Karnataka News Live: ಅತ್ಯಂತ ದುಬಾರಿ ಕಾರು ಮುಖೇಶ್ ಅಂಬಾನಿಯವರದ್ದಲ್ಲ, ನೀತಾ ಅಂಬಾನಿಯದ್ದು?

ಬೆಂಗಳೂರು: ಕೆಲವರು ಹಿಂದುತ್ವಕ್ಕೆ ಕಂಟಕ ತರಬೇಕು, ದೇಗುಲಗಳಿಗೆ ಕೆಟ್ಟದ್ದು ಮಾಡಬೇಕೆಂದು ಪಿತೂರಿ ನಡೆಸುತ್ತಿದ್ದಾರೆ. ಅಪನಂಬಿಕೆ ಮೂಡಿಸುವ ಹುನ್ನಾರ ನಡೆದಿದೆ ಎಂದು ಹರಿಹರ ಪಂಚಮ ಸಾಲಿ ಪೀಠದ ವಚನಾ ನಂದ ಸ್ವಾಮೀಜಿ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿ, ಧರ್ಮಸ್ಥಳ ಪ್ರಕರಣ ಬಗ್ಗೆ ಹೆಚ್ಚು ಮಾಹಿತಿ ಇಲ್ಲ, ಆದರೆ, ಹಿಂದುತ್ವ ಜಗತ್ತಿನಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಈ ಭಯ ಕೆಲವರಿಗೆ ಕಾಡುತ್ತಿದೆ. ಹೀಗಾಗಿ ಷಡ್ಯಂತ್ರ ನಡೆಯುತ್ತಿದೆ ಎಂದಿದ್ದಾರೆ. ಇತ್ತ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕಿಡಿಗೇಡಿಗಳು ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಎಸ್ಐಟಿ ಮಾಡಿದ್ದೀರಿ. ಎಷ್ಟು ವರ್ಷ ಇರಿಸಿಕೊಳ್ಳುವಿರಿ? ಮೆಕ್ಕಾ ಮದೀನಾದಲ್ಲಿ ಈ ರೀತಿ ನಡೆದುಕೊಂಡಿದ್ದರೆ ಸುಮ್ಮನಿರ್ತಿದ್ರಾ? ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರಶ್ನೆ ಮಾಡಿದ್ದಾರೆ.
Karnataka News Live 10th August 2025 ಅತ್ಯಂತ ದುಬಾರಿ ಕಾರು ಮುಖೇಶ್ ಅಂಬಾನಿಯವರದ್ದಲ್ಲ, ನೀತಾ ಅಂಬಾನಿಯದ್ದು?
Karnataka News Live 10th August 2025 ಗವಿಸಿದ್ದಪ್ಪ ಹತ್ಯೆ ಖಂಡಿಸಿ ಪ್ರತಿಭಟನೆ, ಕೊಪ್ಪಳ ನಗರದ ಖಾಸಗಿ ಶಾಲೆಗೆ ನಾಳೆ ರಜೆ
ಹಿಂದೂ ಯುವಕ ಗವಿಸಿದ್ದಪ್ಪ ಹತ್ಯೆ ಖಂಡಿಸಿ ನಾಳೆ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಇದರ ಹಿನ್ನಲೆಯಲ್ಲಿ ಕೊಪ್ಪಳ ನಗರದ ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ.
Karnataka News Live 10th August 2025 ಉತ್ತರ ಕನ್ನಡ - ಅಬ್ಬರದ ಮಳೆಗೆ ಕವಲಗಿ ಹಳ್ಳದಲ್ಲಿ ಕೊಚ್ಚಿ ಹೋದ ಸಹೋದರರು!
Karnataka News Live 10th August 2025 ಕಾಂಗ್ರೆಸ್ ಪಕ್ಷದ ವಿದೇಶಾಂಗ ವ್ಯವಹಾರ ಮುಖ್ಯಸ್ಥ ಸ್ಥಾನಕ್ಕೆ ಆನಂದ್ ಶರ್ಮಾ ರಾಜೀನಾಮೆ
ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಪಕ್ಷದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಸ್ಥಾನಕ್ಕೆ ಹಿರಿಯ ನಾಯಕ ಆನಂದ್ ಶರ್ಮಾ ರಾಜೀನಾಮೆ ನೀಡಿದ್ದಾರೆ.
Karnataka News Live 10th August 2025 ಭಾರತದ ಅತ್ಯಂತ ದುಬಾರಿ ಕಾರು ಮುಖೇಶ್ ಅಂಬಾನಿಯವರದ್ದಲ್ಲ, ನೀತಾ ಅಂಬಾನಿಯದ್ದು! ಇದರ ಬೆಲೆ ಎಷ್ಟು ಕೋಟಿ ಗೊತ್ತಾ?
Karnataka News Live 10th August 2025 ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು, ಓರ್ವ ಗಂಭೀರ
ವೇಗವಾಗಿ ಸಾಗುತ್ತದ್ದ ಕಾರು ಮರಕ್ಕೆ ಢಿಕ್ಕಿ ಹೊಡೆದು ಭೀಕರ ಅಪಘಾತ ಸಂಭಿವಿಸಿದೆ. ಈ ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟರೆ, ಒರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
Karnataka News Live 10th August 2025 ಈ ಬಾರಿ ಅದ್ದೂರಿ ದಸರಾ ಮಾಡ್ತೇವೆ, ಕಳೆದ ವರ್ಷ 40 ಕೋಟಿ ಖರ್ಚಾಗಿತ್ತು, ಈ ಸಲ ಹೆಚ್ಚಾಗುತ್ತೆ - ಹೆಚ್ಸಿ ಮಹದೇವಪ್ಪ
Karnataka News Live 10th August 2025 ವಿಷ್ಣುವರ್ಧನ್ ಸಮಾಧಿ ನೆಲಸಮಕ್ಕೆ ಶೋಭಾ ಕರಾಂದ್ಲಾಜೆ ಅಸಮಾಧಾನ, ಸಂರಕ್ಷಣೆಗೆ ಸಿಎಂಗೆ ಪತ್ರ
ನಟ ವಿಷ್ಣುವರ್ಧನ್ ಸಮಾಧಿ ನೆಲೆಸಮಗೊಳಿಸುವ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣಾಗಿದೆ. ಹಲವು ಈ ಕುರಿತು ಪ್ರತಿಕ್ರಿಯೆಸಿದ್ದಾರೆ. ಇದೀಗ ಕೇಂದ್ರ ಸಚಿವ ಶೋಭಾ ಕರದ್ಲಾಂಜೆ ವಿಷ್ಣು ಸಮಾಧಿ ಉಳಿಸಿ, ಕಲಾ ಗ್ರಾಮವಾಗಿ ಅಭಿವೃದ್ಧಿಪಡಿಸಲು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
Karnataka News Live 10th August 2025 ರಾಹುಲ್ ಗಾಂಧಿಯವರು 'ಮತಗಳ್ಳತನ' ಆರೋಪ ಸಾಬೀತು ಮಾಡಿಯೇ ಮಾಡ್ತಾರೆ - ಸಂಸದೆ ಪ್ರಭಾ ಮಲ್ಲಿಕಾರ್ಜುನ್
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನದ ಆರೋಪ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಸತ್ಯ ಎಂದು ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ. ವೋಟರ್ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ದಾಖಲಾತಿ ಮತ್ತು ಡಬಲ್ ಹೆಸರುಗಳು ಕಂಡುಬಂದಿವೆ ಎಂದು ಅವರು ಆರೋಪಿಸಿದ್ದಾರೆ.
Karnataka News Live 10th August 2025 ಮೋದಿ ಉದ್ಘಾಟಿಸಿದ ಹಳದಿ ಮೆಟ್ರೋ ನಾಳೆಯಿಂದ ಸಂಚಾರ, ಟಿಕೆಟ್ ದರ,ರೈಲು ವೇಳಾಪಟ್ಟಿ
ಪ್ರಧಾನಿ ಮೋದಿ ಇಂದು ಬೆಂಗಳೂರಿನ ಹಳದಿ ಮೆಟ್ರೋ ಉದ್ಘಾಟನೆ ಮಾಡಿದ್ದಾರೆ. ನಾಳೆ ಬೆಳಗ್ಗೆಯಿಂದ ಹಳದಿ ಮೆಟ್ರೋ ಸಂಚಾರ ಆರಂಭಿಸುತ್ತಿದೆ. ರೈಲು ಸಮಯ, ನಿಲ್ದಾಣ, ಟಿಕೆಟ್ ದರ ಸೇರಿದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
Karnataka News Live 10th August 2025 ಮತಗಳ್ಳನ ಆರೋಪ, ಇಕ್ಕಟ್ಟಿಗೆ ಸಿಲುಕಿದ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯಿಂದ ನೋಟಿಸ್!
Karnataka News Live 10th August 2025 ಆಸ್ಪತ್ರೆ ಉದ್ಘಾಟನೆ ವೇಳೆ ಲಿಫ್ಟ್ನಲ್ಲಿ ಸಿಲುಕಿ ಪರದಾಡಿದ ಸಟಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾ ರೆಡ್ಡಿ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ತೆರಳಿದ್ದ ಸಚಿವ ರಾಮಲಿಂಗಾ ರೆಡ್ಡಿ ಲಿಫ್ಟ್ನಲ್ಲಿ ಸಿಲುಕಿದ ಘಟನೆ ನಡೆದಿದೆ.
Karnataka News Live 10th August 2025 'ಕೊಲೆ ಮಾಡಿ ನಮಾಜ್ ಮಾಡಿದ್ದಾರೆ..' ಕೊಪ್ಪಳ ಗವಿಸಿದ್ದಪ್ಪನ ಮನೆಗೆ ಭೇಟಿ ಕೊಟ್ಟ ಯತ್ನಾಳ್ರ ಮುಂದೆ ಪೋಷಕರು ಆಕ್ರೋಶ
ಕೊಪ್ಪಳದಲ್ಲಿ ಗವಿಸಿದ್ದಪ್ಪನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಕೆಎಸ್ ಈಶ್ವರಪ್ಪ ಅವರು ಗವಿಸಿದ್ದಪ್ಪನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
Karnataka News Live 10th August 2025 Amruthadhaare - ಭೂಮಿಕಾಳನ್ನು ಸಾಯಿಸಲು ಹೋಗಿ ಪಾರ್ಥನ ಜೀವ ಬಲಿ ಕೊಡ್ತಾಳಾ ಶಕುಂತಲಾ?
ಭೂಮಿಕಾ ಮತ್ತು ಮಗುವನ್ನು ಕೊಲ್ಲಿಸಲು ಅಪಘಾತ ಮಾಡಿಸುವ ಪ್ಲ್ಯಾನ್ ಮಾಡಿದ್ದಾರೆ ಜೈದೇವ್ ಮತ್ತು ಶಕುಂತಲಾ. ಈ ಪ್ಲ್ಯಾನ್ನಲ್ಲಿ ಅರಿಯದೇ ತನ್ನ ಸ್ವಂತ ಮಗ ಪಾರ್ಥನನ್ನೇ ಬಲಿ ಕೊಡ್ತಾಳಾ ಶಕುಂತಲಾ? ಏನಿದು ಅಮೃತಧಾರೆ ಸೀರಿಯಲ್ ಟ್ವಿಸ್ಟ್?
Karnataka News Live 10th August 2025 ಟ್ರಾಫಿಕ್ನಲ್ಲಿ ಸಿಲುಕಿದ ಆ್ಯಂಬುಲೆನ್ಸ್, ನೋವಿನಿಂದ ಕಿರುಚಾಡಿ ದಾರಿಯಲ್ಲೇ ಪ್ರಾಣ ಬಿಟ್ಟ ಮಹಿಳೆ
ಗಾಯಗೊಂಡ ಮಹಿಳೆಯನ್ನು ಆ್ಯಂಬುಲೆನ್ಸ್ ಮೂಲಕ ವೇಗವಾಗಿ ಸಾಗಿಸುವ ನಡುವೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದೆ. ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಡಲು ಸಾಧ್ಯಾಗದಷ್ಟು ಟ್ರಾಫಿಕ್. ಇತ್ತ ಗಾಯಗೊಂಡ ಮಹಿಳೆ ಕಿರುಚಾಡುತ್ತಲೇ ಆ್ಯಂಬುಲೆನ್ಸ್ನಲ್ಲೇ ಪ್ರಾಣಬಿಟ್ಟ ಘಟನೆ ನಡೆದಿದೆ.
Karnataka News Live 10th August 2025 'ಅನಾಮಿಕ ವ್ಯಕ್ತಿ ಹೇಳಿದ ತಕ್ಷಣ ನೆಲ ಅಗೆದು ಹುಡುಕಿದರಲ್ಲಾ, ಏನಾದರೂ ಸಿಕ್ಕೀತಾ?..' ಎಂಪಿ ರೇಣುಕಾಚಾರ್ಯ ಕಿಡಿ
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪದ ಬಗ್ಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯ ಹಿಂದೆ ಕಾಣದ ಕೈಗಳಿವೆ ಮತ್ತು ಇದು ಡಾ.ವೀರೇಂದ್ರ ಹೆಗ್ಗಡೆಯವರ ಘನತೆಗೆ ಧಕ್ಕೆ ತರುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.
Karnataka News Live 10th August 2025 ನಿಮ್ಮ ತಿಂಗಳ ವೇತನ ಉಳಿಸುವ ಸೂತ್ರಗಳು - ಹಣ ಉಳಿಸಿ, ಭವಿಷ್ಯ ರೂಪಿಸಿ
Karnataka News Live 10th August 2025 ಡಾ.ಬ್ರೋಗೆ ಸಿಕ್ಕಿತು ಹೆಂಗಸಿನ ಅಸ್ಥಿ ಪಂಜರ! ಎಳೆ ಎಳೆಯಾಗಿ ಬಿಚ್ಚಿಟ್ಟ ಅದರ ಮಾಹಿತಿ...
ಡಾ.ಬ್ರೋ ಅವರು ಕುತೂಹಲದ ಅಸ್ಥಿಪಂಜರದ ಮಾಹಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಎಲ್ಲಿಯದ್ದು ಇದು? ಇವರಿಗೆ ಸಿಕ್ಕಿದ್ದು ಹೇಗೆ?
Karnataka News Live 10th August 2025 'ಮತಗಳ್ಳತನ'ದ ಬಗ್ಗೆ ಪಕ್ಷಕ್ಕೆ ವಿರುದ್ಧವಾಗಿ ಹೇಳಿಕೆ; ಸಚಿವ ರಾಜಣ್ಣ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ!
ವೋಟರ್ ಐಡಿ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಸಚಿವ ರಾಜಣ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಮೇರೆಗೆ ಸುರ್ಜೇವಾಲರಿಗೆ ದೂರು ಸಲ್ಲಿಸಿದ್ದಾರೆ.
Karnataka News Live 10th August 2025 ಹೊಸ ದಾಖಲೆ ಬರೆದ ಮುಕೇಶ್ ಅಂಬಾನಿ, ವಿಶ್ವದಲ್ಲೇ ಇದೀಗ ಜಿಯೋ ನಂ.1 ಟೆಲಿಕಾಂ
ಮುಕೇಶ್ ಅಂಬಾನಿ ರಿಲಯನ್ಸ್ ಜಿಯೋ ಹೊಸ ದಾಖಲೆ ಬರೆದಿದೆ. ವಿಶ್ವದ ಘಟಾನುಘಟಿ ಟೆಲಿಕಾಂ ಆಪರೇಟರ್ ಹಿಂದಿಕ್ಕಿರುವ ರಿಲಯನ್ಸ್ ಜಿಯೋ ಇದೀಗ ನಂ.1 ಆಪರೇಟರ್ ಹೆಗ್ಗಳಿಕೆಗೆ ಪಾತ್ರವಾಗಿದೆ.