದ ಸಕಲೇಶಪುರದಲ್ಲಿ ಬಂಧಿಸಿದ್ದಾರೆ. ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಪೊಲೀಸರ ವಿರುದ್ಧ ಮಕ್ಕಳ ರಕ್ಷಣಾ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದೆ.
Read Full Story
05:28 PM (IST) Jun 11

Karnataka News Live 11 June 2026ಅಭಿಮಾನಿಗಳು ಶ್ರುತಿ ಎಂದು ಕರೆಯುವ ನಟಿಯ ನಿಜವಾದ ಹೆಸರು ಬೇರೆ - ಬದಲಿಸಿದ್ದು ಕರ್ನಾಟಕದ ಕುಳ್ಳ!

ಕನ್ನಡದ ಜನಪ್ರಿಯ ನಟಿ ಶ್ರುತಿ ಅವರ ನಿಜವಾದ ಹೆಸರು ಗಿರಿಜಾ ಎಂಬುದು ನಿಮಗೆ ಗೊತ್ತಿತ್ತಾ? ಗಿರಿಜಾ ಹೇಗೆ ಶ್ರುತಿ ಆದರು, ಅವರ 175ನೇ ಸಿನಿಮಾ 'ಮದರ್'ವರೆಗೆ ನಡೆದ ಸಿನಿ ಪಯಣದ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
05:09 PM (IST) Jun 11

Karnataka News Live 11 June 2026ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್? ಷಡ್ಯಂತ್ರಕ್ಕೆ ಕೇರಳದಿಂದ 200 ಕೋಟಿ ಬಜೆಟ್‌!

ಧರ್ಮಸ್ಥಳದ 'ಬುರುಡೆ ಪ್ರಕರಣ'ದ ಪ್ರಮುಖ ಆರೋಪಿ ಚಿನ್ನಯ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಕ್ಷೇತ್ರದ ವಿರುದ್ಧ 200 ಕೋಟಿ ರೂಪಾಯಿಗಳ ಬೃಹತ್ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾನೆ. ಈ ಸಂಚಿನಲ್ಲಿ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಪ್ರಭಾವಿಗಳ ಹೆಸರುಗಳನ್ನು ಉಲ್ಲೇಖಿಸಿದ್ದು, ಎಸ್‌ಐಟಿ ತನಿಖೆಯ ವಿಳಂಬವನ್ನು ಪ್ರಶ್ನಿಸಿದ್ದಾನೆ.
Read Full Story
04:40 PM (IST) Jun 11

Karnataka News Live 11 June 2026ದರ್ಶನ್​ ಬಂಧನಕ್ಕೆ 2 ವರ್ಷ - ಸೆಂಟ್ರಲ್​ ಜೈಲಿನ ಬಿಗ್​ ಬ್ರೇಕಿಂಗ್​! ಪವಿತ್ರಾ ಗೌಡ ಆತ್ಮಚರಿತ್ರೆ ಆರಂಭ-ಮುಂದೇನು

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಆರೋಪಿ-1 ಪವಿತ್ರಾ ಗೌಡ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಚರಿತ್ರೆ ಬರೆಯುತ್ತಿದ್ದಾರೆ ಎನ್ನಲಾಗಿದೆ. ಈ ಆತ್ಮಕಥೆಯಲ್ಲಿ ಅವರು ದರ್ಶನ್ ಜೊತೆಗಿನ ಸಂಬಂಧ ಮತ್ತು ಪ್ರಕರಣದ ಹಿಂದಿನ ಸತ್ಯವನ್ನು ಬಹಿರಂಗಪಡಿಸುತ್ತಾರೆಯೇ ಎಂಬ ಕುತೂಹಲ ಕಾಡುತ್ತಿದೆ.

Read Full Story
04:36 PM (IST) Jun 11

Karnataka News Live 11 June 2026ಅಬ್ಬಬ್ಬಾ.. ಸಿನಿಮಾ ನನ್ನ ಮೊದಲ ಪ್ರೀತಿ ಎನ್ನುವ ಕಿಚ್ಚ ಸುದೀಪ್ ಒಪ್ಪಿಕೊಂಡಿರುವ ಸಿನಿಮಾಗಳ ಸಂಖ್ಯೆ ಎಷ್ಟು?

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಜೂನ್ 26ರಿಂದ ‘ಬಿಲ್ಲಾ ರಂಗ ಬಾಷಾ’ ಶೂಟಿಂಗ್ ಆರಂಭವಾಗಲಿದ್ದು, ಒಟ್ಟಿಗೆ 4 ಹೊಸ ಸಿನಿಮಾಗಳಿಗೆ ಒಪ್ಪಿಗೆ ನೀಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

Read Full Story
03:16 PM (IST) Jun 11

Karnataka News Live 11 June 2026ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌, ನಮ್ಮ ಮೆಟ್ರೋಗೆ ವಿಸ್ತರಿಸಲು BMCA ಒತ್ತಾಯ

ರಾಜ್ಯ ಸರ್ಕಾರದ ಉಚಿತ ಬಸ್ ಪಾಸ್ ಯೋಜನೆಯನ್ನು ಬೆಂಗಳೂರಿನ ನಮ್ಮ ಮೆಟ್ರೋಗೂ ವಿಸ್ತರಿಸಬೇಕೆಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ (BMCA) ಒತ್ತಾಯಿಸಿದೆ. ಈ ಸೌಲಭ್ಯವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡುವುದಲ್ಲದೆ, ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಪ್ರೋತ್ಸಾಹಿಸಿ, ನಗರದ ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ಸಂಘವು ಪ್ರತಿಪಾದಿಸಿದೆ.
Read Full Story
02:55 PM (IST) Jun 11

Karnataka News Live 11 June 2026ಪವನ್ ಕಲ್ಯಾಣ್ ಅವರ ಮೊದಲ ಹೆಸರು ಏನಿತ್ತು, ಬದಲಾಗಿದ್ದು ಹೇಗೆ? ಇದರ ಹಿಂದಿದೆ ಭಾರೀ ಸೀಕ್ರೆಟ್!

ಕಲ್ಯಾಣ್ ಅವರ ಮೂಲ ಹೆಸರಿನ ನಾಮಕರಣ ನಡೆದಿದ್ದು ಪವಿತ್ರ ತಿರುಮಲದ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ. ಅಂದು ಅವರಿಗೆ ಇಟ್ಟ ಹೆಸರು 'ಶ್ರೀ ಕಲ್ಯಾಣ್ ಕುಮಾರ್'. ಎಷ್ಟೋ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ, ಅವರ ಮನೆಯವರು ಮತ್ತು ಆಪ್ತರು ಇಂದಿಗೂ ಅವರನ್ನು ಪ್ರೀತಿಯಿಂದ 'ಕಲ್ಯಾಣ್' ಎಂದೇ ಕರೆಯುತ್ತಾರೆ.

Read Full Story
01:29 PM (IST) Jun 11

Karnataka News Live 11 June 2026ಶಿಕ್ಷಣ ಏನೇ ಇರಲಿ, ನಮ್ಮ ಮೆಟ್ರೋದಲ್ಲಿ 500ಕ್ಕೂ ಅಧಿಕ ಉದ್ಯೋಗ - 2.06 ಲಕ್ಷ ಮಾಸಿಕ ವೇತನ

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 2026 ರಲ್ಲಿ 500ಕ್ಕೂ ಹೆಚ್ಚು ಹುದ್ದೆಗಳಿಗೆ ಬೃಹತ್ ನೇಮಕಾತಿ ಪ್ರಕಟಿಸಿದೆ. ನಿರ್ವಹಣಾಕಾರರು, ರೈಲು ನಿರ್ವಾಹಕರು, ಮತ್ತು ಎಂಜಿನಿಯರ್‌ಗಳಂತಹ ಹುದ್ದೆಗಳಿಗೆ ಐಟಿಐ, ಡಿಪ್ಲೊಮಾ, ಮತ್ತು ಪದವಿ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು, ಇದರಲ್ಲಿ 2.06 ಲಕ್ಷದವರೆಗೆ ವೇತನವಿದೆ.
Read Full Story
12:53 PM (IST) Jun 11

Karnataka News Live 11 June 2026ಗೃಹಲಕ್ಷ್ಮಿ ಹಣ ಸ್ಥಗಿತ - 4.30 ಲಕ್ಷ ಫಲಾನುಭವಿಗಳು ಪಟ್ಟಿಯಿಂದ ಔಟ್! IT, GST ಪೈಲ್ ಮಾಡಿದ ಕುಟುಂಬಕ್ಕೆ ಶಾಕ್!

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, 4.30 ಲಕ್ಷಕ್ಕೂ ಹೆಚ್ಚು ಅಪಾತ್ರ ಮಹಿಳೆಯರನ್ನು ಕೈಬಿಡಲಾಗಿದೆ. ಮೃತಪಟ್ಟವರು ಮತ್ತು ಐಟಿ/ಜಿಎಸ್‌ಟಿ ಪಾವತಿದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಇನ್ಮುಂದೆ ಇವರ ಖಾತೆಗೆ ಮಾಸಿಕ 2,000 ರೂ. ಜಮೆಯಾಗುವುದಿಲ್ಲ.
Read Full Story
12:29 PM (IST) Jun 11

Karnataka News Live 11 June 2026ಬೆಂಗಳೂರಿಗೆ ಬಂತು BMTC 'ಚಕ್ರ' - ಲಕ್ಷಾಂತರ ಮಂದಿ ವರ್ಷಗಳ ಕನಸು ನನಸಾಯ್ತು- ರೂಟ್​ ಹೀಗಿದೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯು ಜಿಗಣಿ, ಆನೇಕಲ್ ಮತ್ತು ಚಂದಾಪುರ ಪ್ರದೇಶದ ನಿವಾಸಿಗಳ ಅನುಕೂಲಕ್ಕಾಗಿ 'ಚಕ್ರ-3' ಎಂಬ ಹೊಸ ವೃತ್ತಾಕಾರದ ಬಸ್ ಸೇವೆಯನ್ನು ಆರಂಭಿಸುತ್ತಿದೆ. ಇದೇ 15ರಿಂದ ಆರಂಭವಾಗಲಿರುವ ಈ ಸೇವೆಯು, 4 ಬಸ್‌ಗಳೊಂದಿಗೆ ದಿನಕ್ಕೆ 28 ಟ್ರಿಪ್‌ಗಳನ್ನು ನಡೆಸಲಿದ್ದು, ಈ ಭಾಗದ ಲಕ್ಷಾಂತರ ಜನರ ಪ್ರಯಾಣದ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆಯಿದೆ.
Read Full Story
12:27 PM (IST) Jun 11

Karnataka News Live 11 June 2026ಮಾಳವ್ವ ಹೋಟೆಲ್‌ನಲ್ಲಿ ಊಟಕ್ಕಿಲ್ಲ ಲೆಕ್ಕ; ಇವರೇ ಇಲ್ಲಿ ಜನರಿಗೆ ಅನ್ನಪೂರ್ಣೇಶ್ವರಿ

Viral Video: ಸುಮಾರು 40 ವರ್ಷಗಳಿಂದ ಮಾಳವ್ವ ಎಂಬುವವರು ಹೋಟೆಲ್ ನಡೆಸುತ್ತಿದ್ದಾರೆ. ರುಚಿಕರವಾದ ತಿಂಡಿಗಳಿಗೆ ಮಾತ್ರವಲ್ಲದೆ, ಹಸಿದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ ನೀಡಿ, ಜನರ ಪ್ರೀತಿಗೆ ಪಾತ್ರರಾಗಿ 'ಅನ್ನಪೂರ್ಣೇಶ್ವರಿ' ಎನಿಸಿಕೊಂಡಿದ್ದಾರೆ.

Read Full Story