MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Amruthadhaare Serial: ಭೂಮಿಕಾಳನ್ನು ಸಾಯಿಸಲು ಹೋಗಿ ಪಾರ್ಥನ ಜೀವ ಬಲಿ ಕೊಡ್ತಾಳಾ ಶಕುಂತಲಾ?

Amruthadhaare Serial: ಭೂಮಿಕಾಳನ್ನು ಸಾಯಿಸಲು ಹೋಗಿ ಪಾರ್ಥನ ಜೀವ ಬಲಿ ಕೊಡ್ತಾಳಾ ಶಕುಂತಲಾ?

ಭೂಮಿಕಾ ಮತ್ತು ಮಗುವನ್ನು ಕೊಲ್ಲಿಸಲು ಅಪಘಾತ ಮಾಡಿಸುವ ಪ್ಲ್ಯಾನ್​ ಮಾಡಿದ್ದಾರೆ ಜೈದೇವ್​ ಮತ್ತು ಶಕುಂತಲಾ. ಈ ಪ್ಲ್ಯಾನ್​ನಲ್ಲಿ ಅರಿಯದೇ ತನ್ನ ಸ್ವಂತ ಮಗ ಪಾರ್ಥನನ್ನೇ ಬಲಿ ಕೊಡ್ತಾಳಾ ಶಕುಂತಲಾ? ಏನಿದು ಅಮೃತಧಾರೆ ಸೀರಿಯಲ್​  ಟ್ವಿಸ್ಟ್​? 

2 Min read
Suchethana D
Published : Aug 10 2025, 07:35 PM IST
Share this Photo Gallery
  • FB
  • TW
  • Linkdin
  • Whatsapp
19
ಶಕುಂತಲಾ ಮತ್ತು ಭೂಮಿಕಾ ನಡುವೆ ಸಮರ
Image Credit : instagram

ಶಕುಂತಲಾ ಮತ್ತು ಭೂಮಿಕಾ ನಡುವೆ ಸಮರ

ಸದ್ಯ ಅಮೃತಧಾರೆಯಲ್ಲಿ ಭೂಮಿಕಾ ಮತ್ತು ಶಕುಂತಲಾ ನಡುವೆ ಸಮರ ಶುರುವಾಗಿದೆ. ಶಕುಂತಲಾಗೆ ತಾನು ಸೋಲುವುದು ಖಚಿತವಾಗಿದೆ. ಭೂಮಿಕಾ ಬದುಕಿದ್ದರೆ ಅದು ತನ್ನ ಸರ್ವನಾಶ ಎನ್ನುವುದು ತಿಳಿದಿದೆ. ತಾನು ಏನೇ ಕುತಂತ್ರ ಮಾಡಿದರೂ, ಅದು ಗೌತಮ್​ಗೆ ತಿಳಿಯುವುದಿಲ್ಲ ಎನ್ನುವುದೂ ಅವಳಿಗೆ ಗೊತ್ತಾಗಿದೆ. ಏಕೆಂದರೆ ಗೌತಮ್​ ತನ್ನನ್ನು ಅಷ್ಟು ಕುರುಡಾಗಿ ನಂಬಿದ್ದಾನೆ ಎನ್ನುವುದು ಅವಳಿಗೆ ಗೊತ್ತು.

29
ಭೂಮಿಕಾ, ಮಗುವನ್ನು ಮುಗಿಸಲು ಶಕುಂತಲಾ ಪ್ಲ್ಯಾನ್​
Image Credit : instagram

ಭೂಮಿಕಾ, ಮಗುವನ್ನು ಮುಗಿಸಲು ಶಕುಂತಲಾ ಪ್ಲ್ಯಾನ್​

ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಶಕುಂತಲಾ ಭೂಮಿಕಾ ಮತ್ತು ಮಗುವನ್ನು ಕೊಲ್ಲುವ ಸಂಚು ಹೂಡಿದ್ದಾಳೆ. ಅತ್ತ ಗೌತಮ್​ಗೆ ಮಗಳು ಸಿಕ್ಕಿರುವ ಖುಷಿ ಇದೆ. ಪೊಲೀಸರು ಫೋನ್​ ಮಾಡಿ ಒಂದು ಮಗು ಸಿಕ್ಕಿದ್ದು ಅದು ನಿಮ್ಮದೇ ಇರಬಹುದು ಎಂದಿದ್ದಾರೆ. ಆ ಮಗು ಸಿಕ್ಕಿರುವುದರಿಂದ ಆನಂದ್​ ಜೊತೆ ಆತ ಅತ್ತ ಹೋಗುತ್ತಿದ್ದಂತೆಯೇ ಇತ್ತ ಶಕುಂತಲಾ ಜೈದೇವನ ಸಹಾಯ ಪಡೆದು ಇಬ್ಬರನ್ನೂ ಮುಗಿಸಲು ಸ್ಕೆಚ್​ ಹಾಕಿದ್ದಾಳೆ.

39
ಭೂಮಿಕಾ, ಮಗುವನ್ನು ಮುಗಿಸಲು ಶಕುಂತಲಾ ಪ್ಲ್ಯಾನ್​
Image Credit : instagram

ಭೂಮಿಕಾ, ಮಗುವನ್ನು ಮುಗಿಸಲು ಶಕುಂತಲಾ ಪ್ಲ್ಯಾನ್​

ಭೂಮಿಕಾ ಮತ್ತು ಮಗು ಆಸ್ಪತ್ರೆಗೆ ಹೋಗಲು ರೆಡಿಯಾಗಿದ್ದಾರೆ. ಡ್ರೈವರ್​ ಬಳಿ ಭೂಮಿಕಾ ಮಾತನಾಡುವುದನ್ನು ನೋಡಿದ ಶಕುಂತಲಾ ಜೈದೇವ್​ಗೆ ಕರೆ ಮಾಡಿ, ಆ್ಯಕ್ಸಿಡೆಂಟ್​ ಮಾಡಿಸಲು ಜೈದೇವ್​ ಜೊತೆ ಸ್ಕೆಚ್​ ಹಾಕಿದ್ದಾಳೆ. ಆದರೆ ಆಕೆ ಅತ್ತ ಹೋಗುತ್ತಿದ್ದಂತೆಯೇ ಇತ್ತ ಪಾರ್ಥ ಭೂಮಿಕಾಗೆ ತಾನು ಡ್ರೈವ್​ ಮಾಡಿಕೊಂಡು ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಭೂಮಿಕಾ ಬೇಡ ಎಂದರೂ ಕೇಳದೇ ನಾನೇ ಕರೆದುಕೊಂಡು ಹೋಗುವುದಾಗಿ ಹೇಳಿ ಡ್ರೈವರ್​ ಅನ್ನು ಬಿಟ್ಟು ತಾನು ಡ್ರೈವ್​ ಮಾಡಿದ್ದಾನೆ.

49
ಅರಿಯದೇ ಮಗನನ್ನು ಬಲಿಕೊಡಲು ಹೊರಟ ಶಕುಂತಲಾ
Image Credit : instagram

ಅರಿಯದೇ ಮಗನನ್ನು ಬಲಿಕೊಡಲು ಹೊರಟ ಶಕುಂತಲಾ

ಇದು ಶಕುಂತಲಾಗೆ ಗೊತ್ತಿಲ್ಲ. ಭೂಮಿಕಾ ಮತ್ತು ಮಗುವಿನ ಜೊತೆ ಡ್ರೈವರ್​ ಸತ್ತರೆ ಸಾಯಲಿ ಬಿಡು ಎಂದು ಹೇಳುತ್ತಲೇ ಆ್ಯಕ್ಸಿಡೆಂಟ್​ ಪ್ಲ್ಯಾನ್​ ಮಾಡಿಸಿದ್ದಾರೆ. ಲಾರಿಯೊಂದು ಬಂದು ಕಾರಿಗೆ ಗುದ್ದಿರುವ ಪ್ರೊಮೋ ಕೂಡ ಇದಾಗಲೇ ಅಪ್​ಲೋಡ್​ ಆಗಿತ್ತು. ಪಾರ್ಥನ ಜೀವ ಹೋಗತ್ತಾ, ಅಥವಾ ಡ್ರೈವಿಂಗ್​ ಮಾಡ್ತಿರೋದು ಪಾರ್ಥನೇ ಎಂದು ತಿಳಿದು ಅಪಘಾತವನ್ನು ಶಕುಂತಲಾ ಸ್ಟಾಪ್​ ಮಾಡಿಸ್ತಾಳಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

59
ಆ್ಯಕ್ಸಿಡೆಂಟ್​ ಆದರೆ ಮುಂದೇನು?
Image Credit : instagram

ಆ್ಯಕ್ಸಿಡೆಂಟ್​ ಆದರೆ ಮುಂದೇನು?

ಒಂದು ವೇಳೆ ಆ್ಯಕ್ಸಿಡೆಂಟ್​ ಆಗದೇ ಹೋದರೆ, ಲಾರಿ ಚಾಲಕನನ್ನು ಹಿಡಿದು ಥಳಿಸಿದರೆ ಆತ ಶಕುಂತಲಾ ಮತ್ತು ಜೈದೇವ್​ ಹೆಸರು ಹೇಳುತ್ತಾನೆ. ಅಲ್ಲಿಗೆ ಗೌತಮ್​ಗೆ ಎಲ್ಲಾ ವಿಷಯ ತಿಳಿಯುತ್ತೆ, ಅತ್ತ ಮಗಳು ಕೂಡ ಸಿಕ್ಕಿದ್ದಾಳೆ. ಹೀಗೆ ಆದರೆ ಸೀರಿಯಲ್​ ಒಂದೇ ವಾರದಲ್ಲಿ ಮುಗಿಯತ್ತೆ. ಆದರೆ ಆ್ಯಕ್ಸಿಡೆಂಟ್​ ಮಾಡಿಸಿ ಪಾರ್ಥ ಆಸ್ಪತ್ರೆಗೆ ಸೇರಿ... ಇನ್ನೇನೋ ಅವಾಂತರ ಆದರೆ ಮತ್ತಷ್ಟು ವರ್ಷ ಸೀರಿಯಲ್​ ಮುಂದುವರೆಯತ್ತದೆ.

69
ಸಹನೆ ಮಿತಿಮೀರಿ ಸಿಡಿದೆದ್ದ ಭೂಮಿಕಾ
Image Credit : instagram

ಸಹನೆ ಮಿತಿಮೀರಿ ಸಿಡಿದೆದ್ದ ಭೂಮಿಕಾ

ಅಷ್ಟಕ್ಕೂ ಭೂಮಿಕಾ, ಇಲ್ಲಿಯವರೆಗೆ ಎಲ್ಲವನ್ನೂ ಸಹಿಸಿಕೊಂಡಾಗಿದೆ. ಅತ್ತೆ ಶಕುಂತಲಾ ಎಂದ ಕುತಂತ್ರಿ ಎಂದು ಗೊತ್ತಿದ್ದರೂ ಭೂಮಿಕಾಗೆ ಏನೂ ಮಾಡಲು ಆಗದ ಸ್ಥಿತಿ. ಏಕೆಂದರೆ ಸಾಕಿರೊ ಅಮ್ಮನನ್ನು ಅಷ್ಟು ನಂಬಿದ್ದಾನೆ ಗೌತಮ್​. ಆದರೆ ಇದಾಗಲೇ ಶಕುಂತಲಾಳ ಬಣ್ಣ ಬಯಲಾಗಿದೆ. ಆದರೆ, ಅವಳಿಗೆ ಅವಳದ್ದೇ ಭಾಷೆಯಲ್ಲಿ ಭೂಮಿಕಾಗೆ ಹೇಳಬೇಕಿದೆ. ಮಗುವನ್ನು ಸಾಯಿಸಲು ಬಂದಿರೋ ವಿಷ್ಯ ತಿಳಿಯುತ್ತಲೇ ಅವಳು ಕೆಂಡಾಮಂಡಲ ಆಗಿದ್ದಾಳೆ. ಆದರೆ ಇದೀಗ ಶಕುಂತಲಾ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿದ್ದಾಳೆ.

79
ಗಂಡನ ಬಗ್ಗೆ ಮಾತನಾಡಿದ್ದಕ್ಕೆ ಭೂಮಿಕಾ ಗರಂ
Image Credit : instagram

ಗಂಡನ ಬಗ್ಗೆ ಮಾತನಾಡಿದ್ದಕ್ಕೆ ಭೂಮಿಕಾ ಗರಂ

ನಿನ್ನ ಗಂಡ ಗೌತಮ್​ ನಾನು ಸಾಕಿರೋ ನಾಯಿ, ಅವನಿಗೆ ನನ್ನ ವಿಷ್ಯ ನೀನು ಏನೇ ಹೇಳಿದ್ರೂ ನಂಬಲ್ಲ ಎಂದಿದ್ದಾಳೆ. ಗಂಡನ ಬಗ್ಗೆ ಈ ರೀತಿಯ ಮಾತು ಕೇಳಿ ಕೆಂಡಾಮಂಡಲವಾದ ಭೂಮಿಕಾ, ಅತ್ತೆಯ ಕೆನ್ನೆಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಶಕುಂತಲಾ ಗಡಗಡ ನಡುಗಿ ಹೋಗಿದ್ದಾಳೆ.

89
ಭೂಮಿಕಾ ತಿರುಗೇಟು
Image Credit : instagram

ಭೂಮಿಕಾ ತಿರುಗೇಟು

ತಿರುಗೇಟು ನೀಡಿದೋ ಭೂಮಿಕಾ, ಈಗ ಹೋಗಿ ನಿಮ್ಮ ಮಗನಿಗೆ ನಿನ್ನ ಹೆಂಡತಿ ನನಗೆ ಹೊಡೆದಳು ಎಂದು ಹೋಗಿ ಹೇಳಿ, ನಿಮ್ಮ ಮಾತನ್ನು ನಂಬ್ತಾರಾ ನೋಡಿ ಎಂದಿದ್ದಾಳೆ. ಅಡಕತ್ತರಿಯಲ್ಲಿ ಸಿಲುಕಿದ ಅನುಭವವಾಗಿದೆ ಶಕುಂತಲಾಗೆ. ಇದರಿಂದ ಆಕೆಯನ್ನೇ ಮುಗಿಸುವ ಪ್ಲ್ಯಾನ್​ ಮಾಡಿದ್ದಾಳೆ.

99
ಮುಂದೇನು?
Image Credit : instagram

ಮುಂದೇನು?

ಈ ಪ್ಲ್ಯಾನ್​ ಶಕುಂತಲಾಗೆ ತಿರುಗೇಟು ಆಗತ್ತಾ? ಗೌತಮ್​ಗೆ ಮಗಳು ಸಿಕ್ತಾಳಾ? ಸಿಕ್ಕಿರೋ ಮಗು ಅವರದ್ದೇನಾ? ಶಕುಂತಲಾ ಮುಂದಿನ ನಡೆ ಏನು? ಇಷ್ಟು ಕುತೂಹಲ ಸದ್ಯ ವೀಕ್ಷಕರಿಗೆ ಇದೆ. 

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀ ಕನ್ನಡ
ಅಮೃತಧಾರೆ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved