MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ದರ್ಶನ್​ ಬಂಧನಕ್ಕೆ 2 ವರ್ಷ: ಸೆಂಟ್ರಲ್​ ಜೈಲಿನ ಬಿಗ್​ ಬ್ರೇಕಿಂಗ್​! ಪವಿತ್ರಾ ಗೌಡ ಆತ್ಮಚರಿತ್ರೆ ಆರಂಭ-ಮುಂದೇನು

ದರ್ಶನ್​ ಬಂಧನಕ್ಕೆ 2 ವರ್ಷ: ಸೆಂಟ್ರಲ್​ ಜೈಲಿನ ಬಿಗ್​ ಬ್ರೇಕಿಂಗ್​! ಪವಿತ್ರಾ ಗೌಡ ಆತ್ಮಚರಿತ್ರೆ ಆರಂಭ-ಮುಂದೇನು

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಆರೋಪಿ-1 ಪವಿತ್ರಾ ಗೌಡ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಚರಿತ್ರೆ ಬರೆಯುತ್ತಿದ್ದಾರೆ ಎನ್ನಲಾಗಿದೆ. ಈ ಆತ್ಮಕಥೆಯಲ್ಲಿ ಅವರು ದರ್ಶನ್ ಜೊತೆಗಿನ ಸಂಬಂಧ ಮತ್ತು ಪ್ರಕರಣದ ಹಿಂದಿನ ಸತ್ಯವನ್ನು ಬಹಿರಂಗಪಡಿಸುತ್ತಾರೆಯೇ ಎಂಬ ಕುತೂಹಲ ಕಾಡುತ್ತಿದೆ.

2 Min read
Author : Suchethana D
Published : Jun 11 2026, 04:40 PM IST
Share this Photo Gallery
  • FB
  • TW
  • Linkdin
  • Whatsapp
16
ಬಂಧನಕ್ಕೆ ಎರಡು ವರ್ಷ
Image Credit : Social Media

ಬಂಧನಕ್ಕೆ ಎರಡು ವರ್ಷ

ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್​ ಮತ್ತು ಪವಿತ್ರಾ ಗೌಡ ಸೇರಿದಂತೆ ಕೆಲವರು ಬಂಧಿಯಾಗಿದ್ದಾರೆ. ಇವರಿಬ್ಬರೂ ಬಂಧಿಯಾಗಿ ಇಂದು ಅರ್ಥಾತ್​ ಜೂನ್‌ 11ಕ್ಕೆ ಸರಿಯಾಗಿ ಎರಡು ವರ್ಷ ಕಳೆದಿದೆ. ಈ ಕೇಸ್​ನಲ್ಲಿ ಐವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ದರ್ಶನ್​ ಅವರಿಗೆ ಇನ್ನೊಂದು ವರ್ಷ ಜಾಮೀನು ಸಿಗದ ರೀತಿಯಲ್ಲಿ ಸುಪ್ರೀಂಕೋರ್ಟ್​ ಆದೇಶಿಸಿದ್ದು, ಅಷ್ಟರಲ್ಲಿಯೇ ಕೇಸಿನ ತೀರ್ಪು ಹೊರಬೀಳಬೇಕಿದೆ. ತಮ್ಮ ನೆಚ್ಚಿನ ನಾಯಕ ಯಾವಾಗ ಹೊರಕ್ಕೆ ಬರ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಜಾಮೀನು ನಕಾರ
Image Credit : Asianet News

ಜಾಮೀನು ನಕಾರ

ಸುಪ್ರೀಂಕೋರ್ಟ್​ ಜಾಮೀನು ನಿರಾಕರಿಸಿದ ಬೆನ್ನಲ್ಲೇ ದರ್ಶನ್​ ಅವರು ಜೈಲಿನಲ್ಲಿ ಪುಸ್ತಕಗಳನ್ನು ಓದುತ್ತಿರುವುದಾಗಿ ವರದಿಯಾಗಿದೆ. ಆದರೆ ಇದರ ನಡುವೆಯೇ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್​ ಜೈಲಿನ ಇನ್ನೊಂದು ದೊಡ್ಡ ಬ್ರೇಕಿಂಗ್​ ಸುದ್ದಿ ಬರುತ್ತಿದೆ. ಅದೇನೆಂದರೆ, ಪವಿತ್ರಾ ಗೌಡ (Pavitra Gowda) ಅವರು ಆತ್ಮಚರಿತ್ರೆಯನ್ನು ಬರೆಯುತ್ತಿದ್ದಾರಂತೆ!

Related Articles

Related image1
ಕೊಪ್ಪಳದ ಸೊಸೆ ಮೈಮೇಲೆ ಬಂದ ಮಾವನ ಆತ್ಮ! ಬೀಡಿ ಸೇಯುತ್ತಾ ದಂಗು ಬಡಿಸಿದ ಮಹಿಳೆ- ವಿಡಿಯೋ ವೈರಲ್
Related image2
ಅಶ್ಲೀಲ ಕಮೆಂಟಿಗರ ನಿದ್ದೆಗೆಡಿಸಿದ ವಿಜಯಲಕ್ಷ್ಮಿ ದರ್ಶನ್​: ಕಮೆಂಟ್​ ಹಾಕಿದವರಲ್ಲಿ ಶುರುವಾಯ್ತು ನಡುಕ
36
ಪವಿತ್ರಾ ಗೌಡ ಆತ್ಮಚರಿತ್ರೆ?
Image Credit : Asianet News

ಪವಿತ್ರಾ ಗೌಡ ಆತ್ಮಚರಿತ್ರೆ?

ಜೈಲಾಧಿಕಾರಿಗಳಿಂದ ಪ್ರತಿದಿನ ಬರೆಯಲು ಪೇಪರ್​ ಪಡೆದುಕೊಂಡು ಆತ್ಮಚರಿತ್ರೆ ಬರೆಯಲು ಶುರು ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ವಿಶ್ವ ಯೋಗ ದಿನಾಚರಣೆಯ ಅಭ್ಯಾಸಕ್ಕೂ ಬಾರದೆ, ಕಳೆದ ಒಂದು ತಿಂಗಳಿನಿಂದ ಪವಿತ್ರಾ ಗೌಡ ಕೇವಲ ಆತ್ಮಚರಿತ್ರೆ ಬರೆಯುವುದರಲ್ಲೇ ಮಗ್ನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಆರೋಪಿ ನಂಬರ್​ 1 ಆಗಿದ್ದಾರೆ. ಇವರ ಮಾತಿನ ಮೇರೆಗೇ ಕೊಲೆ ನಡೆದಿದೆ ಎನ್ನುವ ಕಾರಣದಿಂದಾಗಿ ಇವರನ್ನು ಎ-1 ಮಾಡಲಾಗಿದೆ. ಸದ್ಯ ಅವರಿಗೂ ಜಾಮೀನು ಸಿಗುವುದಿಲ್ಲ. ಆದ್ದರಿಂದ ಇಂಥದ್ದೊಂದು ಮಹತ್ವದ ನಿರ್ಧಾರ ಅವರು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

46
ಸತ್ಯ ಬರೆಯುವ ಧೈರ್ಯ ಇದ್ಯಾ?
Image Credit : our own

ಸತ್ಯ ಬರೆಯುವ ಧೈರ್ಯ ಇದ್ಯಾ?

ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಆತ್ಮಚರಿತ್ರೆ ಎಂದ್ರೆ ಅದರಲ್ಲಿ ಯಾವುದೇ ತಪ್ಪು, ಸುಳ್ಳು ಇರಬಾರದು.ಎಲ್ಲಾ ವಿಷಯಗಳನ್ನು ನೇರಾನೇರ ಬರೆಯಲೇಬೇಕು. ಹೀಗೆ ಬರೆದದ್ದೇ ಆದರೆ ಪವಿತ್ರಾ ಗೌಡ ಏನೇನು ಬರೆಯಬಹುದು ಎನ್ನುವ ಬಗ್ಗೆ ಭಾರಿ ಚರ್ಚೆಶುರುವಾಗಿದೆ.

56
ದರ್ಶನ್​ ಒಪ್ಪಿಗೆ ಕೊಡ್ತಾರಾ?
Image Credit : Social Media

ದರ್ಶನ್​ ಒಪ್ಪಿಗೆ ಕೊಡ್ತಾರಾ?

ಅವರ ಬದುಕಿನಲ್ಲಿ ಬಹುದೊಡ್ಡ ಪಾಲು ದರ್ಶನ್​ ಜೊತೆಗಿನ ಒಡನಾಟದ್ದೇ ಇದೆ. ಬಳಿಕ ರೇಣುಕಾಸ್ವಾಮಿ ಎಂಟ್ರಿ, ಅಲ್ಲಿಂದ ಆಗಿದ್ದೇನು, ನಿಜಕ್ಕೂ ಅಂದು ನಡೆದದ್ದೇನು ಎಲ್ಲವನ್ನೂ ಧೈರ್ಯ ಮಾಡಿ ಬರೆಯುತ್ತಾರಾ ಪವಿತ್ರಾ ಗೌಡ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಹುಟ್ಟಿಕೊಂಡಿದೆ. ಇದ್ದದ್ದು ಇದ್ದ ಹಾಗೆ ಬರೆಯದೇ ಹೋದರೆ ಅದು ನಿಜವಾದ ಆತ್ಮಚರಿತ್ರೆ ಎನ್ನಿಸಲ್ಲ.ಹಾಗಿದ್ರೆ ಎಲ್ಲವನ್ನೂ ನಿಜವಾಗಿ ಬರೆಯಲು ದರ್ಶನ್​ ಅವರು ಅನುಮತಿ ಕೊಡುತ್ತಾರಾ ಎನ್ನುವ ಅತಿ ದೊಡ್ಡ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದ್ದು, ಇದು ಆತಂಕವನ್ನೂ ಸೃಷ್ಟಿಸುತ್ತಿದೆ.

66
ಕೋರ್ಟ್​ನಲ್ಲಿ ಇನ್ನೂ ವಿಚಾರಣೆ ಆಗಿಲ್ಲ
Image Credit : our own

ಕೋರ್ಟ್​ನಲ್ಲಿ ಇನ್ನೂ ವಿಚಾರಣೆ ಆಗಿಲ್ಲ

ಕೋರ್ಟ್​ನಲ್ಲಿ ಇನ್ನೂ ಅಂತಿಮ ವಿಚಾರಣೆ ಆಗಬೇಕಿದೆ. ತೀರ್ಪು ಹೊರಕ್ಕೆ ಬರಬೇಕಿದೆ. ಅದಕ್ಕೂ ಮುನ್ನವೇ ಎಲ್ಲ ಸತ್ಯವನ್ನೂ ಆತ್ಮಚರಿತ್ರೆಯಲ್ಲಿ ಬರೆಯುವುದು ಸುಲಭದ ಮಾತಲ್ಲ. ಅದಕ್ಕಾಗಿಯೇ ಅವರು ಈ ಧೈರ್ಯ ಮಾಡಿರುವ ಹಿಂದಿನ ಉದ್ದೇಶ ಏನಿರಬಹುದು ಎನ್ನುವ ಪ್ರಶ್ನೆ ಕಾಡುತ್ತಿದೆ. ಅಷ್ಟಕ್ಕೂ ಕೆಲ ತಿಂಗಳುಗಳಿಂದ ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಗೆಳೆತನದಲ್ಲಿ ಬಿರುಕು ಮೂಡಿದೆ ಎಂದೇ ಹೇಳಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಎಲ್ಲವನ್ನೂ ಹೇಳ್ತಾರಾ ಪವಿತ್ರಾ ಗೌಡ ಎಂದು ಸದ್ಯ ಕಾಲವೇ ಉತ್ತರ ಕೊಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ದರ್ಶನ್ ತೂಗುದೀಪ
ಪವಿತ್ರಾ ಗೌಡ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಕ್ರೈಮ್ ನ್ಯೂಸ್
ರೇಣುಕಾಸ್ವಾಮಿ ಪ್ರಕರಣ
Latest Videos
Recommended Stories
Recommended image1
ಅಬ್ಬಬ್ಬಾ.. ಸಿನಿಮಾ ನನ್ನ ಮೊದಲ ಪ್ರೀತಿ ಎನ್ನುವ ಕಿಚ್ಚ ಸುದೀಪ್ ಒಪ್ಪಿಕೊಂಡಿರುವ ಸಿನಿಮಾಗಳ ಸಂಖ್ಯೆ ಎಷ್ಟು?
Recommended image2
ಕನ್ನಡ ಚಿತ್ರಕ್ಕೆ ಎಂಟ್ರಿ ಕೊಟ್ಟ ನಟಿ ಐಶ್ವರ್ಯಾ ರಾಜೇಶ್.. ಈ ಪರಭಾಷೆ ಬೆಂಕಿ ಚೆಂಡು ಏನು ಅಂತ ಗೊತ್ತು ತಾನೆ?
Recommended image3
Rukmini Vasanth: ನಟಿ ರುಕ್ಮಿಣಿ ಫೇಕ್‌ ಅಶ್ಲೀಲ ವಿಡಿಯೋ ಪ್ರಕರಣ; ಸೈಬರ್ ಪೊಲೀಸರ ತನಿಖೇಲಿ ಶಾಕಿಂಗ್ ಮಾಹಿತಿ ರಿವೀಲ್!
Related Stories
Recommended image1
ಕೊಪ್ಪಳದ ಸೊಸೆ ಮೈಮೇಲೆ ಬಂದ ಮಾವನ ಆತ್ಮ! ಬೀಡಿ ಸೇಯುತ್ತಾ ದಂಗು ಬಡಿಸಿದ ಮಹಿಳೆ- ವಿಡಿಯೋ ವೈರಲ್
Recommended image2
ಅಶ್ಲೀಲ ಕಮೆಂಟಿಗರ ನಿದ್ದೆಗೆಡಿಸಿದ ವಿಜಯಲಕ್ಷ್ಮಿ ದರ್ಶನ್​: ಕಮೆಂಟ್​ ಹಾಕಿದವರಲ್ಲಿ ಶುರುವಾಯ್ತು ನಡುಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved